Sunday, February 19, 2017

ಬಾಲ್ಯದ ನೆನಪುಗಳು 1...

ಈಗೀಗ ಎಲ್ಲೇ ಹೋಗ್ಬೇಕು ಅಂದ್ರೆ ಕಾರು, ಬೈಕ್ ಅಥವಾ ಆಟೋ ಮೊರೆ ಹೋಗ್ತೀವಿ. ಆದ್ರೆ ನಾವು ಸಣ್ಣವರಿದ್ದಾಗ ಬಹುತೇಕ ಎಲ್ರೂ ನಡ್ಕೊಂಡೇ ಹೋಗ್ತಾ ಇದ್ದಿದ್ದು. ಸಾಮಾನ್ಯವಾಗಿ ನಾಲ್ಕೈದು ಕಿಲೋ ಮೀಟರ್‌ಗಳನ್ನು ನಡ್ಕೊಂಡೇ ಹೋಗ್ತಿದ್ವಿ. ಅದು ಆಗ ತುಂಬಾ ದೂರ ಅಂತ ಅನ್ನಿಸ್ತಾನೂ ಇರ್ಲಿಲ್ಲ. ದೂರದ ಊರುಗಳಿಗೆ ಹೋಗ್ಬೇಕು ಅಂದ್ರೆ ಮಾತ್ರ ಬಸ್‌ಗಳನ್ನು ಅವಲಂಬಿಸ್ತಿದ್ವಿ. ಅದು ಬಿಟ್ಟು ಅಕ್ಕ ಪಕ್ಕದ ಊರುಗಳಿಗೆ ಹೋಗೋಕೆ ಜೀಪ್, ಟೆಂಪೋ, ಅಂಬಾಸಿಡರ್ ಕಾರುಗಳು.. ಒಂದರ್ಧ ಕಿಲೋ ಮೀಟರ್ ಉದ್ದಕ್ಕೆ ಹೊಗೆ ಬಿಡುವ ಕಪ್ಪು ಬಣ್ಣದ ಆಟೋ ರಿಕ್ಷಾಗಳು.. ಟೆಂಪೋದಲ್ಲಿ ಹೋಗ್ಬೇಕಂದ್ರೆ, ಜನ ಫುಲ್ ಆಗ್ಬೇಕು, ಅಷ್ಟೊತ್ತು ಕಾಯ್ಲೇ ಬೇಕು. ಆ ಟೆಂಪೋಗೊಬ್ಬ ಕಂಡಕ್ಟರ್.. ಟೆಂಪೋ ಸ್ಟಾರ್ಟ್ ಆಗಿಯೇ ನಿಂತಿರತ್ತೆ. ಆ ಕಂಡಕ್ಟರ್ ರೈಯಾ....... ಅಂತ ತನ್ನದೇ ಕೀರಲು ಧ್ವನಿಯಲ್ಲಿ ಕೂಗೋವರೆಗೆ ಟೆಂಪೋ ಮುಂದಕ್ಕೆ ಹೋಗೋದೇ ಇಲ್ಲ. ಇನ್ನು ಜೀಪ್ ಪ್ರಯಾಣವಂತೂ ಕೇಳೋದೇ ಬೇಡ.. ನಮ್ಮೂರಿನ ರಸ್ತೆಗಳಿಗೆ ಅಂತಹ ಜೀಪ್‌ಗಳು ಬೇಕೇ ಬೇಕಾಗಿತ್ತು. ಆ ಜೀಪ್‌ಗಳು ಯಾವ ಗುಡ್ಡ ಬೇಕಾದ್ರೂ ಹತ್ತಿ ಹೋಗ್ತಿತ್ತು.. ಸಣ್ಣಪುಟ್ಟ ತೋಡು, ನದಿ, ಮಣ್ಣು ರಸ್ತೆಯಲ್ಲಿನ ಕೆಸರು.. ಇದ್ಯಾವುದೂ ಆ ಜೀಪ್‌ಗಳಿಗೆ ಸಮಸ್ಯೆಯೇ ಆಗ್ತಿರ್ಲಿಲ್ಲ. ವಿಶೇಷ ಅಂದ್ರೆ ಒಂದು ಜೀಪ್‌ನಲ್ಲಿ ಕಡಿಮೆ ಅಂದ್ರೂ 15ರಿಂದ 20 ಜನ ಇರ್ತಿದ್ರು. ಆ ಡ್ರೈವರ್‌ನ ದೇಹದ ಅರ್ಧ ಭಾಗ ಜೀಪ್‌ನಿಂದಾಚೆ ಇರ್ತಿತ್ತು. ಆತನ ಬ್ಯಾಲೆನ್ಸ್ ಪೂರ್ತಿ ಆ ಜೀಪ್‌ನ ಸ್ಟೆಯರಿಂಗ್ ಮೇಲೆ ಇರ್ತಿತ್ತು.. ಜೀಪ್‌ನ ಎಡಬದಿಯ ಫೂಟ್‌ರೆಸ್ಟ್ ಬಳಿ ಎರಡು ಅಥವಾ ಮೂರು ಜನ ನಿಂತಿರ್ತಿದ್ರು. ಇನ್ನು ಹಿಂಭಾಗದಲ್ಲಿ ಐದು ಜನ ನಿಲ್ಲೋದು ಸಾಮಾನ್ಯವಾಗಿತ್ತು. ಬಸ್ ಇಲ್ಲ ಅಂತ ಗಂಟೆಗಟ್ಟಲೆ ಕಾದು ಕೊನೆಗೆ ಇಂತಹ ಜೀಪೋ, ಟೆಂಪೋದಲ್ಲಿ ಕಷ್ಟಪಟ್ಟು ಕೂತ್ಕೊಂಡು ಹೋಗೋವಾಗ ನಮ್ಮ ಪ್ರೀತಿಯ ಕೆಂಪು ಬಸ್‌ ಬರ್ತಿತ್ತು.. ಬಸ್‌ನ ಮೂತಿ ನೋಡಿದಾಗ ಅದು ನಮ್ಮ ಪರಿಸ್ಥಿತಿ ನೋಡಿ ವ್ಯಂಗ್ಯವಾಗಿ ನಕ್ಕಂಗೆ ಅನಿಸ್ತಿತ್ತು. ನನ್ನನ್ನು ಕಾಯೋಕಾಗ್ದೆ ಅರ್ಜೆಂಟಲ್ಲಿ ಹೋದ್ರಲ್ಲಾ, ಈಗ ಅನುಭವಿಸಿ ಅನ್ನೋ ಥರ ಇರ್ತಿತ್ತು ಆ ಕೆಂಪು ಬಸ್ಸಿನ ಲುಕ್... ಮಳೆಗಾಲದಲ್ಲಿ ಈ ಕೆಎಸ್‌ಆರ್‌ಟಿಸಿ ಬಸ್‌ಗಳು ದೇವರಿಗೆ ಪ್ರೀತಿ.. ಬಸ್‌ನ ಬಹುತೇಕ ಎಲ್ಲಾ ಕಡೆಯಲ್ಲೂ ಸೋರ್ತಿತ್ತು. ಕಿಟಿಕಿ ಪಕ್ಕದ ಸೀಟ್‌ನಲ್ಲಿ ಕೂತು ಕಿಟಕಿ ಹಾಕೊಂಡ್ರೂ ಜೋರು ಮಳೆಗೆ ನೀರು ಒಳಗಡೆ ಬರ್ತಿತ್ತು..
ಆಗೆಲ್ಲ ಮನೆಯಿಂದ ಪೇಟೆ, ಅಥವಾ ಪೇಟೆಯಿಂದ ಮನೆಗೆ ಹೋಗ್ಬೇಕಾದ್ರೆ ನಡ್ಕೊಂಡು ಹೋಗ್ತಿದ್ವಿ. ಆದ್ರೆ ಮಟ ಮಟ ಮಧ್ಯಾಹ್ನ ನಮ್ಮೂರಿನ ಬಿಸಿಲಲ್ಲಿ ನಡೀಬೇಕಾದ್ರೆ ನಿಮಿಷಕ್ಕೊಮ್ಮೆ ಹಿಂದೆ ತಿರುಗಿ ನೋಡ್ತಿದ್ವಿ. ಯಾರಾದ್ರೂ ಪರಿಚಿತರು ಗಾಡಿಯಲ್ಲಿ ಬರ್ತಾ ಇದ್ದಾರಾ ಅಂತ.. ಆಗ ಕೆಲವರೆಲ್ಲ ಬೈಕ್ ಅಥವಾ ಕಾರಿನಲ್ಲಿ ಬಂದ್ರೂ ನೋಡಿಯೂ ನೋಡದಂಗೆ ಹೋಗ್ತಿದ್ರು. ಇನ್ನೂ ಕೆಲವರು ನಿಲ್ಲಿಸಿ ನಮ್ಮನ್ನು ಕರ್ಕೊಂಡು ಹೋಗ್ತಿದ್ರು. ಹಾಗಾಗಿ ಸ್ಕೂಲ್‌ಗೆ ಹೋಗ್ತಿದ್ದಾಗ ಗಾಡಿ ಇರೋವ್ರನ್ನೆಲ್ಲ ಬೇಗ ಪರಿಚಯ ಮಾಡ್ಕೊಂಡು ಬಿಡ್ತಿದ್ವಿ. ನಡ್ಕೊಂಡು ಹೋಗೋದಿದ್ರೂ ಮೈನ್‌ ರೋಡ್‌ಗಿಂತ ಶಾರ್ಟ್‌ ಕಟ್‌ಗಳನ್ನೇ ಹೆಚ್ಚಾಗಿ ಬಳಸ್ತಿದ್ವಿ. ಯಾರದ್ದೋ ತೋಟದ ಮೂಲಕ, ಗದ್ದೆ ಬದಿಯ ಮೂಲಕ ನಮ್ಮದೇ ಲೋಕದಲ್ಲಿ ಏನೋ ಯೋಚನೆ ನಡ್ಕೊಂಡು ಹೋಗೋದು. 
ಸೈಕಲ್ ಓಡ್ಸೋಕೆ ಕಲಿಯೋದು ಹುಡುಗರಿಗೆ ಶಾಲಾ ದಿನದ ದೊಡ್ಡ ಟಾರ್ಗೆಟ್. ಈಗ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡ್ಕೊಳ್ಳುವಾಗ್ಲೂ ಅಷ್ಟು ಖುಷಿಯಾಗಲ್ಲ. ಆದ್ರೆ ಆಗ ಸೈಕಲ್ ಓಡ್ಸೋಕೆ ಕಲಿತು ಬಿಟ್ರೆ, ಜಗತ್ತನ್ನೇ ಗೆದ್ದು ಬಿಟ್ಟಂಗೆ.. 3 ರೂಪಾಯಿ ಕೊಟ್ರೆ ಒಂದು ಗಂಟೆ ಸೈಕಲ್ ಬಾಡಿಗೆಗೆ ಸಿಗ್ತಿತ್ತು. ಆ ಸೈಕಲ್ ಹೇಗಿತ್ತು ಅಂತ ಹೇಳೋದು ಕಷ್ಟ. ಆದ್ರೆ ಅದನ್ನು ಓಡ್ಸಿದವರಿಗೆ ಆ ಸೈಕಲ್‌ನ ಚಿತ್ರಣ ಕಣ್ಮುಂದೆ ಇರುತ್ತೆ.. ಪುಸ್ತಕ ತಗೊಳ್ಳೋಕೋ ಅಥವಾ ಇನ್ಯಾವುದಕ್ಕೋ ಅಪ್ಪ ಕೊಡ್ತಿದ್ದ ಹಣದಲ್ಲಿ 25, 50 ಪೈಸೆ ಉಳಿಸ್ತಾ 3 ರೂಪಾಯಿ ಆಗ್ತಿದ್ದಂಗೆ ಸೈಕಲ್ ಬಾಡಿಗೆಗೆ ತಗೊಂಡು ರೌಂಡ್ ಹೊಡಿಯೋಕೆ ಹೋಗ್ತಿದ್ವಿ. ಆ ಸೈಕಲ್‌ನಿಂದ ಅದೆಷ್ಟು ಸಲ ಬಿದ್ದಿದ್ದೀವಿ ಅನ್ನೋದಿಕ್ಕೆ ಲೆಕ್ಕನೇ ಇರಲ್ಲ.. ಆಗ ಬಹುತೇಕ ಎಲ್ಲರ ಮೊಣಕೈ ಮತ್ತು ಮೊಣಕಾಲಿನ ಮೇಲೆ ಚರ್ಮನೇ ಇರ್ತಿರ್ಲಿಲ್ಲ.. Funny but its true.. ಸಾಮಾನ್ಯವಾಗಿ ಇಬ್ರೂ ಅಥವಾ ಮೂವರು ಸೈಕಲ್ ಬಾಡಿಗೆಗೆ ಪಡ್ಕೊಂಡು ರೌಂಡ್ ಹೊಡಿಯೋಕೆ ಹೋಗ್ತಿದ್ವಿ. ತೀರಾ ಹಣ ಇಲ್ಲದೆ ಇದ್ದಾಗ ನಮ್ಮ ಮನೆಯದ್ದೋ ಅಥವಾ ಪಕ್ಕದ ತೋಟದ್ದೋ ಗೇರುಬೀಜ ಸಂಗ್ರಹಿಸಿ ಅದನ್ನು ಮಾರಾಟ ಮಾಡಿ, ಆ ಹಣದಲ್ಲಿ ಸೈಕಲ್ ಬಾಡಿಗೆಗೆ ತಗೊಳ್ಳೋಕೆ ಹೋಗಿದ್ದೂ ಉಂಟು.. ನಾವು ಆಗ ಸೈಕಲ್ ಮೇಲೆ ಕೂತು ಹೋಗ್ಬೇಕಾದ್ರೆ ಆ ಫೀಲ್, ಈಗಿನ ಯಾವ ಬುಲೆಟ್‌ ರೈಡ್‌ಗೂ ಕಡಿಮೆ ಇರ್ತಿರ್ಲಿಲ್ಲ. 
ಸಣ್ಣವರಿದ್ದಾಗ ಹಾಲಿನ ಹುಡಿ ತಿನ್ನೋದು ನಂಗಂತೂ ತುಂಬಾನೇ ಇಷ್ಟವಾಗಿತ್ತು. ಇದು ನಂಗೆ ಮಾತ್ರ ಅಲ್ಲ ಅನ್ಸತ್ತೆ.. ಎಲ್ರಿಗೂ ಆಗ್ತಿತ್ತೇನೋ.. ಮನೆಯಲ್ಲಿ ಅಮ್ಮ ಹಾಲಿನ ಹುಡಿಯ ಪ್ಯಾಕೆಟನ್ನು ಯಾವುದೋ ಡಬ್ಬಿಯಲ್ಲಿ ಇಡ್ತಿದ್ರು. ನೆಂಟ್ರು ಬಂದ್ರೆ ಮಾತ್ರ ಟೀ ಅಥವಾ ಕಾಫಿ ಮಾಡೋಕೆ ಅಂತ ನಮ್ಮ ಕಣ್ಣಿಗೆ ಕಾಣಿಸ್ಬಾರ್ದು ಅಂತ ಅದನ್ನು ಅಡಗಿಸಿ ಇಡ್ತಿದ್ರು. ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗ ನಮ್ಮ ಇನ್ವೆಸ್ಟಿಗೇಷನ್ ಸ್ಟಾರ್ಟ್ ಆಗ್ಗಿತ್ತು. ಆಪರೇಷನ್ ಮಿಲ್ಕ್ ಪೌಡರ್.. ಜಾಸ್ತಿ ತಿಂದ್ರೆ ಮತ್ತೆ ಅಮ್ಮ ಓಪನ್ ಮಾಡಿ ನೋಡಿದಾಗ ಗೊತ್ತಾಗತ್ತೆ ಅಂತ ಒಂದು ಸ್ಪೂನ್ ಮಾತ್ರ ಬಾಯಿಗೆ ಹಾಕ್ತಿದ್ವಿ. ಆದ್ರೆ ಒಂದು ಸ್ಪೂನ್ ತಿನ್ತಾ ಇದ್ದಂಗೆ ಇನ್ನೊಂದು ಸ್ಪೂನ್ ತಿನ್ನೋಣ ಅಂತ ಮನಸಾಗ್ತಿತ್ತು. ಹೀಗೆ ನಾಲ್ಕೈದು ಬಾರಿ ಆದಾಗ ಹಾಲಿನ ಹುಡಿ ಬಹುತೇಕ ಖಾಲಿ ಆಗ್ತಿತ್ತು. ಯಾವತ್ತಾದ್ರೂ ನೆಂಟ್ರು ಬಂದಾಗ ಟೀ ಮಾಡೋಣ ಅಂತ ಅಮ್ಮ ಅಡಗಿಸಿ ಇಟ್ಟಿದ್ದ ಹಾಲಿನ ಹುಡಿ ತೆಗೆದು ನೋಡಿದ್ರೆ ಅದ್ರಲ್ಲೇನೂ ಇರ್ತಿಲ್ಲಿಲ್ಲ.. ಆಮೇಲೇ ಬೈಗುಳ ಇದ್ದಿದ್ದೇ.. ಆಗ ಯಾವುದಾದ್ರೂ ಮಂಚದ ಮೂಲೆಯಲ್ಲಿ ಅಡಗಿ ಕೂತ್ಕೋತಿದ್ವಿ. 
ನೆಲ್ಲಿಕಾಯಿ ಮರ ಹುಡುಕ್ಕೊಂಡು ಹೋಗಿ, ನೆಲ್ಲಿಕಾಯಿ ಕಿತ್ತು ತಿಂದು ಆಮೇಲೆ ನೀರು ಕುಡಿಯುವಾಗ ಅದೆಷ್ಟು ಸಿಹಿ ಇರ್ತಿತ್ತು ಅಲ್ವಾ.. ಬೆಳ್ಳಂಬೆಳಗ್ಗೆ ಚಳಿಯನ್ನೂ ಲೆಕ್ಕಿಸದೆ ಕಾಡು ಮಾವಿನ ಮರದತ್ತ ಓಡಿ ಹೋಗಿ ಮಾವಿನ ಹಣ್ಣು ಹೆಕ್ಕೋದು.. ಆಮೇಲೆ ಅದ್ರ ಸೊನೆಯನ್ನು ಅದೇ ಮರಕ್ಕೆ ಮೆತ್ತಿಸಿ ಆ ಮಾವಿನ ಹಣ್ಣಿನ ರಸವನ್ನು ಹೀರೋದ್ರಲ್ಲಿ ತುಂಬಾನೇ ಟೇಸ್ಟ್ ಇತ್ತು. ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಬೆಳೆಯುವ ಚೆರಿ ಹಣ್ಣು ಕೆಂಪು ಬಣ್ಣಕ್ಕೆ ತಿರುಗ್ತಿದ್ದಂಗೆ ಬಾಯೊಳಗೆ ಹಾಕೊಳ್ತಿದ್ವಿ. ಹಲಸಿನ ಹಣ್ಣು ಮರದಿಂದ ಕೆಳಗೆ ಬಿದ್ರೆ ಅಲ್ಲೇ ಬುಡದಲ್ಲಿ ಕೂತು ತಿನ್ತಾ ಇದ್ವಿ. ಐಸ್ ಕ್ಯಾಂಡಿ ಮಾರೋಕೆ ಬರುವವರ ಸೈಕಲ್ ಗಂಟೆ ಸದ್ದು ಕೇಳಿಸಿದ್ರೆ ಸಾಕು.. ಮನೆಯಲ್ಲಿರೋ ಚಿಲ್ಲರೆಯನ್ನೆಲ್ಲ ಜಾಲಾಡ್ತಿದ್ವಿ. 25 ಪೈಸೆಗೆ ಕ್ಯಾಂಡಿ, 50 ಪೈಸೆಗೆ ಬೆಲ್ಲ ಕ್ಯಾಂಡಿ.. ವಿವಿಧ ಕಲರ್‌ಗಳಲ್ಲಿ ಬರ್ತಿದ್ದ ಲಾಲಿಯನ್ನು ಚಪ್ಪರಿಸಿದ್ದೇ ಚಪ್ಪರಿಸಿದ್ದು.. ಅದು ಖಾಲಿ ಆದ್ಮೇಲೂ ಪ್ಲಾಸ್ಟಿಕ್ ಕವರ್ ನೆಕ್ಕೋದು ಇದ್ದಿದ್ದೇ.. 
ಸ್ಕೂಲ್‌ನಲ್ಲಿ ಸಾಮಾನ್ಯವಾಗಿ ಏನಾದ್ರೂ ಅಸೈನ್‌ಮೆಂಟ್ ಬರ್ಕೊಂಡು ಬರೋಕೆ ಹೇಳ್ತಿದ್ರು. ಆದ್ರೆ ನಾವು ಹುಡುಗರು ಅದನ್ನೆಲ್ಲ ಬರ್ಕೊಂಡು ಬರ್ತಾ ಇದ್ದಿದ್ದು ಕಡಿಮೆ. ಕೆಲವೊಮ್ಮೆ ಕ್ಲಾಸ್‌ಗೆ ಬರುವ ಟೀಚರ್ ಸಹ ಅದನ್ನು ಮರೆತಿರ್ತಿದ್ರು. ಆದ್ರೆ ಈ ಗಾಂಧಿ ಪೀಸ್‌ಗಳು ಇದ್ದಾವಲ್ಲಾ.. especially ಹೆಣ್ಮಕ್ಕಳು.. ಸಾರ್.. ನೀವು ಅಸೈನ್‌ಮೆಂಟ್ ಬರ್ಕೊಂಡು ಬರೋಕೆ ಹೇಳಿದ್ರಿ ಅಂತ ರಾಗ ಎಳೀತಿದ್ರು. ಆಗ್ಲೇ ನೋಡಿ ನಮ್ಮ ಟೀಚರು ಆ ಹೆಣ್ಮಕ್ಕಳಿಗೆ ಶಹಬ್ಬಾಸ್‌ಗಿರಿ ನೀಡ್ತಾ ಅಸೈನ್‌ಮೆಂಟ್ ಬರೆಯದೆ ಬಂದವರೆಲ್ಲ ಎದ್ದು ನಿಂತ್ಕೊಳ್ಳಿ ಅಂತ ಹೇಳ್ತಿದ್ರು. ಕೊನೆಗೆ ನೋಡಿದ್ರೆ ಕೆಲವೇ ಕೆಲವರನ್ನು ಬಿಟ್ಟು ಉಳಿದವರೆಲ್ಲ ಎದ್ದು ನಿಂತ್ಕೋತಿದ್ರು. ನಾವಂತೂ ಎದ್ದು ನಿಲ್ಲೋದ್ರಲ್ಲಿ ಮಿಸ್ಸೇ ಇಲ್ಲ.. 
ಐದು ಅಥವಾ ಆರನೆಯ ಕ್ಲಾಸ್‌ನಲ್ಲಿ ಇರ್ಬೇಕು.. ನಂಗೆ ಗಣಿತದಲ್ಲಿ ಅರ್ಧ ಮಾರ್ಕ್ಸ್ ಸಿಕ್ಕಿತ್ತು. 25ರಲ್ಲಿ ಅರ್ಧ ಮಾರ್ಕ್ಸ್.. ಆ ದಿನ ನಾನು ಬೈಸ್ಕೊಂಡಿದ್ದನ್ನು ಮರೆಯೋಕಾಗಲ್ಲ. ಕೊನೆಗೆ ಮನೆಯಿಂದ ಯಾರನ್ನಾದ್ರೂ ಕರ್ಕೊಂಡು ಬರೋಕೆ ಹೇಳಿದ್ರು. ದುರಂತ ಅಂದ್ರೆ ಸಂಜೆ ಉತ್ತರ ಪತ್ರಿಕೆಯೊಂದಿಗೆ ಮನೆಗೆ ಹೋಗಿದ್ದೆ. ಆದ್ರೆ ಆ ಉತ್ತರ ಪತ್ರಿಕೆ ಎಲ್ಲೋ ಕಳ್ದೋಗಿತ್ತು. ಮರುದಿನ ಅಮ್ಮನನ್ನು ಕರ್ಕೊಂಡು ಸ್ಕೂಲ್‌ಗೆ ಹೋಗಿದ್ದೆ. ನಮ್ಮ ಗಣಿತದ ಮೇಷ್ಟ್ರು ಅಮ್ಮನ ಮುಂದೆ ನಂಗೆ ಉಗ್ದು ಉಪ್ಪಿನಕಾಯಿ ಹಾಕಿದ್ರು. ಮನೆಗೆ ಹೋದ್ಮೇಲೆ ಅಮ್ಮ ನಡೆದಿದ್ದನ್ನೆಲ್ಲ ಅಪ್ಪನ ಬಳಿ ಹೇಳಿದ್ರು. ಆಗ ಅಪ್ಪನ ಕಡೆಯಿಂದನೂ ಮಂಗಳಾರತಿ ಆಗಿತ್ತು. ಜೊತೆಗೆ ಬೆತ್ತದ ರುಚಿಯೂ..
ಆ ಟೈಮ್‌ನಲ್ಲಿ ಯಾರದ್ದಾದ್ರೂ ಮನೆಯಲ್ಲಿ ಬೋರೆವೆಲ್‌ ಕೊರೆಯುತ್ತಾ ಇದ್ರೆ ನಾವು ಬೆಳಿಗ್ಗೆಯಿಂದ ಸಂಜೆವರೆಗೂ ಅಲ್ಲೇ ಇರ್ತಿದ್ವಿ. ಆಗೆಲ್ಲ 300-400 ಅಡಿಗೆಲ್ಲ ನೀರು ಸಿಗ್ತಿತ್ತು. ಬೋರೆವೆಲ್ ಕೊರೆದು ನೀರು ಸಿಗ್ತಿದ್ದಂಗೆ ಪೈಪ್ ಮೂಲಕ ನೀರು ಮೇಲಕ್ಕೆ ಹಾರೋದನ್ನು ನೋಡೋದೇ ಕಣ್ಣಿಗೆ ಹಬ್ಬವಾಗಿತ್ತು. ಇನ್ನು ಎಲ್ಲಾದ್ರೂ ಜೆಸಿಬಿ ಕೆಲಸ ಮಾಡ್ತಿದ್ರೆ ಅದನ್ನು ನೋಡ್ತಾ ನಿಲ್ಲೋದೇ ಕೆಲಸ. ಜೆಸಿಬಿ ಮಣ್ಣು ತೆಗೆಯೋದನ್ನು ಎಷ್ಟು ನೋಡಿದ್ರೂ ಸಾಕಾಗ್ತಾ ಇರ್ಲಿಲ್ಲ. ಮನೆಗೆ ಬಂದ್ಮೇಲೆ ಬಲಗೈಯಲ್ಲಿ ಜೆಸಿಬಿ ರೀತಿಯಲ್ಲೇ ಮಣ್ಣು ತೆಗಿಯೋಕೆ ನೋಡ್ತಿದ್ವಿ. ಅದೂ ಒಂದು ರೀತಿಯ ಆಟ. ಲಕ್ಷದೀಪೋತ್ಸವ ಮತ್ತಿತರ ಜಾತ್ರೆ ವೇಳೆ ಪ್ಲಾಸ್ಟಿಕ್‌ನ ಆಟಿಕೆ ಜೆಸಿಬಿಯನ್ನು ಖರೀದಿ ಮಾಡುವಂತೆ ಅಪ್ಪನಿಗೆ ದುಂಬಾಲು ಬೀಳೋದು, ಅಪ್ಪ ಬೈಯೋದು.. ಜಾತ್ರೆಗೆ ಗೆಳೆಯರ ಜೊತೆಗೆ ಸುಮ್ಮನೆ ಸುತ್ತಾಡೋದು.. ಸಂಜೆಯಿಂದ ಮಧ್ಯರಾತ್ರಿ ವರೆಗೆ. ಜೇಬಲ್ಲಿ ಒಂದು ರೂಪಾಯಿಯೂ ಇರ್ತಿರ್ಲಿಲ್ಲ. ಇರೋ ಬರೋ ಸ್ಟಾಲ್‌ಗಳ ಬ್ರೌಷರ್‌ಗಳನ್ನು ತಗೊಂಡು ಜೇಬಲ್ಲಿ ಇಟ್ಕೋತಿದ್ವಿ. ಮಧ್ಯರಾತ್ರಿ ವರೆಗೆ ಸುತ್ತಾಡಿ ಕಾಲು ಸೋತ ಮೇಲೆ ಮನೆ ಕಡೆ ಹೆಜ್ಜೆ ಹಾಕೋದು. ಐದು ದಿನ ಜಾತ್ರೆ ಇದ್ರೆ, ಐದೂ ದಿನ ಸುತ್ತಾಡ್ತಿದ್ವಿ. ಈ ಐದು ದಿನದಲ್ಲಿ ಯಾವತ್ತೋ ಒಂದು ದಿನ ಅಪ್ಪನ ಬಳಿ ಕಾಡಿ ಬೇಡಿ ತಗೊಂಡ 10-20 ರೂಪಾಯಿಯಲ್ಲಿ ಐಸ್‌ಕ್ರೀಮ್ ಅಥವಾ ಗೋಬಿ ಮಂಚೂರಿ ತಿಂದ್ರೆ ಅದೇ ದೊಡ್ಡ ವಿಷ್ಯ. 
ಅಂದ ಹಾಗೆ ಇವೆಲ್ಲ ಬಹುತೇಕ ಪ್ರಾಥಮಿಕ ಶಾಲೆಯ ದಿನದ ನೆನಪುಗಳು..

