Wednesday, November 2, 2011

ಮತ್ತೆ ಕ್ಲಾಸ್ ರೂಮ್ ನತ್ತ ಹೆಜ್ಜೆ..

ಕಾಲೇಜು ಜೀವನ ಮುಗಿದು ನಾಲ್ಕು ವರ್ಷಗಳೇ ಕಳೆದಿವೆ.. ಆದ್ರೂ ಕಾಲೇಜಿನ ಬಗ್ಗೆ ಇರೋ ಮೋಹ, ಪ್ರೀತಿ ಇನ್ನೂ ಕಡಿಮೆಯಾಗಿಲ್ಲ. ಕಾಲೇಜು ಲೈಫೇ ಅಂತದ್ದೂ.. ಮನಸ್ಸಿಗೆ ಮುದ ನೀಡುವ ಸಂತಸದ ದಿನಗಳು.. ಮೆಲುಕು ಹಾಕುತ್ತಾ ಹೋದ್ರೆ ಮುಗಿಯಲಾರದಷ್ಟು ನೆನಪುಗಳು...

ಕಾಲೇಜು ಮುಗಿದಮೇಲೂ ಬಹುತೇಕ ಕ್ಲಾಸ್ ಮೇಟ್ಸ್ ಜೊತೆಗೆ ಸಂಪರ್ಕವಿತ್ತು. ಆದ್ರೆ ಬೆರಳೆಣಿಕೆಯ ಜನರು ಎಲ್ಲಿದ್ದಾರೋ ಗೊತ್ತಿಲ್ಲ. ಪ್ರತಿ ಬಾರಿ ಫ್ರೆಂಡ್ಸ್ ಫೋನ್ ಮಾಡಿದಾಗ್ಲೂ ಒಂದ್ಸಲ ಎಲ್ರೂ ಮೀಟ್ ಆಗೋಣ ಅಂತ ಹೇಳ್ತಿದ್ರು. ನಾಲ್ಕು ವರ್ಷಗಳಿಂದ ಎಲ್ರೂ ಒಂದೆಡೆ ಮೀಟ್ ಆಗ್ಬೇಕು ಅಂದ್ಕೊಂಡ್ರೂ ಆಗಿರಲಿಲ್ಲ. ಆದ್ರೆ ಇದೀಗ ಅದಕ್ಕೆ ಸಮಯ ಕೂಡಿ ಬಂದಿದೆ. ಬರೋಬ್ಬರಿ ನಾಲ್ಕು ವರ್ಷಗಳ ನಂತ್ರ, ಈ ಕೂಡುವಿಕೆಗೆ ಸಾಕ್ಷಿಯಾಗಲಿರೋ ಜಾಗ ಬೇರ್ಯಾವುದೂ ಅಲ್ಲ, ಅದೇ ಉಜಿರೆ..

ಒಟ್ಟು ಎರಡು ದಿನಗಳ ಪ್ರೋಗ್ರಾಂ ಚಾರ್ಟ್. ಡಿಸೆಂಬರ್ 25 ಭಾನುವಾರ. ಅಂದು ಎಲ್ರೂ ಉಜಿರೆಯಲ್ಲಿ ಒಟ್ಟಾಗಿ ಬಳಿಕ ಒಂದು ದಿನದ ಪಿಕ್ ನಿಕ್ ಗೆ ಹೋಗೋ ಪ್ಲಾನ್. ಎಲ್ಲಿಗೆ ಹೋಗೋದು ಅನ್ನೋದನ್ನು ಇನ್ನೂ ಡಿಸೈಡ್ ಮಾಡಿಲ್ಲ. ಅಕ್ಕಪಕ್ಕದ ಯಾವುದಾದ್ರೂ ಫಾಲ್ಸ್ ಗಳಿಗೆ ಹೋಗೋ ಚಿಂತನೆ ಇದೆ. ಎಲ್ಲರ ಜೊತೆಗೆ ಚರ್ಚಿಸಿ ಈ ಬಗ್ಗೆ ಫೈನಲ್ ಮಾಡಲಾಗುವುದು. ಬೆಳಿಗ್ಗೆಯಿಂದ ಸಂಜೆವರೆಗೆ ಜೊತೆಗಿದ್ದು ಬಳಿಕ ಉಜಿರೆಗೆ ಮರಳಿ ಸಾಧ್ಯವಾದ್ರೆ ಎಲ್ಲಾದ್ರೂ ಒಂದ್ಕಡೆ ಕ್ಯಾಂಪ್ ಫೈರ್ ಹಾಕೊಂಡು ಇರೋಕೆ ಎಲ್ಲರ ಒಪ್ಪಿಗೆ ಸಿಗ್ಬೇಕು.

ಡಿಸೆಂಬರ್ 26 ಸೋಮವಾರ. ಬಹುನಿರೀಕ್ಷಿತ ದಿನ. ಯಾಕಂದ್ರೆ ಅಂದು ನಾವೆಲ್ರೂ ಮತ್ತೆ ನಾಲ್ಕು ವರ್ಷದ ಹಿಂದಿನಂತೆ ಕಾಲೇಜಿಗೆ ಹೋಗ್ಬೇಕು. ಡಿಗ್ರಿಯಲ್ಲಿದ್ದಂತೆ ಕ್ಲಾಸ್ ರೂಮ್ ಗೆ ಹೋಗಿ ವಿದ್ಯಾರ್ಥಿಗಳಂತೆ ಕೂತ್ಕೋಬೇಕು. ಡಿಗ್ರಿಯಲ್ಲಿ ನಮಗೆ ಪಾಠ ಮಾಡ್ತಿದ್ದ ಉಪನ್ಯಾಸಕರೆಲ್ಲ ಬಂದು ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಮೋಸ್ಟ್ ಇಂಟರೆಸ್ಟಿಂಗ್ ಅಂದ್ರೆ, ಸ್ವತಃ ನಮ್ಮ ಪ್ರಿನ್ಸಿ ಯಶೋವರ್ಮ ಸರ್ ಸಹ ಬಂದು ಕ್ಲಾಸ್ ತಗೋತೀನಿ ಅನ್ನೋ ಭರವಸೆಯನ್ನು ಹಿಂದೆ ನೀಡಿದ್ದಾರೆ.