ಬಾಲ್ಯದ ನೆನಪುಗಳು..

ವೃತ್ತಿ ಜೀವನ ಆರಂಭವಾಗಿ 10 ವರ್ಷಗಳು ಆಗ್ತಾ ಬಂತು.. ಅಪರೂಪಕ್ಕೊಮ್ಮೆ ಬಿಡುವು ಸಿಕ್ಕಾಗ ಹಳೆಯ ದಿನಗಳೆಲ್ಲ ನೆನಪಾಗುತ್ತೆ.. Especially ಶಾಲೆಗೆ ಹೋಗ್ತಿದ್ದ ದಿನಗಳು.. ಆ ದಿನಗಳು ಇನ್ನೆಂದಿಗೂ ಮರಳಿ ಬರಲ್ಲ.. ಈಗಿನ ಮಕ್ಕಳಿಗೆ ಆ ದಿನಗಳು ಸಿಗೋದೂ ಇಲ್ಲ.. ಆದ್ರೆ ಈಗ ಆ ದಿನಗಳನ್ನು ನೆನೆಸಿಕೊಳ್ಳೋದೆ ಒಂಥರಾ ಖುಷಿ..
ಮನೆಯಲ್ಲಿ ನನ್ನ ಕಾಟ ತಡೆಯೋಕಾಗ್ದೆ ಒಂದು ವರ್ಷ ಮೊದ್ಲೇ ಅಂಗನವಾಡಿಗೆ ಸೇರಿಸಿದ್ರು. ಅಂಗನವಾಡಿ ಮನೆಯಿಂದ ತುಂಬಾ ಹತ್ತಿರ ಇತ್ತು. ಆಗ ನಮ್ಮ ಅಂಗನವಾಡಿಯಲ್ಲಿ ಜಾನಕಿ ಟೀಚರ್ ಪಾಠ ಮಾಡ್ತಿದ್ರು. ಚಡ್ಡಿ ಹಾಕೊಂಡು ಅಂಗನವಾಡಿಗೆ ಹೋಗ್ತಿದ್ದ ದಿನಗಳು.. ಹೆಚ್ಚಾಗಿ ಅಮ್ಮನೇ ನನ್ನನ್ನು ಅಂಗನವಾಡಿಗೆ ಕರ್ಕೊಂಡು ಹೋಗ್ತಾ ಇದ್ದಿದ್ದು. ಒಮ್ಮೊಮ್ಮೆ ಅಪ್ಪ.. ಅಂಗನವಾಡಿ ಸಮೀಪವೇ ಇದ್ದ ಥಾಮಸ್ ಅವರ ಮಿಠಾಯಿ ಅಂಗಡಿ. 5 ಪೈಸೆಗೆ ಸಿಗ್ತಾ ಇದ್ದ ಮಿಠಾಯಿ ಮುಂದೆ ಈಗಿನ ಯಾವ ಚಾಕ್ಲೇಟುಗಳೂ ಸಾಠಿಯಾಗಲ್ಲ. ಆಗ ಅಂಗನವಾಡಿಯಲ್ಲಿ ಮಧ್ಯಾಹ್ನ ಉಂಡೆ ಕೊಡ್ತಿದ್ರು. ಅದ್ರ ಹೆಸ್ರು ಮರ್ತೋಗಿದೆ.. ಬಟ್ ಅದ್ರ ರುಚಿ ಮಾತ್ರ ಇನ್ನೂ ಬಾಯಲ್ಲಿ ನೀರೂರಿಸುತ್ತೆ. ಪ್ಯಾಕೆಟ್ ರೂಪದಲ್ಲಿ ಬರ್ತಿದ್ದ ಹುಡಿಯನ್ನು ಅಂಗನವಾಡಿಯ ಆಯಾ, ದೊಡ್ಡದೊಂದು ಪಾತ್ರೆಯಲ್ಲಿ ಹಾಕಿ, ಅದಕ್ಕೊಂಚೂರು ನೀರು ಮಿಕ್ಸ್ ಮಾಡಿ ಉಂಡೆ ಮಾಡ್ತಿದ್ರು. ಒಬ್ಬರಿಗೆ ಸಾಮಾನ್ಯವಾಗಿ ಎರಡು ಉಂಡೆ ಸಿಗ್ತಿತ್ತು. ಕೆಲವೊಮ್ಮೆ ಅಂಗನವಾಡಿಯ ಸ್ಟೋರ್ ರೂಮ್‌ನಲ್ಲಿ ಪ್ಯಾಕೆಟ್‌ನಲ್ಲಿ ಮಿಕ್ಕಿದ ಹುಡಿಯನ್ನು ನಾವು ಅಂಗೈಗೆ ಹಾಕೊಂಡು ತಿನ್ತಿದ್ವಿ. ಆಗ ಆ ಹುಡಿ ಕೆನ್ನೆಯ ತುಂಬೆಲ್ಲಾ ಇರ್ತಿತ್ತು...
ಅಂಗನವಾಡಿ ಬಳಿಕ ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದ ಮುಂಡ್ರುಪ್ಪಾಡಿ ಶಾಲೆಯಲ್ಲಿ ನನ್ನ ಒಂದನೇ ತರಗತಿ ವ್ಯಾಸಂಗ. ನಾಲ್ಕು ಕಿಲೋಮೀಟರ್ ನಡ್ಕೊಂಡು ಹೋಗೋದು ಆಗ ತುಂಬಾ ಕಷ್ಟ ಆಗ್ತಿತ್ತು. ಮಳೆಗಾಲದಲ್ಲಂತೂ ಕೈಯಲ್ಲೊಂದು ಕೊಡೆ ಹಿಡ್ಕೊಂಡು ಬ್ಯಾಗ್ ಒದ್ದೆಯಾಗದಂತೆ ಹೋಗೋದು ಪ್ರಯಾಸದ ಕೆಲಸ. ಅದು ಕಾಲು ಬೆಂಡಾಗಿರುವ ಉದ್ದದ ಕೊಡೆ. ಅಲ್ಲಲ್ಲಿ ಸೋರ್ತಿತ್ತು. ಹಾಗಾಗಿ ಮನೆಯಿಂದ ಹೊರಡುವಾಗ್ಲೇ ಅಮ್ಮ ಪ್ಲಾಸ್ಟಿಕ್ ಕವರೊಂದನ್ನು ತಲೆ ಮೇಲೆ ಕಟ್ತಿದ್ರು. ಕೊಡೆ ಸೋರಿದ್ರೂ, ತಲೆ ಮೇಲೆ ನೀರು ಬೀಳ್ಬಾರ್ದು ಅಂತ.. ಇನ್ನು ಬೆನ್ನಿಗೆ ಬಟ್ಟೆಯ ಬ್ಯಾಗ್. ಅದರೊಳಗೊಂದು ಉದ್ದದ ಬುತ್ತಿ.. ಅದಕ್ಕೊಂದು ಅರ್ಧ ವರ್ತುಲಾಕಾರದ ಪುಟ್ಟ ಹಿಡಿ.. ಸಾಮಾನ್ಯವಾಗಿ ಆ ಬುತ್ತಿಯಲ್ಲಿ ಅನ್ನ ಅಥವಾ ಗಂಜಿ ಇರ್ತಿತ್ತು. ಶಾಲೆಗೆ ಹೋಗ್ತಾ ಪಾಪಚ್ಚಣ್ಣನ ಅಂಗಡಿಯಿಂದ 25 ಪೈಸೆಯ ಉಪ್ಪಿನಕಾಯಿ ಪ್ಯಾಕೆಟ್ ತಗೊಂಡು ಹೋಗ್ತಿದ್ದೆ. ಇನ್ನು ಆ ಬ್ಯಾಗ್‌ ಒಳಗೆ ಬೆರಳೆಣಿಕೆಯ ಪುಸ್ತಕಗಳು.. ಮರದ ಪಟ್ಟಿಯಿಂದ ಕೂಡಿದ ಒಂದು ಸ್ಲೇಟ್.. ಸ್ಲೇಟ್ ಒರೆಸಲು ಹಿತ್ತಲಲ್ಲಿ ಬೆಳೆಯುವ ಅದ್ಯಾವುದೋ ಗಿಡದ ಕಡ್ಡಿ.. ಪುಟ್ಟ ಬಿಳಿ ಮತ್ತು ಕಂದು ಬಣ್ಣದ ಪುಟ್ಟ ಚಾಕ್‌ನಲ್ಲಿ ಒಮ್ಮೆ ಬರೆದ ಮೇಲೆ, ಆ ಕಡ್ಡಿಯಿಂದ ಅದನ್ನು ಒರೆಸ್ತಿದ್ವಿ. ಆಗ ಕೆಲವರು ಪ್ಲಾಸ್ಟಿಕ್ ಸ್ಲೇಟ್ ತರ್ತಿದ್ರು. ನಮ್ಮ ಪಾಲಿಗೆ ಅವರೆಲ್ಲ ಶ್ರೀಮಂತರ ಮನೆಯ ಮಕ್ಕಳು.. ಮುಂಡ್ರುಪ್ಪಾಡಿಯ ಆ ಶಾಲೆಗೆ ಹೋಗುವಾಗ ಒಂದು ನೀರಿನ ಹಳ್ಳ ಬರ್ತಿತ್ತು. ನಾವದನ್ನು ತೋಡು ಅಂತ ಕರೀತಿದ್ವಿ. ಈ ತೋಡು ದಾಟಲು ಅಡಿಕೆ ಮರದ ಸೇತುವೆ.. ಅಡಿಕೆ ಮರದ ಸೇತುವೆ ಅಂತ ಗಾಬರಿಯಾಗ್ಬೇಡಿ.. ಅಡಿಕೆ ಮರವನ್ನು ಎರಡು ಅಥವಾ ನಾಲ್ಕು ಭಾಗ ಮಾಡ್ತಾರೆ. ಬಳಿಕ ಅದರ ಹೊರಭಾಗ ಮೇಲ್ಭಾಗದಲ್ಲಿ ಬರುವಂತೆ ಇಟ್ಟು ನಾಲ್ಕೈದು ಕಡೆ ಹಗ್ಗದಿಂದ ಕಟ್ತಾರೆ. ಇದು ಸಾಮಾನ್ಯವಾಗಿ 30 ರಿಂದ 40 ಅಡಿ ಉದ್ದ ಇರುತ್ತೆ. ಇದನ್ನೇ ತೋಡಿನ ಎರಡೂ ಕಡೆಯ ದಡಕ್ಕೆ ಮುಟ್ಟುವಂತೆ ಹಾಕಿರ್ತಾರೆ. ಈ ಎರಡೂ ಬದಿಯಲ್ಲಿ ಒಂದು ಮರದ ಕಂಬ ನೆಟ್ಟು, ಈ ಸೇತುವೆಗೆ ಹೊಂದಿಕೊಂಡಂತೆ ಉದ್ದಕ್ಕೆ ಹಗ್ಗ ಕಟ್ತಾರೆ. ಸೇತುವೆ ಮೇಲೆ ನಡೆದುಕೊಂಡು ಹೋಗುವವರು ಕೆಳಗೆ ಬೀಳದಂತೆ ಸಪೋರ್ಟೀವ್ ಆಗಿರ್ಲಿ ಅಂತ.. ಕೈಯಲ್ಲೊಂದು ಕೊಡೆ ಹಿಡ್ಕೊಂಡು, ಬೆನ್ನ ಮೇಲೆ ಬ್ಯಾಗ್ ಹಾಕೊಂಡು ಜೋರು ಮಳೆಯಲ್ಲಿ ಆ ಸೇತುವೆ ಮೇಲೆ ನಡೆಯೋಕೆ ಭಯ ಆಗ್ತಿತ್ತು. ಯಾಕಂದ್ರೆ ಅಡಿಕೆ ಮರದ ಸೇತುವೆ ಮೇಲೆ ನೀರು ಬಿದ್ದಾಗ ಅದು ಜಾರಲು ಶುರುವಾಗ್ತಿತ್ತು. ಆಗೆಲ್ಲ ಚಪ್ಪಲಿ ಹಾಕ್ತಾನೇ ಇರ್ಲಿಲ್ಲ. ಬರಿಗಾಲಲ್ಲೇ ಓಡಾಡ್ತ ಇದ್ದಿದ್ರಿಂದ ಸೇತುವೆ ಮೇಲೆ ಬ್ಯಾಲೆನ್ಸ್ ಮಾಡ್ಕೊಂಡು ಹೋಗ್ತಿದ್ವಿ. ಸಾಮಾನ್ಯವಾಗಿ ಮಳೆಗಾಲದಲ್ಲಿ ಆ ಸೇತುವೆ ಸಮೀಪದ ಮನೆಯ ಹಿರಿಯರು ಯಾರಾದ್ರೂ ಶಾಲೆಗೆ ಹೋಗುವ ಮಕ್ಕಳನ್ನು ಸೇತುವೆ ದಾಟಿಸೋಕೆ ಅಂತನೇ ಅಲ್ಲಿ ನಿಂತಿರ್ತಿದ್ರು.. ಮಳೆ ಅಂದ್ರೆ ಸುಮ್ಮನೆ ಒಂದರ್ಧ ಗಂಟೆ ಬಂದು ಹೋಗುವಂತದ್ದಾಗಿರ್ಲಿಲ್ಲ.. ರಾತ್ರಿ ವೇಳೆ ಶುರುವಾಗುವ ಮಳೆ ಸತತವಾಗಿ ಎರಡು ಮೂರು ದಿನ ಸುರಿಯುತ್ತಿತ್ತು. ಕೆಲವೊಮ್ಮೆ ಆ ಮಳೆಗೆ ನಮ್ಮ ಅಡಿಕೆ ಮರದ ಸೇತುವೆ ಸಹ ಮುಳುಗುತ್ತಿದ್ದರಿಂದ ಎಷ್ಟೋ ಬಾರಿ ಶಾಲೆಗೆ ಹೊರಟವರು ವಾಪಾಸ್ ಮನೆಗೆ ಹೋಗಿದ್ದೂ ಉಂಟು. ಆ ದಿನ ನನ್ನ ಖುಷಿಗೆ ಪಾರವೇ ಇರ್ತಿರ್ಲಿಲ್ಲ..
ಒಂದನೇ ತರಗತಿ ಮುಗಿಯುತ್ತಿದ್ದಂಗೆ ನನ್ನ ಶಾಲೆ ಬದಲಾಯ್ತು. ಧರ್ಮಸ್ಥಳದಲ್ಲಿರುವ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗೆ ಸೇರ್ಪಡೆಗೊಂಡೆ. ಮನೆಯಿಂದ ಶಾಲೆಗೆ ಸುಮಾರು 2 ಕಿಲೋ ಮೀಟರ್. ಆಗ್ಲೂ ನಡ್ಕೊಂಡೇ ಹೋಗಿ ಬರ್ತಾ ಇದ್ದಿದ್ದು. ಆದ್ರೆ ಜೊತೆಗೆ ಗೆಳೆಯರು ತುಂಬಾ ಮಂದಿ ಇದ್ರು. ಅದರಲ್ಲಿ ಚೇತನ್ ಸಹ ಒಬ್ಬ.. ಅಂಗನವಾಡಿಯಿಂದ ಶುರುವಾದ ನಮ್ಮ ಸ್ನೇಹ ಇನ್ನೂ ಹಾಗೇ ಇದೆ.. 29 ವರ್ಷ ಕಳೆದರೂ.. ನಮ್ಮ ಜೊತೆಗೆ ಇನ್ನೂ ಹಲವಾರು ಮಂದಿ ಗೆಳೆಯರಿದ್ರು.. ಬಹುತೇಕ ನಾವೆಲ್ಲರೂ ನೆರೆಹೊರೆಯವರೇ.. ಹಾಗಾಗಿ ಶಾಲೆಗೆ ಹೋಗಿ ಬರೋದು ನಮ್ಮ ಪಾಲಿನ ಜಾಲಿ ಟ್ರಿಪ್ ಅಂತನೇ ಹೇಳ್ಬೋದು. ಶಾಲೆಗೆ ಹೋಗುವ ದಾರಿಯಲ್ಲಿ ಯಾವ ಮಾವಿನ ಮರವನ್ನೂ ಬಿಡ್ತಿರ್ಲಿಲ್ಲ.. ಸಣ್ಣ ಮಾವಿನಕಾಯಿ ಕಂಡ್ರೂ ಸಾಕು.. ನಮ್ಮ ಚೋಟಾ ಗ್ಯಾಂಗ್ ಕೈಯಲ್ಲಿ ಕಲ್ಲುಗಳನ್ನು ಹಿಡ್ಕೊಂಡು ರೆಡಿಯಾಗಿರ್ತಿದ್ವಿ. ಮರದ ಮೇಲಿನ ಮಾವಿನ ಕಾಯಿಗೆ ಕಲ್ಲು ಹೊಡೆಯೋಕೆ.. ಕೊನೆಗೆ ಯಾರೇ ಮಾವಿನಕಾಯಿ ಬೀಳಿಸಿದ್ರೂ, ಎಲ್ರೂ ಸೇರ್ಕೊಂಡು ಅದನ್ನು ಹಂಚ್ಕೊಂಡು ತಿನ್ತಿದ್ವಿ.
ಶಾಲೆಗೆ ಹೋಗ್ತಿದ್ದಾಗ ನಮ್ಮ ಮನೆಯ ಸಮೀಪವೇ ಸಣ್ಣದೊಂದು ನೀರಿನ ತೊರೆ ಹರಿಯುತ್ತಿತ್ತು. ಈಗ್ಲೂ ಇದೆ.. ಆದ್ರೆ ನೀರು ಕಡಿಮೆ. ಈ ತೊರೆ ಸಮೀಪದಲ್ಲೇ ಇರುವ ಮನೆಯವರು ಯಾವುದೋ ಕೆಲಸಕ್ಕಾಗಿ ಕೆಂಪು ಕಲ್ಲು ತಂದಿಟ್ಟಿದ್ರು. ಒಂದು ದಿನ ಸಂಜೆ ನಾನೂ ನನ್ನ ಗೆಳೆಯ ಇಬ್ರೂ ಸೇರ್ಕೊಂಡು ಆ ಕಲ್ಲನ್ನೆಲ್ಲ ತೊರೆಗೆ ಅಡ್ಡಲಾಗಿ ಜೋಡಿಸಿ ಅಣೆಕಟ್ಟು ರೀತಿಯಲ್ಲಿ ಕಟ್ಟಿದ್ವಿ.. ಮರುದಿನ ಬೆಳಿಗ್ಗೆ ನೋಡಿದ್ರೆ ರಸ್ತೆ ತುಂಬೆಲ್ಲ ನೀರು.. ನಾವು ಕಟ್ಟಿದ ಅಣೆಕಟ್ಟನಿಂದಾಗಿ ನೀರು ನಿಂತು ರಸ್ತೆವರೆಗೂ ನೀರು ನಿಂತು, ರಸ್ತೆಯ ಇನ್ನೊಂದು ಬದಿಯಲ್ಲಿರುವ ತೋಟಕ್ಕೂ ನೀರು ನುಗ್ಗಿತ್ತು. ಬೆಳಿಗ್ಗೆ ನಾವು ಶಾಲೆಗೆ ಹೊರಟು ರಸ್ತೆಯಲ್ಲಿ ನಡ್ಕೊಂಡು ಬರ್ಬೇಕಾದ್ರೆ, ನಾವು ಕಟ್ಟಿದ್ದ ಅಣೆಕಟ್ಟಿನ ಪಕ್ಕದ ರಸ್ತೆಯಲ್ಲಿ ವಾಹನಗಳು ಓಡಾಡೋಕೆ ಆಗದೆ ನಿಂತಿತ್ತು. ನಮಗೆ ಮನಸ್ಸಲ್ಲೇ ನಗು.. ಆದ್ರೆ ಏನೂ ಗೊತ್ತಿಲ್ಲದ ರೀತಿಯಲ್ಲಿ ನಿಂತಿದ್ವಿ. ಇವಾಗ ಅದೆಲ್ಲ ನೆನೆಸ್ಕೊಂಡಾಗ ನಗು ಬರುತ್ತೆ..
ನಾವೆಲ್ಲ ಶಾಲೆಗೆ ಹೋಗ್ತಿದ್ದಾಗ ರಸ್ತೆಯಲ್ಲಿ ಒಂದರೆಡು ಅಡಿ ನೀರು ಇರ್ತಿದ್ದಿದ್ದು ಸಾಮಾನ್ಯವಾಗಿತ್ತು. ಸಂಜೆ ಶಾಲೆ ಮುಗಿಸ್ಕೊಂಡು ವಾಪಾಸ್ ಮನೆಗೆ ಹೋಗುವಾಗ ನಮ್ಮ ಸಂಭ್ರಮ ಕೇಳೋದೇ ಬೇಡ. ಎಡಗಾಲನ್ನು ನೀರಿಗೆ ಊರಿಕೊಂಡು ಬಲಗಾಲಲ್ಲಿ ನೀರು ರಟ್ಟಿಸ್ತಾ ಇದ್ದಿದ್ದು ಪ್ರತಿದಿನದ ಕೆಲಸ.. ಕೊನೆಗೆ ಮನೆ ಸೇರುವಷ್ಟರಲ್ಲಿ ನಮ್ಮ ಬಟ್ಟೆಗಳೆಲ್ಲ ಕೆಸರಾಗಿರ್ತಿತ್ತು. ಇದಕ್ಕೆ ಅಮ್ಮನಿಂದ ಬೈಗುಳವೂ ಸಿಗ್ತಿತ್ತು. ಅಷ್ಟಾದ್ರೂ ಮರುದಿನ ಮತ್ತೆ ಹಾಗೇ ಮಾಡ್ತಿದ್ವಿ... ಇನ್ನು ಮೊದಲ ಮಳೆ ಬಂದಾಗ ಮೀನು ಹಿಡಿಯೋದು ಒಂದು ಕೆಲಸವಾಗಿತ್ತು. ಸಾಮಾನ್ಯವಾಗಿ ಜೂನ್ ತಿಂಗಳ ಮೊದಲ ಮಳೆಗೆ ಗದ್ದೆ, ತೋಟಗಳ ನೀರು ಸಮೀಪದ ತೋಡಿಗೆ ಹರಿದು ಹೋಗ್ತಿತ್ತು. ಆಗ ತೋಡಿನಲ್ಲಿರುವ ಮೀನುಗಳೆಲ್ಲ ತೋಟ, ಗದ್ದೆಗಳಿಗೆ ವಿರುದ್ಧ ದಿಕ್ಕಿನಲ್ಲಿ ಬರ್ತಿತ್ತು. ಅದು ಮೀನುಗಳು ಮೊದಲ ಮಳೆಯನ್ನು ಸಂಭ್ರಮಿಸುವ ರೀತಿ.. ನೀರಿನಿಂದ ಮೇಲಕ್ಕೆ ಹಾರುತ್ತಾ ತೋಟಕ್ಕೆ ನುಗ್ಗುವ ಮೀನುಗಳನ್ನು ಹಿಡಿಯೋದು ನಮ್ಮ ಸಂಭ್ರಮದ ಭಾಗವಾಗಿತ್ತು. ಹೆಚ್ಚೆಂದರೆ ನಾಲ್ಕೋ ಐದೋ ಮೀನುಗಳು ಸಿಗ್ತಿತ್ತು. ಆದ್ರೆ ಅದನ್ನು ಮನೆಗೆ ತಗೊಂಡು ಹೋಗಿ ಅಮ್ಮನ ಬಳಿ ಕೊಟ್ಟು ಪದಾರ್ಥ ಮಾಡಿಸಿ, ತಿನ್ನೋವರೆಗೆ ಸಮಾಧಾನ ಆಗ್ತಿರ್ಲಿಲ್ಲ. ರಜಾದಿನಗಳಲ್ಲಿ ತೋಡಿನಲ್ಲಿ ಈಜಾಡೋಕೆ ಹೋಗ್ತಿದ್ವಿ. ಆಗ ಅಪ್ಪನ ಹಳೆಯ ಪಂಚೆ ತಗೊಂಡು ಹೋಗಿ, ಅದರ ತುದಿಯನ್ನು ಎರಡೂ ಬದಿಯಲ್ಲಿ ಹಿಡ್ಕೊಂಡು ನೀರಿನಲ್ಲಿ ಮೀನು ಹಿಡೀತಿದ್ವಿ. ಅವೆಲ್ಲ ತುಂಬಾ ಸಣ್ಣಪುಟ್ಟ ಮೀನುಗಳು.. ಆ ಮೀನುಗಳನ್ನು ಪುಟ್ಟದೊಂದು ಡಬ್ಬಿಯಲ್ಲಿ ಹಾಕೊಂಡು ಮನೆಗೆ ತಗೊಂಡು ಹೋಗಿ ಬಾವಿಗೆ ಹಾಕ್ತಿದ್ವಿ. ಆಮೇಲೆ ದಿನಾ ಬಾವಿಯಲ್ಲಿ ಇಣುಕಿ ನೋಡೋದೇ ಕೆಲಸ.. ಮೀನು ದೊಡ್ಡಾದಾಗಿದ್ಯಾ ಅಂತ...
ಸಂಜೆ ಅಥವಾ ರಾತ್ರಿ ಭಾರೀ ಸಿಡಿಲು-ಗುಡುಗು ಇದ್ರೆ ಬೆಳಗಾಗೆದ್ದು ತೋಟದಲ್ಲಿ ಸುತ್ತಾಡೋದೇ ಕೆಲಸವಾಗ್ತಿತ್ತು.. ಯಾಕೆ ಗೊತ್ತಾ.. ಅಣಬೆ ಹುಡುಕೋಕೆ.. ಸಾಮಾನ್ಯವಾಗಿ ಸಿಡಿಲು-ಗುಡುಗು ಜಾಸ್ತಿ ಇದ್ದ ಮರುದಿನ ಅಣಬೆಗಳು ಹುಟ್ಟಿಕೊಳ್ತಿತ್ತು. ಅದಕ್ಕೆ ವೈಜ್ಞಾನಿಕ ಕಾರಣಗಳು ಏನಿದ್ಯೋ ಗೊತ್ತಿಲ್ಲ. ಆದ್ರೆ ನಾನಂತೂ ಮಿಸ್ ಇಲ್ದೆ ತೋಟದಲ್ಲಿ ಹುಡುಕಾಡ್ತಿದ್ದೆ. ಅಲ್ಲೊಂದು ಇಲ್ಲೊಂದು ಪುಟ್ಟ ಅಣಬೆ ಸಿಗ್ತಿತ್ತು. ಇನ್ನು ಮನೆ ಹಿಂಭಾಗಕ್ಕೆ ಇದ್ದ ಪುಟ್ಟ ಕಾಡಿನಲ್ಲಿ ಕೆಲವು ದೊಡ್ಡ ಮರಗಳ ಕೆಳಗೆ ನೂರಾರು ಸಂಖ್ಯೆಯಲ್ಲಿ ಅಣಬೆಗಳು ಹುಟ್ಟುತ್ತಿತ್ತು. ಅದನ್ನೆಲ್ಲ ಕೊಯ್ದು ಗೋಣಿ ಚೀಲದಲ್ಲಿ ಕಟ್ಕೊಂಡು ಮನೆಗೆ ಬರೋದು, ಬಿದಿರಿನ ರಾಶಿಯ ಮಧ್ಯೆ ಕಣಿಲೆ ಹುಡುಕೋದು... ಇವೆಲ್ಲ ನಮ್ಮ ಶಾಲಾ ಬದುಕಿನ ನಿತ್ಯ ಕೆಲಸಗಳಾಗಿರ್ತಿತ್ತು. ಸಂಜೆಯಾದ್ರೆ ತೋಟದ ನಡುವೆ ನವಿಲುಗಳು ಗರಿ ಬಿಚ್ಚಿ ಕುಣಿಯುತ್ತಾ ಹಾರಾಡ್ತಿತ್ತು. ಇನ್ನು ಮರಗೆಣಸು ನೆಡ್ತಿದ್ದ ಜಾಗದಲ್ಲಿ ಮೊಲಗಳ ಕಾಟ ಇರ್ತಿತ್ತು. ಮರಗೆಣಸಿನ ಗಿಡ ದೊಡ್ಡದಾಗ್ತಿದ್ದಂಗೆ ಅದರ ಎಲೆಗಳನ್ನು ತಿನ್ನೋಕೆ ಮೊಲಗಳು ಬರ್ತಿತ್ತು. ಬೆಳಗೆದ್ದು ನೋಡಿದ್ರೆ ಬಹುತೇಕ ಮರಗೆಣಸಿನ ಗಿಡಗಳಿಗೆ ಎಲೆಗಳೇ ಇರ್ತಿರ್ಲಿಲ್ಲ.. ಆಗಿನ ಕಾಲಕ್ಕೆ ಮರಗೆಣಸೇ ನಮ್ಮ ಹಸಿವನ್ನು ನೀಗಿಸ್ತಾ ಇದ್ದಿದ್ದು.. ಹಾಗಾಗಿ ಮರಗೆಣಸು ನೆಡ್ತಿದ್ದ ಜಾಗದಲ್ಲಿ ತಂತಿಯ ಉರುಳು ಇಡ್ತಿದ್ವಿ. ಉರುಳು ಅಂದ್ರೆ ಉದ್ದದ ತಂತಿಯನ್ನು ವೃತ್ತಾಕಾರದಲ್ಲಿ ಜೋಡಿಸಿ ಎರಡು ಕಡೆ ಸಣ್ಣ ಕೋಲು ನೆಟ್ಟು ಅದಕ್ಕೆ ಕಟ್ಟೋದು. ಅದರ ಅಕ್ಕಪಕ್ಕಕ್ಕೆ ಸೊಪ್ಪುಗಳನ್ನು ಹಾಕ್ತಿದ್ವಿ. ರಾತ್ರಿ ಎಲೆ ತಿನ್ನೋಕೆ ಬರುವ ಮೊಲಗಳು ಈ ಉರುಳಿನಲ್ಲಿ ಸಿಕ್ಕಿ ಹಾಕಿಕೊಳ್ತಿತ್ತು...
ಸಂಜೆ ಕ್ರಿಕೆಟ್ ಆಡೋದು ಉಳಿದೆಲ್ಲ ಕೆಲಸಗಳಿಗಿಂತ ಫೇವರೀಟ್. ಸ್ಕೂಲ್ ಮುಗಿಸ್ಕೊಂಡು ಮನೆಗೆ ಬಂದ್ರೆ ಸಾಕು... ಬ್ಯಾಗ್ ಎಲ್ಲೋ ಎಸೆದು ಹಳೆಯದೊಂದು ಡ್ರೆಸ್ ಹಾಕೊಂಡು ಗ್ರೌಂಡ್‌ಗೆ ಓಡ್ತಿದ್ವಿ. ತೋಟದಲ್ಲಿದ್ದ ನೇರವಾದ ಗಿಡಗಳೆಲ್ಲ ನಮ್ಮ ವಿಕೆಟ್‌ಗಳಾಗ್ತಿತ್ತು. ಆ ಗಿಡವನ್ನು ಕತ್ತರಿಸಿ ಸಿಪ್ಪೆ ತೆಗೆದು ಅದಕ್ಕೆ ಪೆಪ್ಸಿಯ ಸ್ಕಿಕ್ಕರ್ ಅಂಡಿಸ್ತಿದ್ವಿ. ತೀರಾ ಸಣ್ಣದಿದ್ದಾಗ ತೆಂಗಿನ ಮರದ ಗರಿಯ ಬ್ಯಾಟ್‌ಗಳು ಹೆಚ್ಚಾಗಿತ್ತು. ಬರ್ತಾ ಬರ್ತಾ ಮರದ ಬ್ಯಾಟ್‌ಗಳನ್ನು ತಯಾರಿಸೋಕೆ ಶುರು ಮಾಡಿದ್ವಿ. ಟಿವಿಯಲ್ಲಿ ಕ್ರಿಕೆಟ್ ಅಟಗಾರರು ಬಳಸುವ ರೀತಿಯಲ್ಲಿ ಆ ಬ್ಯಾಟ್‌ಗೆ ಸ್ಟಿಕ್ಕರ್ ಅಂಟಿಸಿ ಆನಂದ ಪಡ್ತಿದ್ವಿ. ರೈಟ್ ಹ್ಯಾಂಡ್ ಬ್ಯಾಟಿಂಗ್ ಮಾಡೋವ್ರು ಸಹ ಗಂಗೂಲಿ ರೀತಿಯಲ್ಲಿ ಎರಡು ಸ್ಟೆಪ್ ಮುಂದೆ ಬಂದು ಸಿಕ್ಸರ್ ಬಾರಿಸೋಕೆ ಪ್ರಯತ್ನ ಪಡ್ತಿದ್ವಿ. ಶೋಯೆಬ್ ಅಖ್ತರ್ ಬೌಲಿಂಗ್ ನೋಡಿದ ಮೇಲೆ ಗ್ರೌಂಡ್‌ನ ಬೌಂಡರಿ ಲೈನ್‌ನಿಂದನೇ ಓಡ್ಕೊಂಡು ಬಂದು ಬೌಲಿಂಗ್ ಮಾಡೋದು ಸ್ಟೈಲ್ ಆಗಿತ್ತು. ಸಂಜೆ ನಾಲ್ಕು ಗಂಟೆಗೆ ಮ್ಯಾಚ್ ಆಡೋ ಮೊದ್ಲು ತಣ್ಣಗೆ ಮಳೆ ಬಂದಿದ್ರೆ ಬೌಲರ್‌ಗಳಿಗೆ ಖುಷಿ.. ಪಿಚ್ ಬೌನ್ಸ್ ಆಗುತ್ತೆ ಅಂತ.. ಆರು ಓವರ್‌ಗಳ ಮ್ಯಾಚ್‌ ಆದ್ರೂ, ಆರು ಓವರ್ ಮುಗಿಯೋ ಮೊದ್ಲೇ ಬ್ಯಾಟ್ಸ್‌ಮನ್‌ಗಳೆಲ್ಲ ಔಟ್ ಆಗ್ತಿದ್ರು. ರಜಾ ದಿನಗಳಂದು ಬೆಳಿಗ್ಗೆಯೇ ನಮ್ಮ ಟೆಸ್ಟ್ ಕ್ರಿಕೆಟ್ ಆರಂಭವಾಗ್ತಿತ್ತು. ಅರ್ಧ ದಿನ ಆಗ್ತಿದ್ದಂಗೆ ಎರಡೂ ಕಡೆಯ ಬ್ಯಾಟ್ಸ್‌ಮನ್‌ಗಳು ಔಟ್ ಆಗಿ ಮ್ಯಾಚ್ ಮುಗ್ದೋಗ್ತಿತ್ತು. ಮನೆಗೆ ಬಂದ ಮೇಲೆ ಎಡಗೈಯಲ್ಲಿ ಗೋಡೆಗೆ ಬಾಲ್ ಎಸೆಯುತ್ತಾ ಬ್ಯಾಟಿಂಗ್ ಪ್ರಾಕ್ಟೀಸ್.. ಅಕ್ಕಪಕ್ಕದ ಯಾವುದೇ ಊರುಗಳಲ್ಲಿ ಮ್ಯಾಚ್ ಇದ್ರೂ ನಮ್ಮ ತಂಡ ಅಲ್ಲಿ ಹಾಜರಿರ್ತಿತ್ತು. ಕ್ಲಾಸ್‌ಗೆ ಚಕ್ಕರ್ ಹೊಡೆದು ಮ್ಯಾಚ್ ಆಡೋಕೆ ಹೋಗೋದೇ ಒಂದು ಮಜಾ.. ಸಾಮಾನ್ಯವಾಗಿ ಲೀಗ್ ಅಥವಾ ಕ್ವಾರ್ಟರ್ ಫೈನಲ್ ಹಂತದಲ್ಲೇ ಸೋತು ವಾಪಾಸಾಗ್ತಿದ್ವಿ. ಎಷ್ಟು ಮ್ಯಾಚ್ ಸೋತ್ರೂ ಪರ್ವಾಗಿಲ್ಲ, ಮುಂದಿನ ಬಾರಿ ಮತ್ತೆ ಟೂರ್ನಮೆಂಟ್ ಇದ್ದಾಗ ಪಾಲ್ಗೊಳ್ಳೋದನ್ನು ಮಾತ್ರ ಮಿಸ್ ಮಾಡ್ತಿರ್ಲಿಲ್ಲ.

Sunday, August 11, 2013

ನನ್ನ ಪ್ರೀತಿಯ ಹುಡುಗಿ...

ಅವಳು ಇನ್ನೆಂದಿಗೂ ನನ್ನ ಪಾಲಿಗೆ ನೆನಪು ಪಾತ್ರ.. ಈ ಹಿಂದೆಲ್ಲ ಪ್ರೀತಿ-ಪ್ರೇಮ ಅಂತೆಲ್ಲ ಸುತ್ತಾಡ್ತಿದ್ದ ನಾನು ಮೊದಲ ಬಾರಿಗೆ ನಿಷ್ಕಲಷ್ಮ ಗೆಳೆತನದ ಬೆಸುಗೆಯಲ್ಲಿ ಬಂಧಿಯಾಗಿದ್ದೆ.. ಇದು ನಾಲ್ಕು ವರ್ಷಗಳ ಹಿಂದಿನ ಕಥೆ.. ನಾನಾಯ್ತು ನನ್ನ ಪಾಡಾಯ್ತು ಅಂತ ಯಾವುದೋ ಯೋಚನೆಯಲ್ಲಿ ಮುಳುಗಿರ್ತಿದ್ದ ನನ್ನ ಬಾಳಿಗೆ ಆಕೆ ಪ್ರವೇಶ ಮಾಡಿದ್ದಳು.. ಉತ್ತಮ ಗೆಳತಿಯಾಗಿ.. ಆ ಸಂಬಂಧ ಕೊನೆವರೆಗೂ ಮುಂದುವರಿಯಿತು... ಮೊನ್ನೆ ಮೊನ್ನೆ ನನ್ನಿಂದ ದೂರವಾಗೋವರೆಗೂ...

ಗೆಳತಿಯಾಗಿ ಅವಳು ನನ್ನೊಂದಿಗಿದ್ದ ದಿನಗಳನ್ನು ಮರಿಯೋಕಾಗಲ್ಲ.. ಯಾವುದೋ ತುಂಟಾಟದಲ್ಲಿ ಆರಂಭವಾದ ಗೆಳೆತನ... ದಿನಗಳೆದಂತೆ ಗೆಳೆತನದ ಬೆಸುಗೆ ಗಟ್ಟಿಯಾಗುತ್ತಾ ಹೋಯ್ತು.. ಬೆಳಗ್ಗೆ ಎದ್ದಾಗಿಂದ ರಾತ್ರಿ ಮಲಗೋವರೆಗೆ ಗಂಟೆಗೊಮ್ಮೆ ಆಕೆಯೊಂದಿಗೆ ಫೋನಲ್ಲಿ ಮಾತಾಡ್ತಿದ್ದೆ... ನನ್ನ ಜೀವನದ ಪುಟ್ಟ ಪುಟ್ಟ ನಿರ್ಧಾರಗಳನ್ನೂ ತೆಗೆದುಕೊಳ್ಳೋ ಮುನ್ನ ಅವಳಲ್ಲಿ ಕೇಳ್ತಿದ್ದೆ.. ಅವಳು ಹೇಳ್ತಿದ್ದುದೆಲ್ಲ ನಂಗೆ ವೇದವಾಕ್ಯವಾಗಿತ್ತು.. ಅವಳು ಹೇಳ್ತಿದ್ದುದರಲ್ಲಿ ಯಾವತ್ತೂ ಯಾವ ತಪ್ಪುಗಳೂ ಇರ್ತಿರ್ಲಿಲ್ಲ.. ಅಷ್ಟರಮಟ್ಟಿಗೆ ಅವಳು ದೃಢ ಮತ್ತು ಪಕ್ವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಳು..

ಯಾವತ್ತೂ ನನ್ನ ಬೆಸ್ಟ್ ಫ್ರೆಂಡ್ ಅಂದ್ಕೊಂಡಿದ್ದ ಅವಳು ನನಗೆ ಕೊಟ್ಟ ಪ್ರೀತಿ, ಸ್ನೇಹ, ಕಾಳಜಿ.. ಇವಕ್ಕೆಲ್ಲ ಬೆಲೆ ಕಟ್ಟೋಕಾಗಲ್ಲ.. ನನ್ನ ಮಟ್ಟಿಗಂತೂ ಆಕೆ ಪುಟ್ಟ ಮಗುವಾಗಿದ್ದಳು. ಜೊತೆಗಿದ್ದಷ್ಟು ದಿನ ಪುಟ್ಟ ಕಂದಮ್ಮನಂತೆ ನೋಡ್ಕೊಂಡೆ.. ಆಕೆ ಗೆಳತಿಯಾಗಿ, ತಾಯಿಯ ಪ್ರೀತಿಯನ್ನೂ ಕೊಟ್ಟಳು.. ತನ್ನೆಲ್ಲ ಸುಖಃ ದುಖಃ ಗಳನ್ನು ಹಂಚಿಕೊಂಡಳು... ನನ್ನ ಮನಸ್ಸಿನ ಕನ್ನಡಿಯಾದಳು... ನಾಲ್ಕು ವರ್ಷದಲ್ಲಿ ಅವಳಿಂದ ಮುಚ್ಚಿಟ್ಟ ಸಂಗತಿಗಳೇನೂ ಇರಲಿಲ್ಲ..

ಬೇಕಾಬಿಟ್ಟಿ ಇರ್ತಿದ್ದ ನಾನು ಪರಿಪೂರ್ಣನಾಗಲು ಆಕೆ ಕಾರಣವಾದಳು.. ಯಾವುದೋ ನೋವಿನ ಗುಂಗಿನಲ್ಲಿರ್ತಿದ್ದ ನನ್ನನ್ನು ಅದರಿಂದ ಹೊರಬರುವಂತೆ ಮಾಡಿದ್ದಳು.. ನಾನು ಎಲ್ಲರಂತೆ ಎಲ್ಲರೊಂದಿಗೆ ಇರುವಂತಾಗಲು ಅವಳು ಪ್ರೇರಣೆಯಾದಳು.. ನನ್ನ ಬದುಕಿನ ದಿಕ್ಕನ್ನೇ ಬದಲಿಸಿದ ಅವಳು ನನ್ನೆಲ್ಲಾ ಯಶಸ್ಸಿನ ಬೆನ್ನೆಲುಬಾಗಿದ್ದಳು..

ತುಂಬಾ ಇಷ್ಟಪಟ್ಟಿದ್ದೆ ಅವಳನ್ನ.. ಅವಳಿಗೂ ನಾನಂದ್ರೆ ತುಂಬಾ ಇಷ್ಟನೇ ಆಗಿತ್ತು.. ಆದ್ರೆ ನಾಲ್ಕು ವರ್ಷದಲ್ಲಿ ಒಮ್ಮೆಯೂ ಆ ಇಷ್ಟಗಳು ಗೆಳೆತನದ ಪರಿಧಿ ಮೀರಿ ಹೋಗಲಿಲ್ಲ.. ಈಗ ಅವಳು ನನ್ನಿಂದ ದೂರ ಇದ್ರೂನೂ ಜೀವಮಾನ ಪೂರ್ತಿ ಮೆಲುಕು ಹಾಕಿಕೊಳ್ಳುವಷ್ಟು ನೆನಪುಗಳು ನನ್ನೊಂದಿಗಿದ್ದಾವೆ..

Monday, August 5, 2013

ಗೆಳೆತನದ ಬೆಸುಗೆ...

ಪ್ರೀತಿ ಸ್ನೇಹ ಅನ್ನೋದೆ ಹಾಗೆ.. ಯಾರ ಮೇಲೆ ಯಾವಾಗ ಬರತ್ತೆ ಅಂತ ಹೇಳೋದಿಕ್ಕಾಗಲ್ಲ.. ನಿನ್ನೆ ಮೊನ್ನೆ ಪರಿಚಯವಾದವರು ತುಂಬಾ ಬೇಗ ಮನಸ್ಸಿಗೆ ಹತ್ತಿರ ಆಗ್ತಾರೆ.. ಕೆಲವೇ ದಿನಗಳ ಮಾತುಕತೆಯೇ ಹಲವಾರು ವರ್ಷಗಳ ಪರಿಚಯದಂತೆ ಭಾಸವಾಗತ್ತೆ... ತುಂಬಾ ಮಾತಾಡ್ಬೇಕು ಅನ್ಸತ್ತೆ.. ಮನಸಲ್ಲಿರೋದನ್ನೆಲ್ಲ ಹೇಳಿ ಹಗುರಾಗಬೇಕು ಅನ್ಸತ್ತೆ.. ಜೊತೆಗಿದ್ದುಕೊಂಡು ಕೀಟಲೆ ಮಾಡ್ತಾ ಎಲ್ಲ ಮರೆತು ಖುಷಿಯಾಗಿರ್ಬೇಕು ಅನ್ಸತ್ತೆ.. ಹೀಗೆ ಹತ್ತು ಹಲವು ಕನಸುಗಳು...

ಇಂದಿನ ಯಾಂತ್ರೀಕೃತ ಬದುಕಿನಲ್ಲಿ ವೈಯಕ್ತಿಕ ಹಿತಾಸಕ್ತಿಗಳಿಗೆ ಕೊಂಚವೂ ಬೆಲೆ ಸಿಗಲ್ಲ.. ಮನುಷ್ಯ ಅಂದ್ಮೇಲೆ ಪ್ರತಿಯೊಬ್ಬನಿಗೂ ತನ್ನದೇ ಆದ ಕನಸುಗಳಿರತ್ತೆ... ನಿರೀಕ್ಷೆಗಳಿರತ್ತೆ.. ಆದ್ರೆ ನಮ್ಮ ಕನಸು, ನಿರೀಕ್ಷೆಗಳಿಗೆ ಸ್ಪಂದಿಸೋಕೆ ಖುದ್ದು ನಮಗೆ ಆಗಿಲ್ಲ ಅಂತಾದ್ರೆ ಕಷ್ಟ ಅಲ್ವಾ.. ಬದುಕಿನ ಯಾವುದೋ ಒಂದು ಘಳಿಗೆಯಲ್ಲಿ ನಾವು ತುಂಬಾ ಬ್ಯುಸಿ ಅನಿಸಿಬಹುದು.. ಅದೇ ರೀತಿ ಯಾವುದೇ ಕೆಲಸ ಕಾರ್ಯಗಳಿಲ್ಲದೆ ಸುಮ್ಮನಿದ್ದಾಗ ಯಾವುದಾದರೂ ಕೆಲಸದಲ್ಲಿ ಬ್ಯುಸಿಯಾಗಬೇಕು ಎಂದೂ ಅನ್ಸತ್ತೆ.. ಆದ್ರೆ ತುಂಬಾ ಬ್ಯುಸಿಯಾಗಿದ್ದಾಗ ಎಲ್ಲಾ ಜಂಜಾಟಗಳಿಂದ ಹೊರಗೋಡಿ ಬರಬೇಕು ಅನ್ಸೋದು ಸಹಜ.. ಯಾರೂ ಇಲ್ಲದ ಜಾಗದಲ್ಲಿ ಒಂಟಿಯಾಗಿ ಇದ್ದು ಬಿಡಬೇಕು ಅನ್ಸೋದುಂಟು... ಆದ್ರೆ ದೈನಂದಿನ ಬದುಕಿನ ಅನಿವಾರ್ಯತೆಗಳ ಮಧ್ಯೆ ಇದ್ಯಾವುದೂ ಸಾಧ್ಯವಾಗದೆ ಇದ್ದಾಗ ಕನಿಷ್ಠ ಮನಸ್ಸು ಹಗುರ ಮಾಡ್ಕೊಳ್ಳೋಕೆ ಗೆಳತಿಯೊಬ್ಬಳು ಬೇಕು ಅನ್ಸತ್ತೆ..