ಜೊತೆಗೆ ಭಾಸ್ಕರ್ ಹೆಗ್ಡೆ, ಶೈಲೇಶ್, ಬಿಪಿ ಸಂಪತ್, ಶಂಕರ್ ನಾರಾಯಣ್, ಸೂರ್ಯ ನಾರಾಯಣ್ ಸೇರಿದಂತೆ ನಮಗೆ ಪಾಠ ಮಾಡಿದ ಉಪನ್ಯಾಸಕರು ತರಗತಿಗೆ ಬರಲಿದ್ದಾರೆ. ಒಂದು ಗಂಟೆ ಪಾಠ ಮಾಡಲಿದ್ದಾರೆ. ಈ ವಿಚಾರದ ಬಗ್ಗೆ ಮಾತಾಡ್ತಿದ್ದಾಗ ಮೊನ್ನೆಯಷ್ಟೇ ಶೈಲೇಶ್ ಸರ್ ಒಂದು ಮಾತು ಕೇಳಿದ್ರು. ನೀವು ಮೊದ್ಲಿನ ಥರಾನೇ ಕೀಟಲೆ ಮಾಡ್ತೀರಾ ಅಂತ.. ನಾನದಿಕ್ಕೆ ಹೌದು ಅಂದಿದ್ದೆ. ಅದ್ಕೆ ಅವ್ರು ಹೇಳಿದ್ರು, ಹಾಗಾದ್ರೆ ನಾವು ಮೊದ್ಲಿನ್ ತರಾನೇ ಬೈದು ಕ್ಲಾಸ್ ನಿಂದ ಹೊರಗೆ ಹಾಕ್ತೀವಿ ಅಂತ... ತಮಾಷೆಗೆ ಹೇಳಿದ್ರಷ್ಟೇ.. ಆದ್ರೆ ಅದು ಏನೇ ಆಗ್ಲಿ, ಆ ಕ್ಷಣಗಳನ್ನು ಅನುಭವಿಸೋಕೆ ನಾವೆಲ್ಲ ತುದಿಗಾಲಲ್ಲಿ ನಿಂತಿದ್ದೀವಿ.

ಭಾಸ್ಕರ್ ಹೆಗ್ಡೆ ಸರ್ ಗೆ ಫೋನ್ ಮಾಡಿ ಈ ವಿಷಯ ಹೇಳಿದಾಗ ಅವ್ರು ಹೇಳಿದ್ರು, ನೀವು ಕಾಲೇಜಲ್ಲಿ ಹೊಸ ಟ್ರೆಂಡ್ ಸ್ಟಾರ್ಟ್ ಮಾಡ್ತೀರಾ ಅಂತ.. ಇದುವರೆಗೆ ನಮ್ಮ ಎಸ್ ಡಿ ಎಂ ಕಾಲೇಜಲ್ಲಿ ಇಂತಹ ಪ್ರಯೋಗ ಯಾರೂ ಮಾಡಿಲ್ಲ. ಹಾಗಾಗಿ ಇದು ಯಶಸ್ವಿಯಾದ್ರೆ ಅದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಕಾಲೇಜಿನ ಇತಿಹಾಸದ ಸುವರ್ಣಾಕ್ಷರಗಳಲ್ಲಿ ನಮ್ಮ ಸಾಧನೆ ಯಾವತ್ತಿಗೂ ಇರುತ್ತೆ.

ಪ್ರತಿಯೊಬ್ರೂ ಬಿಡುವು ಮಾಡ್ಕೊಂದು ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಸಾಧ್ಯವಾದಷ್ಟು ಪ್ರತಿಯೊಬ್ರಿಗೂ ಫೋನ್ ಮಾಡಿ 25 ಮತ್ತು 26ಕ್ಕೆ ಫ್ರೀ ಮಾಡೋಕೆ ಹೇಳಿದ್ದೀವಿ. ಎಷ್ಟು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಅನ್ನೋದೆ ಸದ್ಯದ ಪ್ರಶ್ನೆ.

ಕಾರ್ಯಕ್ರಮದ ಬಗ್ಗೆ ಏನೇ ಸಲಹೆ, ಅನಿಸಿಕೆ ಇದ್ರೂ ದಯವಿಟ್ಟು ನನಗೆ ಅಥವಾ ದಾಮುಗೆ ಫೋನ್ ಮಾಡಿ. 9980914181 ಅಥವಾ 9986046667- ಇದು ನನ್ನ ಫೋನ್ ನಂಬರ್. ದಾಮುಗೆ ಕರೆ ಮಾಡೋಕೆ 9916821201 ಗೆ ರಿಂಗ್ ಮಾಡಿ.. ಬದಲಾವಣೆಗಳಿದ್ದಲ್ಲಿ ಕೆಳಗಡೆ ಕಮೆಂಟ್ ಬಾಕ್ಸ್ ನಲ್ಲೂ ಬರೆದು ಹಾಕಬಹುದು....