ತನ್ನೆಲ್ಲ ಕನಸು, ನಿರೀಕ್ಷೆಗಳು, ನೋವು ನಲಿವುಗಳಿಗೆ ಸ್ಪಂದಿಸುವ ಹುಡುಗಿ ಅವಳಾಗಿರಬೇಕು.. ಆಕೆಯೂ ನನ್ನೊಂದಿಗೆ ಹಾಗೆಯೇ ಇರಬೇಕು.. ಹೇಳಬೇಕು ಅನ್ಸಿದ್ದನ್ನು ಮನಸ್ಸು ಬಿಚ್ಚಿ ಹೇಳಬೇಕು.. ಎಲ್ಲಾ ವಿಷಯವನ್ನೂ ಮುಕ್ತವಾಗಿ ಹಂಚಿಕೊಳ್ಳುವ ಮನಸ್ಸಿರಬೇಕು.. ಪ್ರೀತಿ, ಸ್ನೇಹ, ಕಾಳಜಿಯ ಹಂದರವಿರಬೇಕು... ಆದ್ರೆ ಸಂಶಯ ಸ್ವಾರ್ಥ ಇರಬಾರದು.. ನನ್ನ ಗೆಳೆಯ ನನ್ನವನು ಅನ್ನೋ ಮನೋಭಾವ ಸ್ವಾರ್ಥವಾಗಬಾರದು..

ಗೆಳೆತನಕ್ಕಿಂತ ಮಧುರವಾದ ಸಂಬಂಧ ಮತ್ತೊಂದಿಲ್ಲ.. ಆದ್ರೆ ಸಂಬಂಧ ಮಧುರವಾಗಿರಲು ಇಬ್ಬರ ನಡುವೆ ಹೊಂದಾಣಿಕೆಯಿರಬೇಕು.. ಅರ್ಥ ಮಾಡಿಕೊಳ್ಳುವ ಗುಣವಿರಬೇಕು.. ಹೇಳಲಾಗದ್ದನ್ನು ಪರಸ್ಪರ ಮಾತನಾಡಿಕೊಳ್ಳುವ ಒಳಮನಸ್ಸು ಜಾಗೃತವಾಗಬೇಕು.. ಹಾಗಾದಾಗ ಗೆಳೆತನದ ಬೆಸುಗೆ ಮತ್ತಷ್ಟು ಗಟ್ಟಿಗೊಳ್ಳೋದ್ರಲ್ಲಿ ಸಂಶಯವಿಲ್ಲ...

Thursday, May 3, 2012

ಮಳೆಯೊಂದಿಗೆ ಅವಳು....

ಮಳೆಹನಿಗೂ ಪ್ರೀತಿಗೂ ಅವಿನಾಭಾವ ಸಂಬಂಧ ಅನ್ಸತ್ತೆ. ಪ್ರತಿಯೊಂದು ಪ್ರಣಯ ಕಥೆಗಳ ಹಿಂದೆಯೂ ಮಳೆಹನಿಯ ಸ್ಪರ್ಶಗಳಿರತ್ತೆ. ತೆಳುಗಾಳಿಯ ರೋಮಾಂಚನಗೊಳಿಸುವ ಅನುಭವಗಳಿರತ್ತೆ. ಬಾಂಧವ್ಯದ ಬೆಸುಗೆ ಹೆಣೆಯುವ ನೂರಾರು ಸುಮಧುರ ಹೆಜ್ಜೆಗಳ ಸಪ್ಪಳವಿರತ್ತೆ..

ಮಳೆ ಅಂದ್ರೆ ಹಾಗೆನೇ ಅಲ್ವಾ.. ಮಳೆಹನಿ ಮೈಮೇಲೆ ಸ್ಪರ್ಶಿಸಿದಾಗ ಉಂಟಾಗುವ ಅನುಭವನೇ ಅಂಥಾದ್ದು. ಅದು ಬೆವರ ಹನಿಗಳ ಮೇಲೆ ಮಳೆ ತೋಕಿದಾಗ ಇರಬಹುದು ಅಥವಾ ಚಳಿಗಾಳಿಗೆ ಮೈ ಬೆಚ್ಚಗೆ ಮಾಡಿಕೊಳ್ಳುವ ತವಕದಲ್ಲಿದ್ದಾಗ ಇರಬಹುದು... ಮಳೆ ಹನಿಯ ಸ್ಪರ್ಶ ವಿಶೇಷ ಅನುಭೂತಿ ನೀಡತ್ತೆ. ಅದರೊಂದಿಗೆ ಪ್ರೀತಿಯ ಸ್ಪರ್ಶವೂ ಇದ್ರೆ ಅದರ ಅನುಭವನೇ ಬೇರೆ..

ಪ್ರೀತಿಸುವ ಪ್ರತಿಯೊಬ್ಬ ಹುಡುಗನಿಗೂ ತಾನು ತನ್ನ ಹುಡುಗಿ ಜೊತೆಗೆ ಮಳೆಯಲ್ಲಿ ತೋಯಬೇಕು ಅನ್ನೋ ಆಸೆಯಿರತ್ತೆ. ಹುಡುಗಿಗೂ ಜೋರುಮಳೆಯಲ್ಲಿ ತನ್ನ ಹುಡುಗನ ಎದೆಗೊರಗಿ ನಿಲ್ಲಬೇಕೆನ್ನುವ ಕನಸುಗಳಿರತ್ತೆ. ಕೈ ಕೈ ಹಿಡಿದು ನಡೀಬೇಕು ಅನ್ನೋ ವಾಂಛೆಯಿರತ್ತೆ. ಇವೆಲ್ಲ ಪ್ರೀತಿಸೋ ಹೃದಯಗಳಲ್ಲಿ ಕನಸುಗಳಾಗಿ ಮಾತ್ರ ಉಳಿದಿರತ್ತೆ. ಕೆಲವರು ಮಾತ್ರ ತಮ್ಮ ಕನಸುಗಳನ್ನು ಈಡೇರಿಸಿಕೊಂಡಿರುತ್ತಾರೆ.

ನನ್ನ ಹುಡುಗಿ ಜೊತೆಗೆ ಮಳೆಯಲ್ಲಿ ನೆನೆಯೋ ಆಸೆ ನಂಗೂ ಇದೆ. ತುಂತುರು ಮಳೆಯೊಂದಿಗೆ ಅವಳು ನನ್ನ ಜೊತೆಯಿರಬೇಕು. ಇಳಿ ಸಂಜೆಯ ಕಾರ್ಮೋಡದ ನೆರಳಲ್ಲಿ ತಣ್ಣನೆಯ ಗಾಳಿಯೊಂದಿಗೆ, ತುಂತುರು ಮಳೆ.. ಜೊತೆಗೆ ಅವಳೂ.. ಅವಳು ಅಂಗೈ ಹಿಡಿದು ನನ್ನೊಂದಿಗೆ ಹೆಜ್ಜೆ ಹಾಕಬೇಕು. ಮಳೆನೀರಿನಲ್ಲಿ ಕಾಲು ತೋಯಿಸುತ್ತಾ ಆಟವಾಡಬೇಕು. ಪರಸ್ಪರ ನೀರೆರಚಿ ಸಂಭ್ರಮಿಸಬೇಕು. ಮಳೆಹನಿ ಮೈ ತಣ್ಣಗಾಗಿಸಿದಾಗ ನನ್ನೆದೆಯಲ್ಲಿ ಮುಖ ಹುದುಗಿಸಿ ಬಿಗಿದಪ್ಪಿ ನಿಲ್ಲಬೇಕು. ಪುಟ್ಟ ಕಂದಮ್ಮನನ್ನು ಎದೆಗೊರಗಿಸಿ ನಿಂತ ತಾಯಿಯಂತೆ ನಾನಾಕೆಯ ತಲೆ ನೇವರಿಸಬೇಕು. ಮಳೆಹನಿಗಳ ಸ್ಪರ್ಶದೊಂದಿಗೆ ನಾನಾಕೆಯ ಹಣೆಮೇಲೊಂದು ಸಿಹಿ ಮುತ್ತು ನೀಡಬೇಕು. ಅದು ಮಳೆಹನಿಗೂ ಮಿಗಿಲಾದ ಅನುಭೂತಿ ನೀಡಬೇಕು. ಕೊನೆಯುಸಿರವರೆಗೂ ಜೊತೆಗಿರುವ ಹೃದಯಗಳಿಗೆ ಆಸರೆಯ ಬೆಸುಗೆಯಾಗಬೇಕು... ಅಕ್ಕರೆಯ ನೇವರಿಕೆಯಾಗಬೇಕು.

ಹಸಿರು ರಾಶಿಯ ಕಾಲು ದಾರಿಯಲ್ಲಿ ಮಳೆಯ ಸ್ಪರ್ಶದೊಂದಿಗೆ ಅವಳ ಜೊತೆಗೆ ಹೆಜ್ಜೆ ಹಾಕಬೇಕು. ಅವಳ ಕಾಲು ಸೋತಷ್ಟೂ ದೂರ. ಬಳಿಕ ನಾನಾಕೆಯನ್ನು ಪುಟ್ಟ ಮಗುವಿನಂತೆ ಎದೆಗೆ ಬಿಗಿದಪ್ಪಿ ನಡೆಯಬೇಕು. ಮುಸ್ಸಂಜೆಯ ಇಳಿಹೊತ್ತಿನಲ್ಲಿ ನಾವಿಬ್ಬರೇ ಇರಬೇಕು. ಹೆಜ್ಜೆ ಸೋತಾಗ ಅವಳೊಂದಿಗೆ ಯಾವುದಾದರೂ ಮರದ ಬುಡದಲ್ಲಿ ಕೂರಬೇಕು. ಆಕೆಯನ್ನು ಮಡಿಲಲ್ಲಿ ಮಗುವಿನಂತೆ ಮಲಗಿಸಬೇಕು. ಮಳೆ ಹನಿಗಳ ಸ್ಪರ್ಶದೊಂದಿಗೆ ಮುಖದ ಮೇಲೆ ಬಿದ್ದಿರೋ ಮುಂಗುರುಳ ಸೋಕಬೇಕು. ಅರಳು ಹುರಿವಂತ ಅವಳ ಮಾತುಗಳಿಗೆ ಕಿವಿಗೊಡಬೇಕು. ಅವಳ ನಿರೀಕ್ಷೆಗಳಿಗೆ ಸ್ಪಂದಿಸಬೇಕು. ಅವಳ ತುಂಟಾಟಕ್ಕೆ ಸಾಥ್ ನೀಡಬೇಕು. ಅವಳೆಲ್ಲಾ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು. ಮತ್ತೆ ಪ್ರೀತಿಸಬೇಕು.. ಪ್ರೀತಿಸಿ ಪ್ರೀತಿಸಿ ಪ್ರೀತಿಸಬೇಕು... ಪ್ರೀತಿಯ ಜೊತೆಗೆ ಅಕ್ಕರೆ, ಕಾಳಜಿಯ ಸ್ಪರ್ಶ ನೀಡಬೇಕು. ತಾನು ಪ್ರೀತಿಸಿದ್ದು ತಪ್ಪಲ್ಲ. ತನ್ನ ಪ್ರೀತಿಗೆ ಅರ್ಥವಿದೆ. ನೂರು ಜನ್ಮ ಎದ್ದು ಬಂದ್ರು ತನ್ನ ಪ್ರೀತಿ ಅವಳಿಗೆ ಬೇಕು ಅನಿಸಬೇಕು. ತಾನು ಪ್ರೀತಿಸೋ ಹುಡುಗ ತನ್ನವನು ಮಾತ್ರ.. ತನ್ನನ್ನು ಮಾತ್ರ ಪ್ರೀತಿಸಬೇಕು ಅನ್ನೋ ಸ್ವಾರ್ಥ ಇರಬೇಕು. ಇವೆಲ್ಲದರ ಜೊತೆಗೆ ನಿಷ್ಕಲಶ್ಮವಾಗಿ ಅವಳು ನನ್ನನ್ನು ಪ್ರೀತಿಸಬೇಕು...

ನನ್ನೆಲ್ಲ ಕನಸುಗಳಿಗೆ ಸ್ಪಂದಿಸುವ ಹುಡುಗಿ ಇರಬಹುದಾ.. ಇದ್ರೂ ಆಕೆ ನನ್ನವಳಾಗಬಹುದಾ.. ನನ್ನವಳಾದ್ರೆ ತುಂಬಾ ಖುಷಿಪಡ್ತೀನಿ. ಎಲ್ಲಕ್ಕಿಂತ ಮಿಗಿಲಾಗಿ ಅವಳನ್ನು ತುಂಬಾ ತುಂಬಾ ಪ್ರೀತಿಸ್ತೀನಿ..

Thursday, April 5, 2012

ಮೊದಲ ಪ್ರೀತಿ...

ಅಪಕ್ವ ಮನಸ್ಸಿನಲ್ಲಿ ಮೊಳಕೆಯೊಡೆದಿದ್ದ ಮೊದಲ ಪ್ರೀತಿ.. ನಾನಾಗ ಫಸ್ಟ್ ಪಿಯುಸಿಗೆ ಕಾಲಿಟ್ಟಿದ್ದೆ. ಕಾಲೇಜು ಜೀವನದ ಆರಂಭದ ದಿನಗಳು.. ಮೊದಲ ಮಳೆಯ ಜೊತೆಗೆ ಪುಟ್ಟದೊಂದು ಬ್ಯಾಗ್ ಬೆನ್ನಿಗೆ ನೇತಾಡಿಸಿಕೊಂಡು ಕಾಲೇಜಿಗೆ ಹೊರಟಿದ್ದೆ. ಭೋರ್ಗರೆಯುವ ಮಳೆಯನ್ನೂ ಲೆಕ್ಕಿಸದೆ ಅಪ್ಪ ಕೊಡಿಸಿದ ಹೊಸ ಕೊಡೆಯೊಂದಿಗೆ ಮಳೆ ಹನಿಯೊಂದಿಗೆ ಚೆಲ್ಲಾಟವಾಡ್ತಾ ಕಾಲೇಜಿಗೆ ಹೋಗೋದೆ ಹೊಸ ಅನುಭವವಾಗಿತ್ತು. ಅಂದಿನವರೆಗೆ ಯುನಿಫಾರ್ಮ್ ನಲ್ಲೇ ಸ್ಕೂಲ್ ಗೆ ಹೋಗ್ತಿದ್ದ ನನಗೆ ಕಲರ್ ಕಲರ್ ಡ್ರೆಸ್ ನಲ್ಲಿ ಕಾಲೇಜಿಗೆ ಹೋಗೋದು ವಿಶೇಷವಾಗಿತ್ತು.

ಕಾಲೇಜು ಎಂಟ್ರೆನ್ಸ್ ತಲುಪ್ತಿದ್ದಂಗೆ ಕೊಡೆ ಮಡಚಿ ಒದ್ದೆ ಬಟ್ಟೆಯೊಂದಿಗೆ ಕ್ಲಾಸ್ ಹುಡುಕುವ ಕೆಲಸ ಆರಂಭವಾಗಿತ್ತು. ಕೊನೆಗೂ 0-26 ಕ್ಲಾಸನ್ನು ಹುಡುಕೋದ್ರಲ್ಲಿ ಸಫಲನಾಗಿದ್ದೆ. ಮೊದಲ ದಿನದ ನೆನಪುಗಳೊಂದಿಗೆ ಒಂದು ವಾರ ಕಳೆದಿದ್ದೆ. ವಾರದ ಬಳಿಕ ನನ್ನ ಕಣ್ಣಿಗೆ ಕಾಣಿಸಿದ್ದೇ ಆ ಸುಂದರ ಕುವರಿ. ಹೆಸರು ಗೊತ್ತಿಲ್ಲ, ಊರು ಗೊತ್ತಿಲ್ಲ. ಆದ್ರೆ ಪ್ರತಿದಿನ ಅವಳನ್ನು ನೋಡ್ತಿದ್ದೆ. ಅವಳಿಗೊಂದು ಸ್ಮೈಲ್ ಕೊಡೋಕೆ ಕಾಯ್ತಿದ್ದೆ. ಆದ್ರೆ ಆಕೆ ಯಾವ ಹುಡುಗರ ಮುಖವನ್ನೂ ನೋಡ್ತಿರ್ಲಿಲ್ಲ. ನನ್ನ ಕಡೆಗಂತೂ ಅಪ್ಪಿ ತಪ್ಪಿಯೂ ನೋಡ್ತಿರ್ಲಿಲ್ಲ.

ಕೊನೆಗೂ ಕ್ಲಾಸ್ ನಲ್ಲಿ ಅಟೆಂಡೆನ್ಸ್ ಹಾಕೋವಾಗ ಅವಳ ಹೆಸರನ್ನು ಗಮನಿಸಿದ್ದೆ. ನನ್ನ ಮಟ್ಟಿಗಂತೂ ವಿಶೇಷವಾದ ಹೆಸರು. ಆ ಹೆಸರನ್ನು ತುಂಬಾನೇ ಪ್ರೀತ್ಸೋಕೆ ಶುರು ಮಾಡಿದ್ದೆ. ನಿಧಾನಕ್ಕೆ ಆ ಹೆಸರಿನ ಮೇಲಿದ್ದ ಪ್ರೀತಿ ಆಕೆಯ ಮೇಲಾಯ್ತು. ಪ್ರತಿದಿನ ಕಾಲೇಜಿಗೆ ಬರ್ತಿದ್ದಂಗೆ ಅವಳನ್ನೊಮ್ಮೆ ನೋಡೋಕೆ ಕಾಯ್ತಿದ್ದೆ. ಅವಾಗಷ್ಟೇ ಕ್ಲಾಸ್  ಬಂಕ್ ಮಾಡೋದನ್ನು ಕಲಿತಿದ್ದ ನಾನು ಆಕೆಗೋಸ್ಕರ ಕ್ಲಾಸ್ ಗೆ ಹೋಗೋಕೆ ಶುರು ಮಾಡಿದ್ದೆ.

ವಾರಗಳು ತಿಂಗಳುಗಳಾಯ್ತು. ಅವಳನ್ನು ಹುಚ್ಚನಂತೆ ಪ್ರೀತ್ಸೋಕೆ ಶುರು ಮಾಡಿದ್ದೆ. ಫಸ್ಟ್ ಇಯರ್ ಪಿಯುಸಿ ಮುಗಿಯಿತು. ನೋಡ ನೋಡ್ತಿದ್ದಂಗೆ ಸೆಕೆಂಡ್ ಇಯರ್ ಪಿಯುಸಿಯ ಕೊನೆಯ ದಿನಗಳು ಸಮೀಪಿಸಿದ್ವು. ಫೈನಲ್ ಎಕ್ಸಾಂ ಟೈಮ್ ನಲ್ಲಿ ನಂಗೆ ಭಯ ಶುರುವಾಗಿತ್ತು. ಎಕ್ಸಾಂ ಬಗ್ಗೆಯಲ್ಲ.. ಬದಲಾಗಿ ಆಕೆಯ ಬಗ್ಗೆ. ಸೆಕೆಂಡ್ ಪಿಯುಸಿ ನಂತ್ರ ಆಕೆ ಡಿಗ್ರಿಗಾಗಿ ಮತ್ತೆ ನಮ್ಮ ಕಾಲೇಜಿಗೆ ಬರ್ತಾಳೋ, ಇಲ್ಲಾ ಮನೆಯಲ್ಲೇ ಬಿದ್ದಿರ್ತಾಳೋ ಅಂತ... ಏನಪ್ಪಾ ಮಾಡೋದು ಅಂತ ತುಂಬಾನೇ ತಲೆಕೆಡಿಸಿಕೊಂಡಿದ್ದೆ. ಆದ್ರೆ ಹಾಗಂತ ಅವಳಲ್ಲಿ ಇದ್ಯಾವುದನ್ನೂ ಕೇಳೋ ಹಾಗೂ ಇಲ್ಲ. ಯಾಕಂದ್ರೆ ನಾವಿಬ್ರೂ ಮಾತಾಡ್ತಾನೇ ಇರ್ಲಿಲ್ಲ.

ಕೊನೆಗೆ ಪಿಯುಸಿ ಎಕ್ಸಾಂ ಮುಗಿಯಿತು. 2 ತಿಂಗಳು ರಜೆ ಇತ್ತು. ಆ ಟೈಮ್ ನಲ್ಲಂತೂ ಆಕೆಯನ್ನು ನೋಡೋಕಾಗ್ದೆ ಪರದಾಡ್ತಿದ್ದೆ. ರಿಸಲ್ಟ್ ನವತ್ತು ಆಕೆ ಮತ್ತೆ ಕಾಲೇಜಿಗೆ ಬಂದಿದ್ಳು. ಆಕೆಯನ್ನು ನೋಡಿದ ಖುಷಿ ಇವತ್ತಿಗೂ ನೆನಪಿದೆ.

ನಂಗೆ ತುಂಬಾ ಖುಷಿ ಅನ್ಸಿದ್ದು ಅಂದ್ರೆ ಫಸ್ಟ್ ಇಯರ್ ಡಿಗ್ರಿಗೆ ಅಡ್ಮಿಷನ್ ಮಾಡೋಕೆ ಬಂದವತ್ತು. ಅಂದು ಆಕೆಯೂ ತನ್ನ ತಾಯಿ ಜೊತೆಗೆ ಕಾಲೇಜಿಗೆ ಬಂದಿದ್ಳು. ನಾನು ಜರ್ನಲಿಸಂ ಕಾಂಬಿನೇಷನ್ ಚೂಸ್ ಮಾಡಿದ್ದೆ. ಆಕೆಯಾದ್ರೋ ಹಿಸ್ಟರಿಗೆ ಮೊರೆ ಹೋಗಿದ್ಳು. ಆದ್ರೂ ಒಂದೇ ಕಾಲೇಜಲ್ಲಿ ಪ್ರತಿದಿನ ನೋಡ್ಬೋದಲ್ವಾ ಅನ್ನೋ ಖುಷಿ ನನ್ನಲ್ಲಿತ್ತು.

ಮುಂದಿನ ದಿನಗಳು ನನ್ನ ಪಾಲಿಗೆ ತುಂಬಾನೇ ಸಂತಸ ತಂದಿತ್ತು. ಪ್ರತಿದಿನ ಕಾಲೇಜಿಗೆ ಬಂದು ಆಕೆಯ ಮುಖವನ್ನೊಮ್ಮೆ ನೋಡಿಯೇ ನಾನು ನನ್ನ ಕ್ಲಾಸ್ ರೂಂಗೆ ಹೋಗ್ತಿದ್ದೆ. ಹೀಗೆ ಮತ್ತೆರಡು ವರ್ಷಗಳು ಕಳೆದವು. ನನ್ನ ವನ್ ವೇ ಪ್ರೀತಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿತ್ತು. ಕೊನೆಗೆ ನನ್ನ ಪ್ರೀತಿಯನ್ನು ಅವಳ ಮುಂದೆ ಹೇಳ್ಬೇಕು ಅಂತ ಡಿಸೈಡ್ ಮಾಡಿದ್ದೆ. ಅದೊಂದು ದಿನ ಧೈರ್ಯ ಮಾಡಿ ಆಕೆಯನ್ನು ನನ್ನ ಕ್ಲಾಸ್ ರೂಂಗೆ ಕರೆದು ನಾನಿನ್ನ ಇಷ್ಟಪಡ್ತೀನಿ, ಮದುವೆಯಾಗ್ಬೇಕು ಅಂದ್ಕೊಂಡಿದ್ದೀನಿ ಅಂತ ಹೇಳಿದ್ದೆ. ಆದ್ರೆ ಆಕೆ ಒಲ್ಲೆ ಅಂದಿದ್ದಳು. ಮನೆಯಲ್ಲಿ ಗೊತ್ತಾದ್ರೆ ಪ್ರಾಬ್ಲಂ ಆಗತ್ತೆ, ಸೋ ಬೇಡ.. ದಯವಿಟ್ಟು ನನ್ನು ಮರೆತು ಬಿಡು ಅಂತ ಹೇಳಿದ್ಳು..

ಪ್ರಥಮ ಚುಂಬನಂ ದಂತಭಗ್ನಂ ಅನ್ನೋ ಪರಿಸ್ಥಿತಿ ಉಂಟಾಗಿತ್ತು. ನಾನ್ಯಾವತ್ತೂ ಆಕೆ ನನ್ನನ್ನು ರಿಜೆಕ್ಟ್ ಮಾಡ್ತಾಳೆ ಅನ್ನೋ ನೆಗೆಟೀವ್ ಯೋಚನೆಯನ್ನೇ ಇಟ್ಕೊಂಡಿರ್ಲಿಲ್ಲ. ಅಂತಾದ್ರಲ್ಲಿ ಆಕೆಯ ಮಾತು ಕೇಳಿದಾಗ ತುಂಬಾ ನೋವಾಗಿತ್ತು. ಅದನ್ನು ಅರಗಿಸಿಕೊಳ್ಳೋಕೆ ವಾರಗಳು, ತಿಂಗಳುಗಳೇ ಬೇಕಾಯ್ತು. ಕ್ಲಾಸ್ ಮೇಟ್ಸ್ ಗಳಿಂದ ದೇವದಾಸ್ ಅನ್ನೋ ಬಿಟ್ಟಿ ಪಟ್ಟವೂ  ಸಿಕ್ಕಿತ್ತು...

ಮೊದಲ ಪ್ರೀತಿಯ ನೆನಪುಗಳು ಯಾವತ್ತಿದ್ರೂ ಮರೆತು ಹೋಗಲ್ಲ. ಅವು ಸದಾಕಾಲ ನೆನಪಿನಲ್ಲುಳಿಯತ್ತೆ. ಇವತ್ತಿಗೂ ನನ್ನ ಮೊದಲ ಇ ಮೇಲ್ ಐಡಿಯ ಪಾಸ್ ವರ್ಡ್ ಅವಳ ಹೆಸರೇ ಇದೆ. ನಾನು ಸೆಕೆಂಡ್ ಪಿಯುಸಿನಲ್ಲಿದ್ದಾಗ ಕ್ರಿಯೇಟ್ ಮಾಡಿದ ಇ ಮೇಲ್ ಐಡಿ...

ಅವಳ ನೆನಪುಗಳು, ಅವಳೊಂದಿಗಿನ ಕನಸುಗಳು... ನೆನಪುಗಳ ಬುತ್ತಿಯಲ್ಲಿ ಭದ್ರವಾಗಿದೆ. ಅವಳಿಗೆ ನಾನಿವಾಗ ನೆನಪಿರ್ಲಿಕ್ಕಿಲ್ಲ. ಯಾಕಂದ್ರೆ ಅವಳು ಮದುವೆಯಾಗಿ ಮೂರು ವರ್ಷಗಳೇ ಕಳೆದಿವೆ. ಸುಂದರ ಸಂಸಾರದ ನೌಕೆಯಲ್ಲಿ ಖುಷಿಯಾಗಿದ್ದಾಳೆ ಅಂದ್ಕೊಂಡಿದ್ದೀನಿ..  ಯಾವತ್ತೂ ಖುಷಿಯಾಗಿರ್ಲಿ...

Friday, March 16, 2012

ನನ್ನ ಕನಸು...



ಒಂದು ಮುಂಜಾವಿನಲಿ ಕಂಡ ಸುಂದರ ಕಸನು... 
ಮುದ್ದು ಮುಖದ ಹುಡುಗಿ..
ಪ್ರೀತಿಸೋಕೆ ಮಾತ್ರ ಗೊತ್ತಿರೋ ನಿಷ್ಕಲಷ್ಮ ಮನಸ್ಸು.. 
ಪರಿಚಯ ಗೆಳೆತನಕ್ಕೆ ತಿರುಗಿದಾಗ ಮೊಗದಲ್ಲಿ ನಗು.. 
ಮನದಲ್ಲಿ ಸಣ್ಣದೊಂದು ಸಂತಸ ಮಿಂಚಿ ಮರೆಯಾಗಿತ್ತು..
ಮುಂದೆ ಗೆಳೆತನವನ್ನು ಮೀರಿ ನಿಂತ ಸ್ನೇಹದ ಬೆಸುಗೆ...
ಮೌನವನ್ನೂ ಮರೆಮಾಚುವ ಪಿಸುಗುಟ್ಟುವಿಕೆ... 
                                             ದಿನಗಳು, ವಾರಗಳು, ವರ್ಷಗಳೇ ಕಳೆದು ಹೋದವು...
ಸ್ನೇಹದ ಬೆಸುಗೆ ಸಡಿಲವಾಗದಷ್ಟು ಬಿಗಿಯಾಯ್ತು.. 
ಪ್ರೀತಿಸೋ ಮನಸ್ಸು ಮತ್ತಷ್ಟು ಭಾವನಾತ್ಮಕವಾಯ್ತು..
ಆದ್ರೆ ಅಷೊತ್ತಿಗೆ ಕನಸು ಮುರಿದು ಬಿದ್ದಿತ್ತು.. 
ಮೈಕೊಡವಿಯೆದ್ದಾಗ ಆಕೆ ಬಹುದೂರ ಸಾಗಿದ್ದಳು... 
ಕನಸು ಅಂತ್ಯವಾಗಿತ್ತು.. ಪ್ರೀತಿ ದೂರವಾಗಿತ್ತು... 
ಮತ್ತೊಮ್ಮೆ ಆ ಕನಸು ಅವಳೊಂದಿಗೆ ಬರಬಾರದೆ...

Saturday, February 11, 2012

ನಾಲ್ಕು ವರ್ಷದ ಹಿಂದಿನ ನೆನಪು... ನಾನಾಗ ಬೆಂಗಳೂರಿಗೆ ಕಾಲಿಟ್ಟಿದ್ದ ಆರಂಭದ ದಿನಗಳು. ಖಾಸಗೀ ವಾಹಿನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೆ. ಸಾವಿರಾರು ಕನಸುಗಳು, ನಿರೀಕ್ಷೆಗಳನ್ನಿಟ್ಟುಕೊಂಡಿದ್ದ ನನಗೆ ನನ್ನದೇ ಆದ ಕಲ್ಪನಾ ಲೋಕವೊಂದಿತ್ತು. ನಾನೇ ಕಟ್ಟಿ ಬೆಳೆಸಿದ ಆಳೆತ್ತರದ ಕನಸುಗಳ ಲೋಕವಿತ್ತು. ಈ ನಡುವೆ ಆ ಹುಡುಗಿ ನನ್ನು ಮನಸ್ಸು ಕೆಡಿಸಿದ್ದಳು.
               ನಾ ನಿನ್ನ ತುಂಬಾ ಪ್ರೀತಿಸ್ತೀನಿ ಕಣೋ ಅಂತ ಆಕೆ ಅದೊಂದು ದಿನ ಫೋನ್ ಮಾಡಿ ಹೇಳಿದ್ಳು. ನಂಗೆ ಕೆಲಹೊತ್ತು ಅದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಿರಲಿಲ್ಲ. ಏನ್ ಹೇಳ್ಬೇಕು ಅಂತ ಗೊತ್ತಾಗದೆ ಸುಮ್ಮನಿದ್ದೆ. ಸುನೀ ಪ್ಲೀಸ್ ಕಣೋ, ಇಲ್ಲಾಂತ ಮಾತ್ರ ಹೇಳ್ಬೇಡ, ನಂಗೆ ತಡ್ಕೊಳ್ಳೋಕಾಗಲ್ಲ ಅಂತ ಅತ್ತು ಹೇಳಿದ್ಳು. ಅವಳ್ಯಾವತ್ತೂ ನನ್ನನ್ನು ಸುನೀ ಅಂತನೇ ಹೆಚ್ಚಾಗೀ ಕರೀತಿದ್ದಿದ್ದು. ಅವಳ ಆರ್ದ ದನಿ ಕೇಳಿದಾಗ ನಂಗೂ ಕಣ್ಣಲ್ಲಿ ನೀರು ಬಂದಿತ್ತು.
              ಅವಳು ಪೋನ್ ಮಾಡಿ ತನ್ನ ಪ್ರೀತಿಯ ವಿಚಾರ ಹೇಳಿದ ಒಂದು ವಾರದ ಬಳಿಕ ಮತ್ತೊಮ್ಮೆ ಕಾಲ್ ಮಾಡಿದ್ಳು. ಸುನಿ ನಾಳೆ ನಾನು ಬೆಂಗಳೂರಿಗೆ ಬರ್ತಿದ್ದೀನಿ. ಜೊತೆಗೆ ನನ್ ಕ್ಲಾಸ್ ಮೇಟ್ ಕೂಡ ಇರ್ತಾನೆ. ಒಂದು ಇಂಟರ್ ವ್ಯೂ ಇದೆ ಕಣೋ.. ಬೆಳಿಗ್ಗೆ ನಿನ್ ರೂಮ್ ಗೆ ಬರ್ತೀವಿ ಅಂದಿದ್ಳು. ಮರುದಿನ ಭಾನುವಾರವಾಗಿದ್ರಿಂದ ಆಫೀಸ್ ಗೆ ರಜೆ ಇತ್ತು. 6 ಗಂಟೆಗೆಲ್ಲ ಮೆಜೆಸ್ಟಿಕ್ ನಲ್ಲಿ ಬಸ್ ಇಳ್ಕೊಂಡು ಇಬ್ರೂ ನನ್ನ ರೂಂ ಹತ್ರ ಬಂದಿದ್ಳು. 9 ಗಂಟೆಗೆಲ್ಲ ನಾನು ಅವರ ಜೊತೆಗೆ ಇಂಟರ್ ವ್ಯೂ ಜಾಗಕ್ಕೆ ಹೊರಟಿದ್ದೆ. ಮಧ್ಯಾಹ್ನವಾಗ್ತಿದ್ದಂಗೆ ಇಂಟರ್ ವ್ಯೂ ಮುಗಿದಿತ್ತು. ಮತ್ತೆ ಅವರಿಬ್ಬರನ್ನೂ ಕರ್ಕೊಂಡು ಲಾಲ್ ಭಾಗ್ ತೋರಿಸೋಕೆ ಕರ್ಕೊಂಡು ಹೋಗಿದ್ದೆ. 6 ಗಂಟೆಗೆಲ್ಲ ಮತ್ತೆ ವಾಪಾಸ್ ರೂಂ ಗೆ ಬಂದಿದ್ವಿ.
             10 ಗಂಟೆಗೆ ಅವರಿಗೆ ಮೆಜೆಸ್ಟಿಕ್ ನಿಂದ ವಾಪಾಸ್ ಊರಿಗೆ ಹೊರಡೋಕೆ ಬಸ್. 8.30ಕ್ಕೆ ರೂಮ್ ಬಿಡೋಣ ಅಂದ್ಕೊಂಡಿದ್ದೆ. 8 ಗಂಟೆಗೆ ಊಟ ಮುಗಿಸಿಕೊಂಡ್ವಿ. ಮೂವರೂ ಟೆರೇಸ್ ನ ಕಟ್ಟೆ ಮೇಲೆ ಮಾತಾಡ್ತಾ ಕೂತಿದ್ವಿ. ಅಷ್ಟರಲ್ಲಿ ಸಹಪಾಠಿ ರೀ ಚಾರ್ಜ್ ಮಾಡೋಕೆ ಅಂತ ಕೆಳಗಡೆ ಹೋದ. ಬಹುಷ ಆಕೆ ಅದೇ ಕ್ಷಣಕ್ಕೋಸ್ಕರ ಕಾಯ್ತಿದ್ಳು. ಸುನೀ ನಾನು ಹೇಳಿದ್ರ ಬಗ್ಗೆ ಥಿಂಕ್ ಮಾಡಿದ್ಯಾ.. ಏನ್ ಮಾಡ್ತಿಯಾ ಹೇಳು.. ಅಂದ್ಳು. ಆಕೆ ತನ್ನ ಪ್ರೀತಿಯ ವಿಚಾರ ಹೇಳಿ ಒಂದು ವಾರ ಕಳೆದ್ರೂ ನನಗೊಂದು ನಿರ್ಧಾರಕ್ಕೆ ಬರೋಕೆ ಸಾಧ್ಯವಾಗಿರಲಿಲ್ಲ. ಆಕೆ ನಂಗೂ ಇಷ್ಟ ಆಗಿದ್ಳು. ಆಕೆಯ ತುಂಟತನಗಳೂ. ಆದ್ರೆ ಹಾಗಂತ ನಾನ್ಯಾವತ್ತೂ ಆಕೆಯನ್ನು ಲವ್ ಅನ್ನೋ ದೃಷ್ಟಿಕೋನದಲ್ಲಿ ನೋಡಿರಲಿಲ್ಲ. ಫ್ರೆಂಡ್ಲಿಯಾಗೇ ಇದ್ದೆ. ಆಕೆಯ ಪ್ರೀತಿಗೆ ಒಪ್ಪಿಗೆ ಹೇಳೋದೇನೋ ಸುಲಭವಾಗಿತ್ತು. ಆದ್ರೆ ಮುಂದೆ... ಆಕೆಯನ್ನು ಮದುವೆಯಾಗೋ ವಿಚಾರವಂತೂ ಕನಸೇ.. ಮದುವೆಗೆ ಸಾಕಷ್ಟು ತೊಡಕುಗಳುಂಟಾಗತ್ತೆ ಅನ್ನೋದು ನಂಗೆ ಗೊತ್ತಿತ್ತು. ಹಾಗಾಗಿ ಹೂಂ ಅನ್ನೋಕೆ ಸ್ವಲ್ಪ ಹಿಂದೆ ಮುಂದೆ ನೋಡ್ತಿದ್ದೆ.
              ಅಂದು ರಾತ್ರಿ ನಾನೇನೂ ಸ್ಪಷ್ಟವಾಗಿ ಹೇಳೋಕೆ ಆಗಿರಲಿಲ್ಲ. ಆಕೆ ಜಾಸ್ತಿ ಫೋರ್ಸ್ ಮಾಡಲಿಲ್ಲ. ಅದೇ ಮೌನದಲ್ಲೇ ವಾಪಾಸ್ ಊರಿಗೆ ಹೊರಟ್ಳು. ಊರಿಗೆ ಹೋದ್ಮೇಲೆ ಮತ್ತೆ ನಾಲ್ಕು ದಿನದ ನಂತ್ರ ಫೋನ್ ಮಾಡಿದ್ಳು. ಈ ಬಾರಿ ನಂಗೆ ಏನಾದರೊಂದು ಉತ್ತರ ಹೇಳಲೇ ಬೇಕಾಗಿತ್ತು. ಈ ನಡುವೆ ದೊಡ್ಡದೊಂದು ಡ್ರಾಮಾ ನಡೆದು ಹೋಗಿತ್ತು. ಆಕೆಯ ಆಱೋಗ್ಯಕ್ಕೆ ಸಂಬಂಧಿಸಿ.. ಮಧ್ಯೆ ಅದ್ಯಾವುದೋ ಘಳಿಗೆಯಲ್ಲಿ ನಾನಾಕೆಯ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದೆ...
ಆದ್ರೆ ಮುಂದೆ ಏನೇನೋ ಆಗೋಯ್ತು. ನಾನು ಆಕೆಯ ಪ್ರೀತಿಗೆ ಒಪ್ಪಿಗೆ ಸೂಚಿಸಿದ ಮತ್ತೊಂದು ವಾರದಲ್ಲೇ ಆಕೆಯ ಎಂಗೇಜ್ ಮೆಂಟ್ ಸಹ ಆಗೋಯ್ತು.. ಮತ್ತೆ ತಿಂಗಳೊಳಗಾಗಿ ಧಾಂ ಧೂಂ ಅಂತ ಮದುವೆನೂ ಆಯ್ತು.. ನನಗದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಲಿಲ್ಲ..ಹಾಗಂತ ಭಗ್ನಪ್ರೇಮಿಯಾಗಿ ದೇವದಾಸನಾಗಲಿಲ್ಲ.. ಆಗೋದೆಲ್ಲ ಒಳ್ಳೇದಕ್ಕೇ ಅಂದ್ಕೊಂಡು ಸುಮ್ಮನಾದೆ. ಕೊನೆಗೆ ಆಕೆಯ ಮದುವೆಗೂ ಹೋಗಿ ಅಕ್ಷತೆ ಕಾಳು ಹಾಕಿ ಬಂದಿದ್ದೆ...
                ಇವೆಲ್ಲ ಆಗಿ ಹೆಚ್ಚು ಕಡಿಮೆ ನಾಲ್ಕು ವರ್ಷಗಳೇ ಕಳೆದಿವೆ.. ಮತ್ತೆ ಯಾವುದೇ ಹುಡುಗಿ ಪ್ರೋಪೋಸ್ ಮಾಡಿದಾಗ ಹಳೆಯ ಕಥೆಗಳೆಲ್ಲ ನೆನಪಾಗೋಯ್ತು.. ಹಾಗೆ ಸುಮ್ನೆ ಬರೆದೆ..

Saturday, January 21, 2012

ಮೊಗೆದಷ್ಟೂ ಮುಗಿಯದ ಪ್ರೀತಿ...

ಅವರಿಬ್ಬರೂ ಆಕಸ್ಮಿಕವಾಗಿ ಭೇಟಿಯಾಗಿದ್ದರು. ಅನಿರೀಕ್ಷಿತ ಭೇಟಿ ಅಂದ್ರೂ ತಪ್ಪಾಗದೂ.. ಮೊದಲ ಭೇಟಿಯಲ್ಲೇ ಏನೋ ಆಕರ್ಷಣೆಯಾಗ್ಲಿ, ಇನ್ನೆಂತದ್ದೋ ಖಂಡಿತ ಇರ್ಲಿಲ್ಲ. ಪರಸ್ಪರ ನೋಡಿದ್ರೂ, ಅನಿವಾರ್ಯವಾಗಿ ಮಾತಾಡಿದ್ರು. ವಾರಕ್ಕೊಮ್ಮೆ ಮನಸ್ಸಾದ್ರೆ ಫೋನ್ ಮಾಡಿ ಮಾತಾಡ್ತಿದ್ರು. ಆದ್ರೆ ಮುಂದಿನ ದಿನಗಳಲ್ಲಿ ಇಬ್ರೂ ತುಂಬಾನೇ ಕ್ಲೋಸ್ ಆಗಿಬಿಟ್ಟಿದ್ರು. ಅದು ಹೇಗೆ ಅನ್ನೋದು ನಿಜಕ್ಕೂ ಇಬ್ರಿಗೂ ಗೊತ್ತಿರ್ಲಿಲ್ಲ, ಪರಸ್ಪರ ಆಕರ್ಷಣೆಯಾಗ್ಲಿ, ಸೆಳೆತವಾಗ್ಲೀ ಇರ್ಲಿಲ್ಲ. ಒಬ್ಬರನ್ನೊಬ್ಬರು ನೆನಪಿಸಿಕೊಳ್ಳುವಂತ ಘಟನೆಯಾಗ್ಲಿ, ಅದಕ್ಕೆ ಅವಕಾಶಗಳಾಗ್ಲಿ ಇರ್ಲಿಲ್ಲ. ಆದ್ರೂ ಇಬ್ರೂ ಬಿಟ್ಟಿರೋಕಾಗದಷ್ಟು ಆತ್ಮೀಯರಾಗಿದ್ರು...


ನಾಳೆಯ ಬಗ್ಗೆ ಇಬ್ರಿಗೂ ಚಿಂತೆಯಿದೆ. ಜೀವಮಾನಪೂರ್ತಿ ಇಬ್ರಿಗೂ ಜೊತೆಯಾಗಿರೋಕೆ ಆಗಲ್ಲಾಂತ ಗೊತ್ತು. ಅದಕ್ಕೆ ಸಾಕಷ್ಟು ಕಾರಣಗಳೂ ಇವೆ.. ವಾಸ್ತವಗಳ ಅರಿವಿರೋದ್ರಿಂದ ಕನಸುಗಳು ನನಸಾಗಲ್ಲ ಅನ್ನೋದು ಇಬ್ರಿಗೂ ಗೊತ್ತಿತ್ತು.




ದಿನಗಳು ಕಳೆದು ಹೋಗ್ತಾನೇ ಇವೆ.. ಬೆರಳೆಣಿಕೆಯ ದಿನಗಳು ಮಾತ್ರ ಬಾಕಿಯಿವೆ.. ಬಳಿಕ ಇಬ್ರೂ ಬೇರೆಯಾಗ್ತೀವಿ.. ಶಾಶ್ವತವಾಗಿ... ಅದನ್ನು ಅರಗಿಸಿಕೊಳ್ಳುವ ಮನಸ್ಸಾಗ್ಲೀ, ಧೈರ್ಯವಾಗ್ಲೀ ಇಬ್ರಿಗೂ ಇಲ್ಲ.. ಆದ್ರೂ ತಮ್ಮ ಅಧೈರ್ಯವನ್ನೂ ಯಾರೂ ತೋರ್ಪಡಿಸುತ್ತಿಲ್ಲ.. ಎಲ್ಲೋ ಒಂದ್ಕಡೆ ಇಬ್ರಿಗೂ ಸಮಾಧಾನ ಆಗೋವರ್ಗೂ ಅತ್ತು ಬಿಡ್ಬೇಕು ಅನ್ಸಿದೆ.. ಆದ್ರೆ ಅದು ಕ್ಷಣಕ್ಕೆ ಮಾತ್ರ ಸಮಾಧಾನ ತಂದೀತು... ಪೂರ್ತಿ ಜೀವಮಾನಕ್ಕಲ್ಲ.. ಹಾಗಾದ್ರೆ ಇನ್ನೆಷ್ಟು ದಿನ ಹೀಗೆ ಇರೋದು... .

Wednesday, December 14, 2011

ಮೂರು ವರ್ಷಗಳ ನಂತರ..

ಮಲ್ಲೇಶ್ವರಂ 6th ಕ್ರಾಸ್ ನ ರಸ್ತೆಗಳಲ್ಲಿ ಮೂರು ವರ್ಷಗಳ ಹಿಂದೆ ನಾವಿಬ್ರೂ ಒಟ್ಟಿಗೆ ನಡ್ಕೊಂಡು ಹೋಗಿದ್ವಿ.. ಅವಾಗಿನ್ನೂ ಪರಿಚಯ ಸ್ನೇಹಕ್ಕೆ ತಿರುಗಿದ್ದ ದಿನಗಳು.. ಇಬ್ರೂ ಪರಸ್ಪರ ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೆವು.. ಹಾಗಿದ್ದಾಗ್ಲೇ ಅದೊಂದು ದಿನ ಮಲ್ಲೇಶ್ವರಂನಲ್ಲಿ ಇಬ್ರೂ ಭೇಟಿಯಾಗಿದ್ವಿ.. ಹಾಗೆ ಮಾತಾಡ್ತಾ ಮಾತಾಡ್ತಾ 6th ಕ್ರಾಸ್ ನ ರಸ್ತೆಯಲ್ಲಿ ವಾಕ್ ಮಾಡ್ತಿದ್ವಿ.. ಅದು ಇಳಿ ಸಂಜೆಯ ಸುಂದರ ವಾತಾವರಣ.. ಹಾಗೆ ನಡ್ಕೊಂಡು ಹೋಗ್ತಿರ್ಬೇಕಾದ್ರೆ ನಾನಾಕೆಯ ಅಂಗೈ ಹಿಡ್ಕೊಂಡಿದ್ದೆ. ಪರಸ್ಪರ ಕೈ ಹಿಡ್ಕೊಂಡು ನಾವಿಬ್ರೂ ಹೆಜ್ಜೆ ಹಾಕುವಾಗ ನಮಗರಿವಿಲ್ಲದಂತೆ ಆತ್ಮೀಯತೆ ಬೆಳೆದುಕೊಂಡಿತ್ತು.. ನಮ್ಮಿಬ್ಬರ ಗೆಳೆತನ ಮತ್ತಷ್ಟು ಗಟ್ಟಿಯಾಗಿತ್ತು.. ಇವೆಲ್ಲ ಮೂರು ವರ್ಷಗಳ ಹಿಂದಿನ ನೆನಪು.. ಇದಾದ ಬಳಿಕ ನಾವಿಬ್ಬರೂ ಭೇಟಿಯಾಗಿರಲಿಲ್ಲ.. ನಾನೊಂದು ತೀರ, ಅವಳೊಂದು ತೀರ ಎನ್ನುವಂತೆ ಇಬ್ರೂ ದೂರ ದೂರ ಇದ್ವಿ..


ಆದ್ರೆ ನಿನ್ನೆ ಸಂಜೆ ಮತ್ತೆ ನಾವಿಬ್ರೂ ಭೇಟಿಯಾಗಿದ್ವಿ.. ಅದೇ ಮಲ್ಲೇಶ್ವರಂ 6th ಕ್ರಾಸ್ ನಲ್ಲೇ.. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಅದೇ ರಸ್ತೆಯಲ್ಲಿ ಕೈ ಕೈ ಹಿಡ್ಕೊಂಡು ಹೆಜ್ಜೆ ಹಾಕಿದ್ವಿ.. ಇದಾದ ಬಳಿಕ ವೇಣುಗೋಪಾಲ ಸ್ವಾಮಿ ದೇವಾಲಯದ ಸುಂದರ ಪರಿಸರದಲ್ಲಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತಿದ್ವಿ.. ಕತ್ತಲಾಗ್ತಿದ್ದಂಗೆ ನಿಧಾನಕ್ಕೆ ಅಲ್ಲಿಂದ ಹೊರಟು ಸಣ್ಣದೊಂದು ಶಾಪಿಂಗ್ ಮುಗಿಸಿ ಮೊದ್ಲು ಯಾವತ್ತೂ ಹೋಗ್ತಿದ್ದ ಹೋಟೆಲ್ ನತ್ತ ಹೆಜ್ಜೆ ಹಾಕಿದ್ದೆವು.. ಇಬ್ರಿಗೂ ಹಸಿವಿರಲಿಲ್ಲ.. ಆದ್ರೂ ಆ ಹೋಟೆಲ್ ಗೆ ಹೋಗೋಕೆ ಆಸೆ.. ಫಸ್ಟ್ ಫ್ಲೋರ್ ನ ಅದೇ ಮೂಲೆ ಟೇಬಲ್ ಖಾಲಿಯಿತ್ತು.. ಇಬ್ರೂ ಹೋಗಿ ಒಂದೊಂದು ಕಪ್ ಟೀ ಕುಡಿದು ಸ್ವಲ್ಪ ಹೊತ್ತು ಮಾತಾಡಿ ವಾಪಾಸ್ ಹೊರಟಿದ್ದೆವು..


ಹಳೆಯ ನೆನಪುಗಳು ಯಾವತ್ತಿದ್ರೂ ಸುಮಧುರ.. ಅದು ನಮ್ಮ ಪ್ರೀತಿಪಾತ್ರರ ಬಗ್ಗೆಯಾಗುವಾಗ ಮತ್ತಷ್ಟು ಮಧುರವಾಗಿರತ್ತೆ.. ನೆನಪುಗಳ ಬುತ್ತಿಯನ್ನು ಮತ್ತೊಮ್ಮೆ ಸವಿಕ್ಷಣಗಳೊಂದಿಗೆ ತುಂಬಿಸಿಟ್ಟಿದ್ದೀನಿ.. ಮತ್ತೆ ಯಾವತ್ತಾದ್ರೂ ನೆನೆಸಿಕೊಳ್ಳೋಕೆ...

Wednesday, November 2, 2011

ಮತ್ತೆ ಕ್ಲಾಸ್ ರೂಮ್ ನತ್ತ ಹೆಜ್ಜೆ..

ಕಾಲೇಜು ಜೀವನ ಮುಗಿದು ನಾಲ್ಕು ವರ್ಷಗಳೇ ಕಳೆದಿವೆ.. ಆದ್ರೂ ಕಾಲೇಜಿನ ಬಗ್ಗೆ ಇರೋ ಮೋಹ, ಪ್ರೀತಿ ಇನ್ನೂ ಕಡಿಮೆಯಾಗಿಲ್ಲ. ಕಾಲೇಜು ಲೈಫೇ ಅಂತದ್ದೂ.. ಮನಸ್ಸಿಗೆ ಮುದ ನೀಡುವ ಸಂತಸದ ದಿನಗಳು.. ಮೆಲುಕು ಹಾಕುತ್ತಾ ಹೋದ್ರೆ ಮುಗಿಯಲಾರದಷ್ಟು ನೆನಪುಗಳು...

ಕಾಲೇಜು ಮುಗಿದಮೇಲೂ ಬಹುತೇಕ ಕ್ಲಾಸ್ ಮೇಟ್ಸ್ ಜೊತೆಗೆ ಸಂಪರ್ಕವಿತ್ತು. ಆದ್ರೆ ಬೆರಳೆಣಿಕೆಯ ಜನರು ಎಲ್ಲಿದ್ದಾರೋ ಗೊತ್ತಿಲ್ಲ. ಪ್ರತಿ ಬಾರಿ ಫ್ರೆಂಡ್ಸ್ ಫೋನ್ ಮಾಡಿದಾಗ್ಲೂ ಒಂದ್ಸಲ ಎಲ್ರೂ ಮೀಟ್ ಆಗೋಣ ಅಂತ ಹೇಳ್ತಿದ್ರು. ನಾಲ್ಕು ವರ್ಷಗಳಿಂದ ಎಲ್ರೂ ಒಂದೆಡೆ ಮೀಟ್ ಆಗ್ಬೇಕು ಅಂದ್ಕೊಂಡ್ರೂ ಆಗಿರಲಿಲ್ಲ. ಆದ್ರೆ ಇದೀಗ ಅದಕ್ಕೆ ಸಮಯ ಕೂಡಿ ಬಂದಿದೆ. ಬರೋಬ್ಬರಿ ನಾಲ್ಕು ವರ್ಷಗಳ ನಂತ್ರ, ಈ ಕೂಡುವಿಕೆಗೆ ಸಾಕ್ಷಿಯಾಗಲಿರೋ ಜಾಗ ಬೇರ್ಯಾವುದೂ ಅಲ್ಲ, ಅದೇ ಉಜಿರೆ..

ಒಟ್ಟು ಎರಡು ದಿನಗಳ ಪ್ರೋಗ್ರಾಂ ಚಾರ್ಟ್. ಡಿಸೆಂಬರ್ 25 ಭಾನುವಾರ. ಅಂದು ಎಲ್ರೂ ಉಜಿರೆಯಲ್ಲಿ ಒಟ್ಟಾಗಿ ಬಳಿಕ ಒಂದು ದಿನದ ಪಿಕ್ ನಿಕ್ ಗೆ ಹೋಗೋ ಪ್ಲಾನ್. ಎಲ್ಲಿಗೆ ಹೋಗೋದು ಅನ್ನೋದನ್ನು ಇನ್ನೂ ಡಿಸೈಡ್ ಮಾಡಿಲ್ಲ. ಅಕ್ಕಪಕ್ಕದ ಯಾವುದಾದ್ರೂ ಫಾಲ್ಸ್ ಗಳಿಗೆ ಹೋಗೋ ಚಿಂತನೆ ಇದೆ. ಎಲ್ಲರ ಜೊತೆಗೆ ಚರ್ಚಿಸಿ ಈ ಬಗ್ಗೆ ಫೈನಲ್ ಮಾಡಲಾಗುವುದು. ಬೆಳಿಗ್ಗೆಯಿಂದ ಸಂಜೆವರೆಗೆ ಜೊತೆಗಿದ್ದು ಬಳಿಕ ಉಜಿರೆಗೆ ಮರಳಿ ಸಾಧ್ಯವಾದ್ರೆ ಎಲ್ಲಾದ್ರೂ ಒಂದ್ಕಡೆ ಕ್ಯಾಂಪ್ ಫೈರ್ ಹಾಕೊಂಡು ಇರೋಕೆ ಎಲ್ಲರ ಒಪ್ಪಿಗೆ ಸಿಗ್ಬೇಕು.

ಡಿಸೆಂಬರ್ 26 ಸೋಮವಾರ. ಬಹುನಿರೀಕ್ಷಿತ ದಿನ. ಯಾಕಂದ್ರೆ ಅಂದು ನಾವೆಲ್ರೂ ಮತ್ತೆ ನಾಲ್ಕು ವರ್ಷದ ಹಿಂದಿನಂತೆ ಕಾಲೇಜಿಗೆ ಹೋಗ್ಬೇಕು. ಡಿಗ್ರಿಯಲ್ಲಿದ್ದಂತೆ ಕ್ಲಾಸ್ ರೂಮ್ ಗೆ ಹೋಗಿ ವಿದ್ಯಾರ್ಥಿಗಳಂತೆ ಕೂತ್ಕೋಬೇಕು. ಡಿಗ್ರಿಯಲ್ಲಿ ನಮಗೆ ಪಾಠ ಮಾಡ್ತಿದ್ದ ಉಪನ್ಯಾಸಕರೆಲ್ಲ ಬಂದು ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಮೋಸ್ಟ್ ಇಂಟರೆಸ್ಟಿಂಗ್ ಅಂದ್ರೆ, ಸ್ವತಃ ನಮ್ಮ ಪ್ರಿನ್ಸಿ ಯಶೋವರ್ಮ ಸರ್ ಸಹ ಬಂದು ಕ್ಲಾಸ್ ತಗೋತೀನಿ ಅನ್ನೋ ಭರವಸೆಯನ್ನು ಹಿಂದೆ ನೀಡಿದ್ದಾರೆ.



ಜೊತೆಗೆ ಭಾಸ್ಕರ್ ಹೆಗ್ಡೆ, ಶೈಲೇಶ್, ಬಿಪಿ ಸಂಪತ್, ಶಂಕರ್ ನಾರಾಯಣ್, ಸೂರ್ಯ ನಾರಾಯಣ್ ಸೇರಿದಂತೆ ನಮಗೆ ಪಾಠ ಮಾಡಿದ ಉಪನ್ಯಾಸಕರು ತರಗತಿಗೆ ಬರಲಿದ್ದಾರೆ. ಒಂದು ಗಂಟೆ ಪಾಠ ಮಾಡಲಿದ್ದಾರೆ. ಈ ವಿಚಾರದ ಬಗ್ಗೆ ಮಾತಾಡ್ತಿದ್ದಾಗ ಮೊನ್ನೆಯಷ್ಟೇ ಶೈಲೇಶ್ ಸರ್ ಒಂದು ಮಾತು ಕೇಳಿದ್ರು. ನೀವು ಮೊದ್ಲಿನ ಥರಾನೇ ಕೀಟಲೆ ಮಾಡ್ತೀರಾ ಅಂತ.. ನಾನದಿಕ್ಕೆ ಹೌದು ಅಂದಿದ್ದೆ. ಅದ್ಕೆ ಅವ್ರು ಹೇಳಿದ್ರು, ಹಾಗಾದ್ರೆ ನಾವು ಮೊದ್ಲಿನ್ ತರಾನೇ ಬೈದು ಕ್ಲಾಸ್ ನಿಂದ ಹೊರಗೆ ಹಾಕ್ತೀವಿ ಅಂತ... ತಮಾಷೆಗೆ ಹೇಳಿದ್ರಷ್ಟೇ.. ಆದ್ರೆ ಅದು ಏನೇ ಆಗ್ಲಿ, ಆ ಕ್ಷಣಗಳನ್ನು ಅನುಭವಿಸೋಕೆ ನಾವೆಲ್ಲ ತುದಿಗಾಲಲ್ಲಿ ನಿಂತಿದ್ದೀವಿ.

ಭಾಸ್ಕರ್ ಹೆಗ್ಡೆ ಸರ್ ಗೆ ಫೋನ್ ಮಾಡಿ ಈ ವಿಷಯ ಹೇಳಿದಾಗ ಅವ್ರು ಹೇಳಿದ್ರು, ನೀವು ಕಾಲೇಜಲ್ಲಿ ಹೊಸ ಟ್ರೆಂಡ್ ಸ್ಟಾರ್ಟ್ ಮಾಡ್ತೀರಾ ಅಂತ.. ಇದುವರೆಗೆ ನಮ್ಮ ಎಸ್ ಡಿ ಎಂ ಕಾಲೇಜಲ್ಲಿ ಇಂತಹ ಪ್ರಯೋಗ ಯಾರೂ ಮಾಡಿಲ್ಲ. ಹಾಗಾಗಿ ಇದು ಯಶಸ್ವಿಯಾದ್ರೆ ಅದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಕಾಲೇಜಿನ ಇತಿಹಾಸದ ಸುವರ್ಣಾಕ್ಷರಗಳಲ್ಲಿ ನಮ್ಮ ಸಾಧನೆ ಯಾವತ್ತಿಗೂ ಇರುತ್ತೆ.

ಪ್ರತಿಯೊಬ್ರೂ ಬಿಡುವು ಮಾಡ್ಕೊಂದು ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಸಾಧ್ಯವಾದಷ್ಟು ಪ್ರತಿಯೊಬ್ರಿಗೂ ಫೋನ್ ಮಾಡಿ 25 ಮತ್ತು 26ಕ್ಕೆ ಫ್ರೀ ಮಾಡೋಕೆ ಹೇಳಿದ್ದೀವಿ. ಎಷ್ಟು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಅನ್ನೋದೆ ಸದ್ಯದ ಪ್ರಶ್ನೆ.

ಕಾರ್ಯಕ್ರಮದ ಬಗ್ಗೆ ಏನೇ ಸಲಹೆ, ಅನಿಸಿಕೆ ಇದ್ರೂ ದಯವಿಟ್ಟು ನನಗೆ ಅಥವಾ ದಾಮುಗೆ ಫೋನ್ ಮಾಡಿ. 9980914181 ಅಥವಾ 9986046667- ಇದು ನನ್ನ ಫೋನ್ ನಂಬರ್. ದಾಮುಗೆ ಕರೆ ಮಾಡೋಕೆ 9916821201 ಗೆ ರಿಂಗ್ ಮಾಡಿ.. ಬದಲಾವಣೆಗಳಿದ್ದಲ್ಲಿ ಕೆಳಗಡೆ ಕಮೆಂಟ್ ಬಾಕ್ಸ್ ನಲ್ಲೂ ಬರೆದು ಹಾಕಬಹುದು....

Monday, October 31, 2011

ಕಾಲೇಜಿನ ನೆನಪುಗಳು ಮತ್ತೊಮ್ಮೆ..

ನಿನ್ನೆಯಷ್ಟೇ ಅಕ್ಷತಾ ಕಾಲೇಜು ಜೀವನದ ಸವಿನೆನಪುಗಳನ್ನು ಮತ್ತೆ ಮೆಲುಕು ಹಾಕುವ ಒಂದಷ್ಟು ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ಳು.. ಆ ಮೂಲಕ ಕಳೆದು ಹೋದ, ಮತ್ತೆಂದು ಬಾರದ ಆ ದಿನಗಳ ಬಗ್ಗೆ ಮತ್ತಷ್ಟು ಆಸೆಯನ್ನು ಮನಸ್ಸಿನ ಮೂಲೆ ಮೂಲೆಗೂ ತುಂಬಿದ್ದಾಳೆ..

ಮೂರು ವರ್ಷದ ಡಿಗ್ರೀ ಲೈಫ್ ಅವಿಸ್ಮರಣೀಯ... ಪ್ರತಿಯೊಬ್ಬರಿಗೂ ಅವರವರ ಕಾಲೇಜು ಲೈಫ್ ತುಂಬಾ ಮೆಮೊರಬಲ್ ಆಗಿರತ್ತೆ.. ನಮ್ಮದೂ ಹಾಗೆ ಅನಿಸ್ಬೋದು.. ಆದ್ರೆ ಬೇರೆಯವ್ರಿಗಿಂತ ವಿಭಿನ್ನವಾದ ಹಲವಾರು ಅನುಗಳನ್ನು ನಾವು ಪಡ್ಕೊಂಡಿದ್ವಿ..

ಫಸ್ಟ್ ಇಯರ್ ನಲ್ಲಿ ಯಾರೂ ಅಷ್ಟೊಂದು ಪರಿಚಿತರಾಗಿರಲಿಲ್ಲ. ಪಿಯುಸಿನಲ್ಲಿ ಒಟ್ಟಿಗಿದ್ದವರು ಮಾತ್ರ ಹೆಚ್ಚು ಮಿಂಗಲ್ ಆಗ್ತಿರ್ತಿದ್ರು.. ಆದ್ರೆ ದಿನಗಳೆದಂತೆ ಡಿಗ್ರಿಗೆ ಹೊಸದಾಗಿ ಸೇರ್ಕೊಂಡವ್ರು ಎಲ್ರ ಜೊತೆಗೆ ಕ್ಲೋಸ್ ಆಗತೊಡಗಿದ್ರು. ನಮ್ಮ ಜರ್ನಲಿಸಂ ಕ್ಲಾಸ್ ಒಂದು ಕುಟುಂಬದಂತೆ ಆಗಿತ್ತು. ಇದಕ್ಕೆಲ್ಲ ಮುಖ್ಯ ಕಾರಣ ಅಂದ್ರೆ ನಮ್ಮ ಜರ್ನಲಿಸಂ ಲೆಕ್ಟರರ್ ಭಾಸ್ಕರ್ ಹೆಗಡೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ ನಮಗೆ ಅಷ್ಟೊಂದು ಫ್ರೀಡಂ ಕೊಟ್ಟಿದ್ರು. ಮಾತ್ರವಲ್ಲ ಒಂದು ಕುಟುಂಬದಂತೆ ಇರೋಕೆ ಬೇಕಾದ ಪೂರಕ ವಾತಾವರಣವನ್ನು ಅವರೇ ಕಲ್ಪಿಸಿಕೊಟ್ಟಿದ್ರು.

ನಮ್ಮೆಲ್ಲರ ಆತ್ಮೀಯತೆಗೆ ಹೆಚ್ಚಿನ ಪಾತ್ರ ವಹಿಸಿದ್ದು ಜರ್ನಲಿಸಂ ಲ್ಯಾಬ್ ಅಂದ್ರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ ಇಡೀ ಕಾಲೇಜಲ್ಲಿ ಡಿಸಿಪ್ಲಿನ್ ಕಮಿಟಿಯವ್ರು ಬರದೆ ಇದ್ದ ಜಾಗ ಅಂದ್ರೆ ಬಹುಶ ಅದೊಂದೇ ಆಗಿತ್ತು. ಬೇರೆಲ್ಲ ಕ್ಲಾಸ್ ಗಳತ್ತನೂ ಡಿಸಿಪ್ಲಿನ್ ಕಮಿಟಿಯಲ್ಲಿದ್ದ ಲೆಕ್ಟರರ್ಸ್ ಒಂದು ಕಣ್ಣಿಟ್ಟಿದ್ರು. ಯಾವುದಾದ್ರೂ ಒಂದು ಕ್ಲಾಸ್ ನಿಂದ ಸ್ವಲ್ಪ ಜಾಸ್ತಿ ಸೌಂಡ್ ಬಂದ್ರೂ ಅತ್ತ ಓಡೋಡಿ ಹೋಗ್ತಿದ್ರು. ಆದ್ರೆ ನಮ್ಮ ಜರ್ನಲಿಸಂ ಲ್ಯಾಬ್ ಇದ್ದಿದ್ದು ಬೇಸ್ ಮೆಂಟ್ ನಲ್ಲಿ. ಮಾತ್ರವಲ್ಲ ಪಕ್ಕದಲ್ಲೇ ನಮ್ಮ ಜರ್ನಲಿಸಂ ಡಿಪಾರ್ಟ್ ಮೆಂಟ್ ಸಹ ಇತ್ತು. ನಮ್ಮ ಡಿಪಾರ್ಟ್ ಮೆಂಟ್ ನ ಏಕೈಕ ಲೆಕ್ಚರರ್ ಕಂ ಹೆಚ್ಒಡಿ ಭಾಸ್ಕರ್ ಹೆಗ್ಡೆ ಯವರನ್ನು ದಾಟಿ ಯಾವ ಲೆಕ್ಟರರ್ಸ್ ಕೂಡ ಜರ್ನಲಿಸಂ ಲ್ಯಾಬ್ ಒಳಗೆ ಕಾಲಿಡ್ತಿರ್ಲಿಲ್ಲ.





ಹಾಗಾಗಿ ನಾವೆಷ್ಟೇ ಕೂಗಾಡಿದ್ರೂ, ಕೇಕೆ ಹಾಕಿದ್ರೂ ಬೇರೆ ಯಾರೂ ಬಂದು ಕೇಳ್ತಿರ್ಲಿಲ್ಲ. ತೀರಾ ಸೌಂಡ್ ಜಾಸ್ತಿಯಾದಾಗ ಭಾಸ್ಕರ್ ಹೆಗ್ಡೆ ಸರ್ ಬಂದು ಏನಾಯ್ತು ಅಂತ ಅದೇ ತಾಳ್ಮೆ ಬೆರೆತ ಧ್ವನಿಯಲ್ಲಿ ಕೇಳ್ತಿದ್ರು. ಅವರ ತಾಳ್ಮೆಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.. ಆದ್ರೆ ಅವರು ಅಷ್ಟು ಹೇಳಿ ಲ್ಯಾಬ್ ನಿಂದ ಆಚೆ ಹೋಗ್ತಿದ್ದಂಗೆ ಮತ್ತೆ ನಮ್ಮ ಆರ್ಭಟ ಯಥಾಸ್ಥಿತಿಗೆ ಮರಳುತ್ತಿತ್ತು. ಇದು ಎಂದಿನ ದಿನಚರಿಯಾಗಿತ್ತು. ನಮ್ಮಲ್ಲಿ ಯಾರದಾದ್ರೂ ಬರ್ತ್ ಡೇ ಅಥವಾ ಇನ್ಯಾವುದೋ ಫಂಕ್ಷನ್ ಇದ್ರೆ ಕೇಳೋದೆ ಬೇಡ. ಕ್ಲಾಸ್ ಕಟ್, ಎಂಜಾಯ್ ಮೆಂಟ್ ಸ್ಟಾರ್ಟ್. ಪ್ರತಿಯೊಬ್ಬರ ಬರ್ತ್ ಡೇಯನ್ನೂ ನೆನಪಿಟ್ಟುಕೊಂಡಿದ್ದ ದೀಕ್ಷಾ ತಲೆಯಲ್ಲಿ ಅದ್ಯಾವ ಮೆಮೊರಿ ಕಾರ್ಡ್ ಇಟ್ಕೊಂಡಿದ್ಳೋ ಗೊತ್ತಿಲ್ಲ..

ಸೆಕೆಂಡ್ ಇಯರ್ ಎಂಡ್ ವರೆಗೂ ನಮ್ಮ ನೆಟ್ಟಿನ ಜರ್ನಲಿಸಂ ಲ್ಯಾಬ್ ಇತ್ತು. ಆದ್ರೆ ಫೈನಲ್ ಇಯರ್ ಗೆ ಬರ್ತಿದ್ದಂಗೆ ಪ್ರೀತಿಯ ಜರ್ನಲಿಸಂ ಲ್ಯಾಬ್ ಕಾಣೆಯಾಗಿತ್ತು. ಸ್ಟುಡಿಯೋ ಪರ್ಪಸ್ ಗೋಸ್ಕರ ಲ್ಯಾಬನ್ನು ತೆರವುಗೊಳಿಸಿದ್ರು. ಹಾಗಾಗಿ 0-2ನಲ್ಲಿ ಕುಳಿತು ಪಾಠ ಕೇಳುವ ಅನಿವಾರ್ಯ ಪರಿಸ್ಥಿತಿ ಉಂಟಾಗಿತ್ತು. ಅದೂ ಕಾರಿಡಾರ್ ಪಕ್ಕದಲ್ಲೇ. ಹಾಗಾಗಿ ಆರಂಭದಲ್ಲಿ ನಮ್ಮ ಆರ್ಭಟಕ್ಕೆ ಕೊಂಚ ಬ್ರೇಕ್ ಇದ್ದಿತ್ತು. ಆದ್ರೆ ಆ ಕ್ಲಾಸ್ ರೂಮ್ ಗೆ ಒಗ್ಗಿಕೊಳ್ತಿದ್ದಂಗೆ ನಿಧಾನವಾಗಿ ಮತ್ತೆ ಹಳೇ ಚಾಳಿ ಆರಂಭಿಸಿದ್ವಿ.

ಮೂರು ವರ್ಷದ ಸವಿನೆನಪುಗಳು ಸಾಕಷ್ಟಿವೆ. ಒಂದೊಂದಾಗಿ ಬರೀತೀನಿ.. ನಿಮಲ್ಲಿ ಆ ಮೂರು ವರ್ಷಗಳ ನೆನಪುಗಳಿದ್ರೆ ಶಾರ್ಟ್ ಆಗಿಯಾದ್ರೂ ಕಮೆಂಟ್ ಬಾಕ್ಸ್ ನಲ್ಲಿ ಹಾಕಿ.. ಅದನ್ನೇ ಮೂಲ ಪ್ರತಿಯಾಗಿರಿಸಿ ನೆನಪುಗಳ ಹಂದರವನ್ನು ಮತ್ತಷ್ಟು ಬಿಚ್ಚಿಡೋಣ....

Monday, October 10, 2011

ನಕ್ಸಲ್ ಹಾದಿ...???

ಎರಡು ದಿನಗಳ ರಜೆಯ ನಿಮಿತ್ತ ಶುಕ್ರವಾರವಷ್ಟೇ ಊರಿಗೆ ಹೋಗಿದ್ದೆ.. ಶನಿವಾರ ಬೆಳಿಗ್ಗೆ ಎದ್ದು ಟಿವಿ ಹಾಕ್ತಿದ್ದಂಗೆ ಬೆಳ್ತಂಗಡಿ ಸಮೀಪ ಸವಣಾಲು ಗ್ರಾಮದಲ್ಲಿ ನಕ್ಸಲರು ಮತ್ತು ಪೊಲೀಸರ ಮಧ್ಯೆ ನಡೆದ ಗುಂಡಿನ ಚಕಮಕಿಯ ಬ್ರೇಕಿಂಗ್ ನ್ಯೂಸ್ ಬರ್ತಿತ್ತು. ಎಎನ್ಎಫ್ ಸಿಬ್ಬಂದಿ ಮೃತಪಟ್ಟ ಬಗ್ಗೆಯೂ ವರದಿ ಪ್ರಸಾರವಾಗ್ತಿತ್ತು. ಫೋನ್ ಮೂಲಕ ಸ್ಥಳೀಯ ವರದಿಗಾರರಿಂದ ಕೆಲವು ಮಾಹಿತಿ ಪಡೆದ ನಾನು ಕಚೇರಿಗೆ ಫೋನಾಯಿಸಿ ಕೆಲವು ಪಾಯಿಂಟ್ಸ್ ಕೊಟ್ಟಿದೆ. 9 ಗಂಟೆ ನ್ಯೂಸ್ ಗೆ ನಂಗೆ ಫೋನೋ ಕನೆಕ್ಟ್ ಮಾಡಿದ್ರು...

ಮತ್ತೆ ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಮಧ್ಯಾಹ್ನ ಎಷ್ಟೊತ್ತಿಗೋ ಟಿವಿ ಆನ್ ಮಾಡಿದಾಗ ಮಹದೇವ ಮಾನೆ ಅನ್ನೋ ಎಎನ್ಎಫ್ ಸಿಬ್ಬಂದಿ ಮೃತಪಟ್ಟ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾಯ್ತು. ನಕ್ಸಲರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಮಾನೆಯ ಬೆನ್ನಿಗೆ ಗುಂಡು ಬಿದ್ದ ವಿಷಯ ಗೊತ್ತಾದಾಗ ಶಾಕ್ ಆಯ್ತು.. ಯಾಕಂದ್ರೆ ಗುಂಡಿನ ಚಕಮಕಿಯ ವೇಳೆ ಹೊಟ್ಟೆಗೆ ಗಂಡು ಬೀಳೋದು ಸಹಜ. ಆದ್ರೆ ಬೆನ್ನಿಗೆ ಬೀಳ್ಬೇಕಾದ್ರೆ ನಕ್ಸಲರು ಹಿಂದಿನಿಂದ ಗುಂಡು ಹೊಡೆದ್ರಾ ಅನ್ನೋದು ಪ್ರಶ್ನೆ..

ಇದೇ ಕುತೂಹಲದಲ್ಲಿ ಮರುದಿನ ಕೆಲವು ವರದಿಗಾರರಲ್ಲಿ ಈ ಬಗ್ಗೆ ವಿಚಾರಿಸಿದೆ. ಕೆಲವರು ಹೇಳಿದ್ರು, ಇದು ನಕ್ಸಲರು ಹಾರಿಸಿದ ಗುಂಡಲ್ಲ, ಬದಲಾಗಿ ಎಎನ್ಎಫ್ ಸಿಬ್ಬಂದಿಗಳ ಬಂದೂಕಿನಿಂದಲೇ ಸಿಡಿದ ಗುಂಡು. ಆದ್ರೆ ತಮ್ಮ ತಪ್ಪನ್ನು ಮುಚ್ಚಿಹಾಕೋದಿಕ್ಕಾಗಿ ನಕ್ಸಲರ ವಿರುದ್ಧ ಬೊಟ್ಟು ಮಾಡಿ ತೋರಿಸಿದ್ದಾರೆ ಎಂದು.. ಮತ್ತೊಂದೆಡೆ, ಇಲ್ಲ ನಕ್ಸಲರ ಇರುವಿಕೆ ಗೊತ್ತಾಗಿ ಎಎನ್ಎಫ್ ಸಿಬ್ಬಂದಿಗಳು ಗುಂಡು ಹಾರಿಸೋಕೆ ಮುಂದಾಗಿದ್ರು. ಆದ್ರೆ ರೈಫಲ್ ಕೈಕೊಟ್ಟ ಕಾರಣದಿಂದಾಗಿ ಹಿಂದಕ್ಕೋಡಿದ್ರು. ಈ ಸಂದರ್ಭದಲ್ಲಿ ನಕ್ಸಲರು ಹಾರಿಸಿದ ಗುಂಡು ಮಾನೆ ಅವರ ಬೆನ್ನಿಗೆ ಹೊಕ್ಕಿತು ಅನ್ನೋದು ಇನ್ನೂ ಕೆಲವರ ಅಭಿಪ್ರಾಯ.. ಈ ಬಗ್ಗೆ ಬಿಪಿನ್ ಗೋಪಾಲಕೃಷ್ಣ ನೇತೃತ್ವದ ತಂಡ ತನಿಖೆ ಪೂರ್ಣಗೊಳಿಸಿದ ಮೇಲಷ್ಟೇ ಸತ್ಯ ಹೊರಬೀಳಲಿದೆ. ಆದ್ರೆ ಒಂದಂತೂ ಸತ್ಯ, ಎಎನ್ಎಫ್ ಸಿಬ್ಬಂದಿಗಳು ಹಾರಿಸಿದ ಗುಂಡಿನಿಂದಲೇ ಮಾನೆ ಮೃತಪಟ್ಟಿದ್ದು ಧೃಢವಾದ್ರೆ ಆ ಸತ್ಯ ಹೊರಜಗತ್ತಿಗೆ ತಿಳಿಯುವ ಸಾಧ್ಯತೆಗಳು ತೀರಾ ಕಡಿಮೆ...!

ಬೆಳ್ತಂಗಡಿ ತಾಲೂಕಿನಲ್ಲಿ ನಕ್ಸಲ್ ಚಟುವಚಿಕೆ ಇದೆ ಅನ್ನೋದು ಹೊರಜಗತ್ತಿಗೆ ಗೊತ್ತಾಗಿದ್ದೇ ಕಳೆದ ಮೂರು ವರ್ಷಗಳಿಂದೀಚೆಗೆ.. ಬೆಳ್ತಂಗಡಿಯ ಕುತ್ಲೂರು ಗ್ರಾಮದಲ್ಲಿ ಅಕ್ರಮವಾಗಿ ನಕ್ಸಲರು ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳು ದೊರೆತ ಮೇಲಷ್ಟೇ ಇದು ಗೊತ್ತಾಗಿದ್ದು. ಆದ್ರೆ ಇದಕ್ಕೂ ಮುನ್ನವೇ ಇಲ್ಲಿ ನಕ್ಸಲ್ ಚಟುವಟಿಕೆ ಇತ್ತೋ ಇಲ್ವೋ ಅನ್ನೋದು ಗ್ರಾಮಸ್ಥರಿಗಷ್ಟೇ ಗೊತ್ತು. ಯಾಕಂದ್ರೆ ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳ ತಪ್ಪಲಿನ ಹಳ್ಳಿಗಳಲ್ಲಿ ನಕ್ಸಲರು ಓಡಾಡ್ತಾನೇ ಇರ್ತಾರೆ.. ಗ್ರಾಮಸ್ಥರ ಮನಪರಿವರ್ತನೆ ಮಾಡೋಕೆ ಪ್ರಯತ್ನ ಮಾಡ್ತಾನೇ ಇರ್ತಾರೆ..

ಪುಷ್ಪಗಿರಿ ವನ್ಯಧಾಮ ವಿಸ್ತರಣೆ ವಿಚಾರ ಸದ್ಯಕ್ಕೆ ಬೆಳ್ತಂಗಡಿ, ಸುಳ್ಯ ಮತ್ತು ಪುತ್ತೂರು ತಾಲೂಕಿನ ಜನತೆಯ ನಿದ್ದೆಗೆಡಿಸಿದೆ. ಬೆಳ್ತಂಗಡಿ ತಾಲೂಕಿನ ಶಿಶಿಲ, ಶಿಬಾಜೆ, ಪುದುವೆಟ್ಟು, ಅರಸಿನಮಕ್ಕಿ ಮತ್ತು ನೆರಿಯಾ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ, ಸುಳ್ಯ ತಾಲೂಕಿನ ಸುಬ್ರಮಣ್ಯ, ಐನೆಕಿಡು, ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರ ಗ್ರಾಮಗಳು ಹಾಗೂ ಪುತ್ತೂರು ತಾಲೂಕಿನ ಗುಂಡ್ಯ, ಶಿರಾಡಿ, ಕೊಂಬಾರು, ಬಿಳಿನೆಲೆ ಸೇರಿದಂತೆ ಸುಮಾರು 50 ಗ್ರಾಮಗಳಿಗೆ ಪುಷ್ಪಗಿರಿ ಯೋಜನೆಯಿಂದ ತೊಂದರೆಯಾಗಲಿದೆ. ಈ ಗ್ರಾಮಗಳಲ್ಲಿ ವಾಸಿಸುವ ಜನರು ಬೀದಿಪಾಲಾಗುವ ಸ್ಥಿತಿ ಬಂದೊಗಿದೆ. ಸಹಜವಾಗಿಯೇ ಜನರು ಈ ಯೋಜನೆಯ ವಿರುದ್ಧ ಸೆಟೆದು ನಿಂತಿದ್ದಾರೆ. ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಪುಷ್ಪಗಿರಿ ಯೋಜನೆಯ ವಿರುದ್ಧ ಹೋರಾಟ ಸಮಿತಿ ರಚನೆಯಾಗಿದೆ. ಈ ಹೋರಾಟ ಸಮಿತಿ ಇದೇ ತಿಂಗಳ 2 ರಂದು ಎಲ್ಲಾ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೆ ಜಿಲ್ಲಾಧಿಕಾರಿಯವರಿಗೂ ಮನವಿ ಪತ್ರ ಸಲ್ಲಿಸಿದ್ರು. ಇಷ್ಟು ದಿನ ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸಿರುವ ಗ್ರಾಮಸ್ಥರು ಒಂದೊಮ್ಮೆ ಈ ಯೋಜನೆ ಜಾರಿಯಾದ್ರೆ ಬೀದಿಗಿಳಿದು ಹೋರಾಡೋದಂತೂ ಖಚಿತ..

ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಈ ಬಗ್ಗೆ ಸರ್ಕಾರ ಸಹ ಚಿಂತನೆ ನಡೆಸಬೇಕಿದೆ. ನಕ್ಸಲ್ ಚಟುವಟಿಕೆಗಳು ಹೆಚ್ಚಾಗಿ ಗರಿಗೆದರುವುದೇ ಇಂತಹ ಸಂದರ್ಭಗಳಲ್ಲಿ. ಎಲ್ಲಿ ಗ್ರಾಮಸ್ಥರು ಸರ್ಕಾರದ ವಿರುದ್ಧ ತೊಡೆತಟ್ಟಿ ನಿಲ್ತಾರೋ, ನಕ್ಸಲರು ಅಲ್ಲಿ ಹಾಜರಾಗ್ತಾರೆ.. ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾ, ಗ್ರಾಮಸ್ಥರ ನೆರವಿಗೆ ಧಾವಿಸುವ ನಕ್ಸಲರು ಪರಿಸ್ಥಿತಿಯ ಲಾಭ ಪಡೆಯೋಕೆ ಪ್ರಯತ್ನಿಸ್ತಾರೆ. ಸರ್ಕಾರದ ವಿರುದ್ಧ ತಿರುಗಿ ಬಿದ್ದ ಜನರನ್ನು ನಕ್ಸಲ್ ಚಟುವಟಿಕೆಗೆ ಸೇರಿಕೊಳ್ಳಲು ಆಹ್ವಾನಿಸ್ತಾರೆ, ಪ್ರಚೋದಿಸುತ್ತಾರೆ.. ಅವರ ಮನಪರಿವರ್ತನೆಗೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡ್ತಾರೆ.. ಮಾನಸಿಕವಾಗಿ ಧೈರ್ಯ ತುಂಬುವ ಜೊತೆಗೆ ಆರಂಭದಲ್ಲಿ ಜೇಬು ತುಂಬಿಸುವ ಕೆಲಸವನ್ನೂ ಮಾಡ್ತಾರೆ.. ಮನೆ ಕಳೆದುಕೊಳ್ಳುವ ಭೀತಿಯಲ್ಲಿರುವ ಕುಟುಂಬಗಳಲ್ಲಿ ವಿದ್ಯಾವಂತ ಯುವಕರಿದ್ದರೆ ಅಂತವರನ್ನು ಮೊದಲು ತಮ್ಮ ನಕ್ಸಲ್ ಪಡೆಗೆ ಸೇರಿಕೊಳ್ಳುವಂತೆ ಪ್ರೇರೇಪಿಸುತ್ತಾರೆ.. ನಕ್ಸಲರು ಪಶ್ಚಿಮ ಘಟ್ಟಗಳಲ್ಲಿ ತಮ್ಮ ಸಂಖ್ಯೆ ಹೆಚ್ಚು ಮಾಡಿಕೊಳ್ಳಲು ಕಂಡುಕೊಂಡಿರುವ ಉಪಾಯ ಇದೇ.. ಪುಷ್ಪಗಿರಿ ಅಭಯಾರಣ್ಯ ಯೋಜನೆಗೆ ಸರ್ಕಾರ ಫುಲ್ ಸ್ಟಾಪ್ ಹಾಕದಿದ್ರೆ ಈ ರೀತಿಯ ನಕ್ಸಲ್ ಚಟುವಟಿಕೆ ತನ್ನ ಕಬಂಧ ಬಾಹುವನ್ನು ವಿಸ್ತರಿಸೋದ್ರಲ್ಲಿ ಸಂಶಯವಿಲ್ಲ. ಸಾಮಾನ್ಯವಾಗಿ ಕುದುರೆಮುಖ ಮತ್ತು ಚಿಕ್ಕಮಗಳೂರು ಪ್ರದೇಶಗಳಿಗೆ ಹೊಂದಿಕೊಂಡಿರುವ ಪಶ್ಟಿಮ ಘಟ್ಟಗಳ ಕಾಡುಗಳಲ್ಲಿ ಅಲೆಯುವ ನಕ್ಸಲರಿಗೆ ಅದೇ ಕಾಡಿನ ಮೂಲಕ ಚಾರ್ಮಾಡಿ ಮಾರ್ಗವಾಗಿ ನೆರಿಯಾ, ಪುದುವೆಟ್ಟು, ಮೀಯಾರು, ಶಿಶಿಲ, ಶಿಬಾಜೆ, ಅರಸಿನಮಕ್ಕಿ, ಗುಂಡ್ಯ, ಶಿರಾಡಿ ಸೇರಿದಂತೆ ಮೂರು ತಾಲೂಕುಗಳಿಗೆ ಪ್ರವೇಶ ಮಾಡೋದು ಕಷ್ಟವೇನಲ್ಲ.

ಇದು ಹೀಗೆ ಅಗುತ್ತದೆ ಅನ್ನೋ ಕಠಿಣ ನುಡಿಗಳಲ್ಲ. ಆದ್ರೆ ಹೀಗೂ ಆಗಬಹುದಾದ ಸಾಧ್ಯತೆಗಳಿವೆ ಎಂದು ಹೇಳಿದನಷ್ಟೇ.. ಸರ್ಕಾರದ ಯೋಜನೆಗಳು ಜನರಿಗೆ ಮಾರಕವಾಗುವಾಗ ಅದರ ಲಾಭ ಪಡೆಯೋಕೆ ನಕ್ಸಲರು ಪ್ರಯತ್ನಪಡಬಹುದು ಎಂದು ಅನಿಸ್ತು.. ಅದಕ್ಕೇ ಈ ಪುಟ್ಟ ಬರಹ.. ಹಾಗಂತ ನಕ್ಸಲ್ ವಿರೋಧಿಯಾಗಿ ಅಥವಾ ನಕ್ಸಲ್ ಪರವಾಗಿ ಇದ್ದೇನೆ ಎಂದೂ ಅಲ್ಲ.. ಇತ್ತೀಚೆಗೆ ಊರಿಗೆ ಹೋಗಿದ್ದಾಗ ಸಂಬಂಧಿಕರ ಮನೆಗೆಂದು ಪುದುವೆಟ್ಟಿಗೆ ಹೋದಾಗ ಅನಿಸಿದ ವಿಷಯಗಳಿವು...


ಹಸಿವು ಅಂದ್ರೆ....

ಅಂದು ಸೆಪ್ಟೆಂಬರ್ 13.. ನೈಟ್ ಶಿಫ್ಟ್ ಇದ್ದಿದ್ರಿಂದ 11 ಗಂಟೆಗೆಲ್ಲ ಆಫೀಸಿಗೆ ಬಂದಿದ್ದೆ.. ಮತ್ತೊಂದು ಗಂಟೆ ಕಳೆದಿರಬಹುದು ಅನ್ಸತ್ತೆ.. ಇನ್ಸುಟ್ ನವ್ರು ಫೋನ್ ಮಾಡಿ ಅರ್ಜೆಂಟಾಗಿ ಚೆನ್ನೈಗೆ ಹೊರಡಿ ಅಂದ್ರು.. ನೋಡಿದ್ರೆ ತಮಿಳುನಾಡಿನ ಅರಕ್ಕೋಣಂನಲ್ಲಿ ರೈಲು ಅಪಘಾತ ಸಂಭವಿಸಿತ್ತು. ಆಗಲೇ 9 ಮಂದಿ ಸಾವನ್ನಪ್ಪಿದ್ರು.. 80ಕ್ಕೂ ಅಧಿಕ ಮಂದಿ ಗಾಯಾಳಾಗಿದ್ರು... ಉಟ್ಟ ಬಟ್ಟೆಯಲ್ಲೇ ಅರಕ್ಕೋಣಂಗೆ ಹೋಗೋಕೆ ರೆಡಿಯಾಗಿದ್ದೆ. ಕ್ಯಾಮೆರಾಮ್ಯಾನ್ ನರೇಶ್ ಮನೆಯಿಂದ ರೆಡಿಯಾಗಿ ಬಂದಿದ್ದ. ನ್ಯೂಸ್ 9 ನಿಂದಲೂ ಒಬ್ರು ರಿಪೋರ್ಟರ್ ಇದ್ರು. ಚಂದ್ರು ಅವರ ಕ್ವಾಲಿಸ್ ವಾಹನ ಆಫೀಸ್ ಹೊರಗಡೆ ಕಾಯ್ತಾ ನಿಂತಿತ್ತು... ಓಬಿ ವೆಹಿಕಲ್ ಕೂಡ ರೆಡಿಯಾಗಿತ್ತು.. ಎಂಜಿನಿಯರ್ ಪ್ರಕಾಶ್ ಮತ್ತು ಡ್ರೈವರ್ ತಿಮ್ಮೇಶ್ ನಮಗಿಂತ ಮೊದಲು ಹೊರಟು ಬಿಟ್ಟಿದ್ರು.. ನಾವು 1 ಗಂಟೆಗೆಲ್ಲ ಕ್ವಾಲಿಸ್ ಏರಿ ಅರಕ್ಕೋಣಂನತ್ತ ಪ್ರಯಾಣ ಹೊರಟಿದ್ವಿ.. < /p>

ಬೆಳಗ್ಗಿನ ಜಾವ 6.30ಕ್ಕೆ ಅರಕ್ಕೋಣಂ ಸರ್ಕಾರೀ ಆಸ್ಪತ್ರೆಯ ಮುಂದೆ ತಲುಪಿದ್ವಿ.. ಗಾಯಾಳುಗಳಲ್ಲಿ ಸುಮಾರು 60 ಮಂದಿ ಅದೇ ಆಸ್ಪತ್ರೆಗೆ ದಾಖಲಾಗಿದ್ರು.. ಅಲ್ಲಿ ನಮಗೆ ಶ್ರೀಕಾಂತ್ ಸಿಕ್ಕಿದ್ದ.. ಶ್ರೀಕಾಂತ್ ನಮ್ಮ ಚೆನ್ನೈ ಕ್ಯಾಮೆರಾಮ್ಯಾನ್ ಕಂ ರಿಪೋರ್ಟರ್.. ಶ್ರೀಕಾಂತ್ ಜೊತೆಗೆ ಮಾತಾಡ್ಕೊಂಡು ಅರ್ಧ ಗಂಟೆಯ ನಂತ್ರ ನೇರವಾಗಿ ಅಪಘಾತ ನಡೆದ ಸ್ಥಳಕ್ಕೆ ಧಾವಿಸಿದ್ವಿ.. ರಾತ್ರಿ ಅಪಘಾತ ಸಂಭವಿಸಿತ್ತು.. ಆದ್ರೆ ಬೆಳಗಾಗ್ತಿದ್ದಂಗೆ ಸ್ಥಳೀಯರೂ, ಅಕ್ಕಪಕ್ಕದ ಊರವರೆಲ್ಲ ತಂಡೋಪತಂಡವಾಗಿ ಅಪಘಾತ ನೋಡೋಕೆ ಬಂದಿದ್ರು..ಹಾಗಾಗಿ ರೈಲ್ವೇ ಗೇಟ್ ನಿಂದಾಚೆಗೆ ಯಾವುದೇ ವಾಹನಗಳನ್ನು ಬಿಡ್ತಿರಲಿಲ್ಲ.. ಹಾಗಾಗಿ ರೈಲ್ವೇ ಗೇಟ್ ಗಿಂತಲೂ ಹಿಂದೆಯೇ ವಾಹನ ನಿಲ್ಲಿಸಿ ನಡ್ಕೊಂಡು ಹೋಗ್ಬೇಕಾಯ್ತು.. ಓಬಿ ವ್ಯಾನ್ ಕೂಡ ಅಲ್ಲೇ ನಿಂತಿತ್ತು.. ಹೆಚ್ಚು ಕಡಿಮೆ 1 ಕಿಲೋ ಮೀಟರ್ ರೈಲ್ವೇ ಟ್ರ್ಯಾಕ್ ಮೇಲೆ ನಡ್ಕೊಂಡು ಹೋಗ್ಬೇಕಾಯ್ತು ಸ್ಪಾಟ್ ತಲುಪೋಕೆ..


ಆಗಲೇ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳೆಲ್ಲ ಸ್ಥಳದಲ್ಲಿ ಜಮಾಯಿಸಿದ್ರು.. ನಜ್ಜುಗುಜ್ಜಾದ ಬೋಗಿಗಳನ್ನು ರೈಲ್ವೇ ಟ್ರ್ಯಾಕ್ ನಿಂದ ಬದಿಗೆ ಸರಿಸುವ ಕೆಲಸ ಒಂದ್ಕಡೆ ನಡೀತಿತ್ತು.. ಮತ್ತೊಂದೆಡೆ ಕಿತ್ತು ಹೋದ ಟ್ರ್ಯಾಕ್ ಗಳನ್ನು ಸರಿಪಡಿಸುವ ಕೆಲಸ ಆರಂಭವಾಗಿತ್ತು.. ಹೋದ ಕೂಡ್ಲೇ ಒಂದು ವಾಕ್ ಥ್ರೂ ಕೊಟ್ಟೆ... ಅಷ್ಟೊತ್ತಿಗಾಗ್ಲೇ ಆಫೀಸಿನಿಂದ ಫೋನ್ ಮೇಲೆ ಫೋನ್ ಬರೋಕೆ ಶುರುವಾಗಿತ್ತು.. ಕ್ಯಾಸೆಟ್ ಓಬಿಗೆ ಇನ್ನೂ ಕೊಟ್ಟಿಲ್ವಾ.. ಡಂಪ್ ಆಯ್ತಾ.. ಅಂತೆಲ್ಲ.. ಓಬಿ ವ್ಯಾನ್ ನಾವಿದ್ದ ಜಾಗದಿಂದ 1 ಕಿಲೋಮೀಟರ್ ದೂರದಲ್ಲಿತ್ತು.. ಹಾಗಾಗಿ ನಡ್ಕೊಂಡು ಹೋಗಿ ಕ್ಯಾಸೆಟ್ ಕೊಟ್ಟು ಬರೋಕೆ ಲೇಟ್ ಆಗಿತ್ತು.. ಆದ್ರೂ ನಮ್ಮ ಚೆನ್ನೈ ಕ್ಯಾಮೆರಾಮ್ಯಾನ್ ಶ್ರೀಕಾಂತ್ ತಾನೇ ಕ್ಯಾಸೆಟ್ ನ ಓಬಿ ಹತ್ರ ಕೊಟ್ಟು ಬಂದಿದ್ದ.. 10 ಗಂಟೆಯಾಗ್ತಿದ್ದಂಗೆ ಬಿಸಿಲಿನ ತಾಪ ಹೇಗಿದೆ ಅನ್ನೋದು ಅರಿವಿಗೆ ಬಂದಿತ್ತು.. ಬೆಂಗ್ಳೂರಲ್ಲಿ ಮಟ ಮಟ ಮಧ್ಯಾಹ್ನ ಸ್ವಲ್ಪ ಬಿಸಿಲು ಜಾಸ್ತಿ ಇದ್ರೆ ಸಾಕು.. ಅಬ್ಬಾ ಏನು ಸೆಕೆ ಅಂತಿದ್ವಿ.. ಅಂತಾದ್ರಲ್ಲಿ ಅಲ್ಲಿ 10 ಗಂಟೆಗೆ ನಿಲ್ಲೋಕಾಗ್ತಿರ್ಲಿಲ್ಲ..

ಹಾಗೆ ಮತ್ತೊಂದು ವಾಕ್ ಥ್ರೂ ಕೊಟ್ಟು ಸೆಕೆಂಡ್ ಟೈಮ್ ನಾನೇ ಕ್ಯಾಸೆಟ್ ತಗೊಂಡು ಓಬಿ ವ್ಯಾನ್ ಹತ್ರಕ್ಕೆ ಹೋಗಿದ್ದೆ... ಕ್ಯಾಸೆಟ್ ಡಂಪ್ ಮಾಡಿದ್ಮೇಲೆ ಪೊಲೀಸರ ಜೊತೆಗೆ ಮನವಿ ಮಾಡ್ಕೊಂಡು ಹೇಗೋ ಓಬಿ ವ್ಯಾನ್ ನ ರೈಲ್ವೇ ಗೇಟ್ ದಾಟಿಸಿ ಮತ್ತೊಂದು ಬದಿಗೆ ತಂದಿದ್ವಿ.. ಅಲ್ಲಿ ಪೊಲೀಸರು ಮತ್ತೆ ನಮ್ಮನ್ನು ಅಡ್ಡ ಹಾಕಿದ್ರು.. ಅವ್ರ ಬಳಿ ಕಾಡಿ ಬೇಡಿ ರೈಲ್ವೇ ಟ್ರ್ಯಾಕ್ ಸಮೀಪದಲ್ಲೇ ಇರುವ ಪ್ಯಾರಲಲ್ ರೋಡ್ ನಲ್ಲಿ ಒಂದಷ್ಟು ದೂರ ಹೋದ್ವಿ.. ರಸ್ತೆ ಕಿರಿದಾಗಿದ್ದು ಒಂದು ವಾಹನ ಹೋಗೋವಷ್ಟು ಮಾತ್ರ ಜಾಗವಿತ್ತು.. ಅಷ್ಟು ಕಿರಿದಾದ ರಸ್ತೆಯಲ್ಲಿ ಆಗ್ಲೇ ಪೊಲೀಸರ ವಾಹನಗಳು ಸಾಲಾಗಿ ನಿಂತಿದ್ವು.. ಜೊತೆಗೆ ಹಿಂದಿನ ದಿನ ರಾತ್ರಿಯೇ ಬಂದಿದ್ದ ನ್ಯಾಷನಲ್ ಮತ್ತು ಕೆಲವು ಸ್ಥಳೀಯ ಟಿವಿ ಚಾನಲ್ ಗಳ ಓಬಿ ವ್ಯಾನ್ ಗಳು ರಸ್ತೆ ಪಕ್ಕ ಪಾರ್ಕ್ ಆಗಿತ್ತು...

ಹಾಗೂ ಹೀಗೂ ಸಾಹಸ ಮಾಡಿ ನಮ್ಮ ಓಬಿ ವ್ಯಾನನ್ನು ರೈಲು ಅಪಘಾತ ನಡೆದ ಸ್ಥಳದ ಸಮೀಪಕ್ಕೆ ತಂದಿದ್ವಿ. ಹಾಗಾಗಿ ವಿಸುವಲ್ಸ್ ಕಳ್ಸೋಕೆ ತುಂಬಾ ಅನುಕೂಲ ಆಯ್ತು.. ಮಧ್ಯಾಹ್ನ 12 ಗಂಟೆ ನ್ಯೂಸ್ ಗೆ ಲೈವ್ ಚಾಟ್ ಕೊಟ್ಟಾಯ್ತು.. ಅಷ್ಟೊತ್ತಿಗಾಗ್ಲೇ ಹೊಟ್ಟೆ ಚುರುಗುಟ್ಟೋಕೆ ಆರಂಭವಾಗಿತ್ತು. ಮಧ್ಯಾಹ್ನದ ಆ ಉರಿಬಿಸಿಲಿನ ಜೊತೆಗೆ ಬಿಸಿಲಿನ ಝಳ.. ಓಬಿ ವ್ಯಾನ್ ನಲ್ಲಿದ್ದ ನೀರು ಖಾಲಿಯಾಗಿತ್ತು.. ನಮ್ಮ ಓಬಿ ಡ್ರೈವರ್ ತಿಮ್ಮೇಶ್ ಬೇರ್ಯಾವುದೇ ಓಬಿ ವ್ಯಾನ್ ನಲ್ಲಿದ್ದ ನೀರು ತಂದುಕೊಟ್ಟು ಸದ್ಯಕ್ಕೆ ಬಾಯಾರಿಕೆ ನೀಗಿಸಿದ್ದ. ಆದ್ರೆ ಹಸಿವು ಮಾತ್ರ ಕಡಿಮೆಯಾಗ್ಲಿಲ್ಲ. ಗಂಟೆ 1.30 ಆಗ್ತಿದ್ದಂಗೆ ರೈಲ್ವೇ ಖಾತೆ ಸಚಿವ ದಿನೇಶ್ ತ್ರಿವೇದಿ, ರಾಜ್ಯ ಸಹಾಯಕ ಸಚಿವ ಮುನಿಯಪ್ಪ ಮತ್ತಿತರ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ರು. ಆ ನೂಕು ನುಗ್ಗಲಿನಲ್ಲಿ ಬೈಟ್, ವಿಸುವಲ್ಸ್ ತಗೊಂಡು ಕಳಿಸುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಇವೆಲ್ಲ ಮುಗಿದಾಗ ಗಂಟೆ 3 ಆಗಿತ್ತು. ಹಸಿವಿನಿಂದ ಕಣ್ಣು ಕಾಣದಂತ ಪರಿಸ್ಥಿತಿ. ಬೆಳಿಗ್ಗೆ ತಿಂಡಿ ಸಹ ಮಾಡಿರಲಿಲ್ಲ. ಎಲ್ಲಾದ್ರೂ ತಿನ್ನೋಕೆ ಏನಾದ್ರೂ ತೆಗೆದುಕೊಂಡು ಬರೋಣ ಅಂದ್ಕೊಂಡ್ರೆ ಅಂಗಡಿಗಳೇ ಇಲ್ಲ.

ಓಬಿ ವ್ಯಾನ್ ನಲ್ಲಿ ವಿಸುವಲ್ಸ್ ಸೆಂಡ್ ಆಗ್ತಿರ್ಬೇಕಾದ್ರೆ ನಮ್ಮ ಓಬಿ ಡ್ರೈವರ್ ತಿಮ್ಮೇಶ್ ಹೋಗಿ ಎಲ್ಲಿಂದಲೋ ಒಂದು ಬೇಯಿಸಿದ ಮೊಟ್ಟೆ ತೆಗೆದುಕೊಂಡು ಬಂದ. ಆ ಮೊಟ್ಟೆಯನ್ನು ನಾನು, ಕ್ಯಾಮೆರಾಮ್ಯಾನ್ ನರೇಶ್, ಓಬಿ ಇಂಜಿನಿಯರ್ ಪ್ರಕಾಶ್ ಮತ್ತು ಡ್ರೈವರ್ ತಿಮ್ಮೇಶ್ ನಾಲ್ಕು ಪೀಸ್ ಮಾಡಿ ತಿಂದ್ವಿ. ಆದ್ರೆ ಅದು ನಮ್ಮ ಹೊಟ್ಟೆಯ ಯಾವ ಮೂಲೆಗೂ ಸಾಕಾಗಲಿಲ್ಲ. ಮತ್ತೆ ಸ್ವಲ್ಪ ಹೊತ್ತಿನ ನಂತ್ರ ತಿಮ್ಮೇಶ್ ನಾಲ್ಕು ಬೆರಳಿನಷ್ಟುದ್ದದ ಬಾಳೆಹಣ್ಣು ತಗೊಂಡು ಬಂದ. ಆದ್ರೆ ಆ ನಾಲ್ಕರಲ್ಲಿ 1 ಬಾಳೆಹಣ್ಣು ಹಾಳಾಗಿ ಹೋಗಿತ್ತು. ಹಾಗಾಗಿ ಮೂರು ಬಾಳೆಹಣ್ಣನ್ನು ಪೀಸ್ ಮಾಡಿ ನಾಲ್ವರು ತಿಂದಿದ್ವಿ. ಮುಂದೇನು ಮಾಡೋದು ಅಂತ ಹಾಗೆ ವ್ಯಾನ್ ನಲ್ಲಿ ಕೂತಿರ್ಬೇಕಾದ್ರೆ ರೈಲ್ವೇ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಬಂದ. ಸಾರ್ ನಾನು ಮೈಸೂರಿನವನು ಎಂದು ಹೇಳಿ ಪರಿಚಯ ಮಾಡಿಸಿಕೊಂಡು, ನಂತ್ರ ಊಟ ಆಯ್ತಾ ಕೇಳ್ದ. ಊಟ ಎಲ್ಲಿ ಸಾರ್ ತಿಂಡಿನೇ ಆಗಿಲ್ಲ ಅಂತ ನಾವು ಹೇಳಿದ ಕೂಡ್ಲೇ ಆ ರೈಲ್ವೇ ಪೊಲೀಸ್ ಎಲ್ಲಿಂದಲೋ ನಾಲ್ಕು ಬೇಯಿಸಿದ ಮೊಟ್ಟೆ ತೆಗೆದುಕೊಂಡು ಬಂದು ಕೊಟ್ಟ. ಸಿಕ್ಕಿದ್ದೇ ತಡ ನಾಲ್ವರೂ ಒಂದೊಂದು ಮೊಟ್ಟೆ ತಿಂದ್ವಿ. ಕನಿಷ್ಠ ಆ ಪೊಲೀಸ್ ಗೆ ನಿಮ್ಗೆ ಬೇಕಾ ಅಂತನೂ ಕೇಳಿರಲಿಲ್ಲ. ಹಸಿದ ಹೊಟ್ಟೆಯ ತಾಳದ ಮಧ್ಯೆ ಏನೂ ಗೊತ್ತಾಗ್ತಿರ್ಲಿಲ್ಲ.

ಒಮ್ಮೊಮ್ಮೆ ಊಟ ಸಾಕು ಅಂತ ಅರ್ಧ ತಿಂದು ಎಸೆದಿದ್ದ ಘಟನೆಗಳೆಲ್ಲ ನೆನಪಾಗಿತ್ತು ಅವಾಗ. ಅಥವಾ ಚೆನ್ನಾಗಿಲ್ಲ ಅಂತ ತಂದಿದ್ದ ಊಟ-ತಿಂಡಿ ಬೇಡಾಂತ ಎಸೀತೀವಿ. ಆದ್ರೆ ಅರಕ್ಕೋಣಂನ ಉರಿಬಿಸಿಲಿನಲ್ಲಿ ಹೊಟ್ಟೆಗೆ ಹಿಟ್ಟಿಲ್ಲದೆ ಪರದಾಡ್ತಿದ್ದಾಗ ಅವೆಲ್ಲವೂ ನೆನಪಾಯ್ತು..

ಅಷ್ಟೊತ್ತಿಗೆ ನಮ್ಮ ನ್ಯೂಸ್ 9 ರಿಪೋರ್ಟರ್ ತನ್ನ ಕೆಲಸ ಮುಗಿಸಿಕೊಂಡು ಕ್ವಾಲಿಸ್ ನಲ್ಲಿ ವಾಪಾಸ್ ಬಂದಿದ್ರು. ಪುಣ್ಯಕ್ಕೆ ನಮ್ಮ ಕ್ವಾಲಿಸ್ ಡ್ರೈವರ್ ಜೊತೆಗೆ ನಾಲ್ಕೈದು ಊಟ ಪಾರ್ಸೆಲ್ ಕಟ್ಟಿಸಿಕೊಂಡು ಬಂದಿದ್ದ. ಮೈನ್ ರೋಡ್ ಗೆ ಬಂದು ರಸ್ತೆ ಪಕ್ಕದಲ್ಲಿ ಮರದ ನೆರಳಿನಲ್ಲಿ ಗಾಡಿ ಪಾರ್ಕ್ ಮಾಡಿ ಪಾರ್ಸೆಲ್ ತಂದಿದ್ದ ಊಟ ತಿನ್ಬೇಕಾದ್ರೆ ಏನೋ ನೆಮ್ಮದಿ..

Saturday, September 24, 2011


College Life is Golden Life ಅಂತಾರೆ... ಇದು ಅಕ್ಷರಶಃ ಸತ್ಯ.. ಕಾಲೇಜು ಮುಗಿಸಿ 4 ವರ್ಷ ಕಳೆದಿದೆ.. ಆದ್ರೆ ಕಾಲೇಜು ದಿನಗಳ ನೆನಪು ತುಂಬಾನೇ ಕಾಡ್ತಿದೆ.. ಅದ್ರಲ್ಲೂ ಒಂದಷ್ಟು ಕಾಲೇಜು ಗೆಳೆಯರನ್ನಂತೂ ಮರೆಯಲು ಸಾಧ್ಯನೇ ಇಲ್ಲ...

ಪಿಯುಸಿ ಫಸ್ಟ್ ಇಯರ್ ಸೇರೋಕೆ ಕಾಲೇಜಿಗೆ ಹೋದಾಗ ಕೆಲವು ಹೈಸ್ಕೂಲ್ ಗೆಳೆಯರು ಜೊತೆಗಿದ್ರು.. ಆದ್ರೆ ಕೆಲವರು ಸೈನ್ಸ್ ತೆಗೆದುಕೊಂಡ್ರು.. ಇನ್ನೂ ಕೆಲವರು ಕಾಮರ್ಸ್ ಸೇರಿದ್ರು.. ನಾನು ಮಾತ್ರ ಅದೇ ಮಾಮೂಲಿ ಆರ್ಟ್ಸ್ ಚೂಸ್ ಮಾಡ್ದೆ...

ಹೈಸ್ಕೂಲ್ ಗೆಳೆಯರಲ್ಲೊಬ್ಬನಾದ ರಾಜೇಶ್ ನಂಗೆ ಪಿಯುಸಿಯಲ್ಲಿ ಬೆಂಚ್ ಮೇಟ್.. ನಾವೆಲ್ಲರೂ ಅವನನ್ನೂ ಗಾರ್ಡ ಎಂದೇ ಕರೀತಿದ್ವಿ.. ಪ್ರತಿ ಕ್ಲಾಸ್ ನಲ್ಲೂ ನಾನೂ ಅವ್ನೂ ಜೊತೆಗೇ ಕೂರ್ತಿದ್ವಿ.. ಕಾಲೇಜು ಸೇರಿದ ಮೊದ ಮೊದಲು ನಾನು ತುಂಬಾನೇ ಒಬೀಡಿಯೆಂಟ್ ಸ್ಟೂಡೆಂಟ್ ಥರ ಇದ್ದೆ.. ಕ್ಲಾಸ್ ನಲ್ಲಿ ಕೂತು ನೆಟ್ಟಗೆ ಪಾಠ ಕೇಳ್ತಿದ್ದೆ.. ಆದ್ರೆ ಜೊತೆಗಿದ್ನಲ್ಲಾ.. ಗಾರ್ಡ.. ಅವ್ನು ಬರೀ ತಲೆಹರಟೆ.. ಒಂದಿನಾನೂ ನೆಟ್ಟಗೆ ಕ್ಲಾಸ್ ನಲ್ಲಿ ಪಾಠ ಕೇಳೋಕೆ ಬಿಡ್ತಿರ್ಲಿಲ್ಲ.. ಏನಾದ್ರೂ ವಟ ವಟಾಂತ ಮಾತಾಡ್ತಾನೆ ಇರ್ತಿದ್ದ.. ಅವ್ನಿಂದಾಗಿ ನಾನೂ ಕ್ಲಾಸ್ ಕಡೆಗೆ ಗಮನ ಹರಿಸ್ತಿರ್ಲಿಲ್ಲ.. ಜೊತೆಗೆ ಆ ಹುಡುಗಿ ನೋಡು, ಈ ಹುಡುಗಿ ನೋಡು ಎಂದೆಲ್ಲ ಹೇಳಿ ಕಾಡಿಸ್ತಿದ್ದ.. ನಾವಿಬ್ರೂ ಕ್ಲಾಸ್ ನಲ್ಲಿ ಕಿತಾಪತಿ ಮಾಡ್ತೀವಿ ಅಂತ ಹೇಳಿ ತುಂಬಾ ಸಲ ಲೆಕ್ಚರರ್ಸ್ ಗೆಟ್ ಔಟ್ ಹೇಳಿದ್ದೂ ಇದೆ.. ಹಾಗೆ ಕ್ಲಾಸ್ ನಿಂದ ನಾವಿಬ್ರೂ ಹೊರಗಡೆ ಹೋಗ್ಬೇಕಾದ್ರೆ ಉಳಿದವರೆಲ್ಲ ಕಿಸಿ ಕಿಸಿ ನಗ್ರಿದ್ರು.. ಆದ್ರೆ ಗಾರ್ಡ ಮಾತ್ರ ಟೆನ್ಶನ್ ಮಾಡ್ಕೋತಿರ್ಲಿಲ್ಲ.. ನಾನು ಛೇ ಕ್ಲಾಸ್ ಮಿಸ್ ಆಯ್ತಲ್ಲಾ ಅಂದ್ರೆ, ಅವ್ನು ಮಾತ್ರ, ಹೋಗ್ಲಿ ಬಿಡು, ಅಟೆಂಡೆನ್ಸ್ ಸಿಕ್ತು.. ಇನ್ನು ವನ್ ಹವರ್ ಫ್ರೀ ಅಂತ ಹೇಳಿ ನನ್ನನ್ನು ಕರ್ಕೊಂಡು ಬಾಯ್ಸ್ ರೂಂಗೆ ಹೋಗ್ತಿದ್ದ.. ಅಲ್ಲಿ ಮತ್ತದೇ ಪಟ್ಟಾಂಗ..

ಪಿಯುಸಿ ಫಸ್ಟ್ ಇಯರ್ ನಲ್ಲಿದ್ದಾಗ್ಲೇ ನನ್ನ ಫಸ್ಟ್ ಲವ ಸ್ಟೋರಿ ಸ್ಟಾರ್ಟ್ ಆಗಿದ್ದು.. ನಮ್ಮ ಕ್ಲಾಸ್ ನಲ್ಲೊಬ್ಳು ಹುಡುಗಿಯಿದ್ಳು.. ಅವಳ ಜೊತೆಗೆ ಮಾತಾಡೋಕೂ ಶುರು ಮಾಡಿರ್ಲಿಲ್ಲ.. ಆಗ್ಲೇ ನಂಗೆ ಅವಳ ಮೇಲೆ ವಿಪರೀತ ಲವ್.. ಪಿಯುಸಿನಲ್ಲಿ ಎರಡು ವರ್ಷ ಕಳೆದ್ರೂ ನಾನು ಪ್ರೊಪೋಸ್ ಮಾಡಿರ್ಲಿಲ್ಲ..

ಪಿಯುಸಿನಲ್ಲಿ ಗಾರ್ಡ ಡುಮ್ಕಿ ಹೊಡ್ದ.. ಹಾಗಾಗಿ ಡಿಗ್ರಿಗೆ ಬಂದಾಗ ಅವನು ಮಿಸ್ ಆಗ್ಬಿಟ್ಟ.. ಆದ್ರೆ ದಾಮು ಜೊತೆಗಿದ್ದ.. ಹಾಗಾಗಿ ಅಷ್ಟೊಂದು ಬೋರ್ ಅನ್ಸಿಲ್ಲ.. ಇನ್ನು ಪಿಯುಸಿಯಲ್ಲಿದ್ದಾಗ್ಲೇ ಕೊಡಗಿನ ಹುಡುಗಿ ಜಯಶ್ರೀ ಪರಿಚಯ ಆಗಿದ್ದು.. ಆದ್ರೆ ಡಿಗ್ರಿಗೆ ಬರ್ತಿದ್ದಂಗೆ ಅವಳದ್ದು ಫೈನಲ್ ಇಯರ್ ಮುಗಿದಿತ್ತು.. ಮತ್ತೆ ಕಾಂಟ್ಯಾಕ್ಟ್ ಗೆ ಸಿಗಲೇ ಇಲ್ಲ.. ಇನ್ನು ಮೌಲ್ಯ ಇವಾಗ್ಲೂ ಟಚ್ ನಲ್ಲಿದ್ದಾಳೆ.. ಮದುವೆಯಾಗಿ ಒಂದು ಪುಟ್ಟ ಮಗ ಇದ್ದಾನೆ.. ಇನ್ನು ಕೆಲವರ ಹೆಸರು ಹೇಳೋದೇ ಬೇಡ... ಎಲ್ಲಾ ನಂಗಿಂತ ಸೀನಿಯರ್ಸ್.. ಹಾಂ, ಸುನಿಲ್ ಮತ್ತು ವಿನು ಅನ್ನೋ ಇಬ್ರು ಸೈನ್ಸ್ ಫ್ರೆಂಡ್ಸ್ ಇದ್ರು.. ಅವ್ರೂ ಸೀನಿಯರ್ಸೇ.. ಆದ್ರೂ ನಂಗೆ ಒಳ್ಳೆ ಫ್ರೆಂಡ್ಸ್ ಆಗಿದ್ರು.. ಸುನಿಲ್ ಸದ್ಯಕ್ಕೆ ಉಡುಪಿಯಲ್ಲಿದ್ದಾನೆ, ಆದ್ರೆ ವಿನು ಎಲ್ಲಿದ್ದಾನೋ ಗೊತ್ತಿಲ್ಲ.. ರಾಜೇಶ್ ಉಜಿರೆಯಲ್ಲಿ ಮೊಬೈಲ್ ಶಾಪ್ ಇಟ್ಕೊಂಡಿದ್ದಾನೆ.. ಸ್ಟಿಲ್ ಹ್ಯಾವ್ ಕಾಂಟ್ಯಾಕ್ಟ್...

ಡಿಗ್ರಿ ಸೇರ್ಕೊಂಡಾಗ ಅದ್ಯಾಕೋ ಗೊತ್ತಿಲ್ಲ, ಜರ್ನಲಿಸಂ ಸಬ್ಜೆಕ್ಟ್ ತಗೊಂಡೆ.. ಜೊತೆಗೆ ಇಂಗ್ಲೀಷ್ ಲಿಟರೇಚರ್ ಮತ್ತು ಡಾಟಾ ಪ್ರೋಸೇಸಿಂಗ್.. ಫಸ್ಟ್ ಇಯರ್ ಡಿಗ್ರಿಯಲ್ಲಿ ನಂಗೆ ಬೆಂಚ್ ಮೇಟ್ ಆಗಿದ್ದು ಸ್ಟ್ಯಾನಿ ಪಿಂಟೋ, ಬಿಜು ವರ್ಗೀಸ್, ಚೇತನ್, ಪುಷ್ಪರಾಜ್ ಮೊದಲಾದವರು.. ದಿನ ಹೋಗ್ತಿದ್ದಂಗೆ ತುಂಬಾ ಜನ ಫ್ರೆಂಡ್ಸ್ ಆದ್ರೂ.. ದೀಕ್ಷಾ, ಅಕ್ಷತಾ, ಯಾಮಿನಿ, ಶಾಂತಲಾ, ಶ್ವೇತಾ.. ಹೀಗೆ ಪಟ್ಟಿ ಬೆಳೀತಾನೇ ಹೋಗತ್ತೆ.. ಬಟ್ ಮೋಸ್ಟ್ ಮೆಮೊರಬಲ್ ಅಂದ್ರೆ ಸ್ಟ್ಯಾನಿ.. ಮೂರು ವರ್ಷದ ಡಿಗ್ರಿ ಲೈಫ್ ನಲ್ಲಿ ನಾನು ಅವ್ನೂ ಬಹುತೇಕ ಜೊತೆಗೇ ಇದ್ವಿ... ಸಂಜೆ 5 ಗಂಟೆಯಿಂದ ನೆಕ್ಟ್ ಡೇ 9 ಗಂಟೆ ಟೈಮ್ ಬಿಟ್ಟು... ರಜಾ ದಿನಗಳಂದೂ ಕೆಲವೊಮ್ಮೆ ಒಟ್ಟಿಗೆ ಇರ್ತಿದ್ವಿ...

ನಾನು ಸ್ಟ್ಯಾನಿ ಒಟ್ಟಿಗೆ ಸೇರಿ ಮಾಡ್ಕೊಂಡ ಚೇಷ್ಟೆಗಳು ಒಂದೆರಡಲ್ಲ.. ಇದಕ್ಕೆಲ್ಲ ಪುಷ್ಪರಾಜ್ ಮತ್ತು ಚೇತನ್ ಸಾಥ್ ನೀಡ್ತಿದ್ದ.. ಜೊತೆಗೆ ದಾಮು ಕೂಡ.. ಆದ್ರೆ ನಮ್ಮ ಚಿಪ್ಸ್ ಬಿಜು ಮಾತ್ರ ಬುದ್ಧಿ ಹೇಳ್ತಿದ್ದ... ಯಾಕಂದ್ರೆ ಅವ್ನು ಡಿಗ್ರಿಗೆ ಬರೋ ಮೊದ್ಲು ಒಂದರೆಡು ವರ್ಷ ಫಿಲಾಸಫಿ ಓದಿ ನಂತ್ರ ಅರ್ಧಕ್ಕೆ ಬಿಟ್ಟು ಬಂದಿದ್ದ.. ವಯಸಲ್ಲಿ ನಮಗಿಂತಲೂ ಸ್ವಲ್ಪ ದೊಡ್ಡವನು.. ಸ್ವಲ್ಪ ಅಂದ್ರೆ.. ಬೇಡ ಬಿಡಿ.. ಬಿಜು ಕ್ಲಾಸ್ ಗೆ ತರ್ತಿದ್ದ ಚಿಪ್ಸ್ ಮಾತ್ರ ಸೂಪರ್.. ನಾವೆಲ್ಲ ಕಿತ್ತಾಡ್ಕೊಂಡು ತಿನ್ತಿದ್ವಿ..
ಈ ಮಧ್ಯೆ ನಮ್ ಸ್ಟ್ಯಾನಿ ಸ್ಟಾರ್ಟ್ ಮಾಡಿದ್ದ ಆ ಮ್ಯಾಗಜಿನ್ ಮಾತ್ರ ಸೂಪರಾಗಿತ್ತು.. ಅದ್ರ ಹೆಸರು ಬೇಡ ಅನ್ಸತ್ತೆ.. ಬಹುಷ ಆ ಮ್ಯಾಗಜಿನ್ ಸ್ಟಾರ್ಟ್ ಆದಮೇಲೆ ಸುನಿಲ್ ಹೆಗ್ಡೆ, ರಾಘವ್ ಶರ್ಮನಂತಹ ಕೆಲವು ಫಸ್ಟ್ ಬೆಂಚಿನ ವಿದ್ಯಾರ್ಥಿಗಳು ನಮ್ಗೆ ಕ್ಲೋಸ್ ಆದ್ರೂ.. ಸಿದ್ಧವನದ ಗೆಳೆಯರ ಸಪೋರ್ಟ್ ಅಂತೂ ಯಾವತ್ತೂ ಇತ್ತು..

ಸೆಕೆಂಡ್ ಇಯರ್ ನಲ್ಲಿದ್ದಾಗ ಕಾಲೇಜು ಡೇ ಟೈಮ್ ನಲ್ಲಿ ಮಾಡಿದ್ದ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ಅನ್ ಫೊರ್ಗೆಟೆಬಲ್.. ಸಬ್ಜೆಕ್ ಕಂಬಳ.. ತುಳುನಾಡಿನ ಆಟಗಳಲ್ಲೊಂದು.. ಅವತ್ತು ಕಂಬಳಕ್ಕಾಗಿ ಎಲ್ಲಾ ಸಿದ್ಧತೆ ಮಾಡ್ಕೊಂಡಿದ್ವಿ.. ಪುಷ್ಪರಾಜ್, ಸ್ಟ್ಯಾನಿ ಎಲ್ಲಾ ಸೇರ್ಕೊಂಡು ರತ್ನಮಾನಸದಿಂದ ಎತ್ತುಗಳನ್ನು ಕಂಬಳಕ್ಕೆ ರೆಡಿ ಮಾಡ್ಕೊಂಡು ಬರೋಕೆ ಹೋಗಿದ್ರು... ರತ್ನಮಾನಸದ ವಾರ್ಡನ್ ಎರಡು ಎತ್ತುಗಳನ್ನು ಚೆನ್ನಾಗಿ ತೊಳೆದು, ಕಟ್ಟಿ ಹಾಕಿದ್ರು.. ನಮ್ಮ ಹುಡುಗರು ಆ ಎತ್ತುಗಳನ್ನು ಹಗ್ಗ ಬಿಚ್ಚಿದ್ದೇ ತಡ,, ನಾಗಾಲೋಟದಿಂದ ರತ್ನಮಾನಸದ ತೋಟದೊಳಗೆ ಓಡಿ ಹೋಯ್ತು.. ನಾನು ಮತ್ತು ದಾಮು ರತ್ನಮಾನಸಕ್ಕೆ ಹೋದ್ರೆ ಎಲ್ರೂ ಆ ಎತ್ತುಗಳ ಹಿಂದೆ ಓಡ್ತಿದ್ರು.. ವಾರ್ಡನ್, ರತ್ನಮಾನಸದ ಸ್ಟೂಡೆಂಟ್ಸ್, ಕೆಲಸದವರು ಎಲ್ಲಾ ಅದ್ರ ಹಿಂದೆ ಹೋದ್ರೂ ಪ್ರಯೋಜನವಾಗಲಿಲ್ಲ.. ಕೊನೆಗೆ ಅಲ್ಲಿದ್ದ ಎರಡು ಪುಟ್ಟ ಕರುಗಳೊಂದಿಗೆ ಕಾಲೇಜಿಗೆ ವಾಪಾಸ್ ಬಂದ್ವಿ.. ಎತ್ತಿನ ಬದಲು ಕರುಗಳನ್ನೇ ಒಂದು ಜೊತೆ ಕಂಬಳದಲ್ಲಿ ಓಡಿಸಿದ್ವಿ.. ಮತ್ತೊಂದು ಜೊತೆಗೆ ಸ್ಟ್ಯಾನಿ ಮತ್ತು ರಿತೇಶ್ ತಲೆ ಮೇಲೆ ಕಂಬಳಿ ಹಾಕೊಂಡು ಎತ್ತುಗಳಂತೆ ಓಡಿದ್ರು.. ಅದನ್ನೆಲ್ಲ ಜೀವಮಾನದಲ್ಲಿ ಮರೆಯೋಕಾಗಲ್ಲ..

ಸೆಕೆಂಡ್ ಇಯರ್ ಡಿಗ್ರಿನಲ್ಲಿದ್ದಾಗ್ಲೇ ನಮ್ಮ ಬಿಜು ಎಲೆಕ್ಷನ್ ಗೆ ನಿಂತಿದ್ದ.. ಎಲೆಕ್ಷನ್ ಆಯ್ತು.. ಬಿಜು ಕ್ಲಾಸ್ ರೆಪ್ರೆಸೆಂಟೇಟೀವ್ ಆಗಿ ಗೆದ್ದು ಬಿಟ್ಟಿದ್ದ.. ಅದ್ರ ಅಂಗವಾಗಿ ಸ್ವಪ್ನಾ ಬಾರ್ ಆಂಡ್ ರೆಸ್ಟೋರೆಂಟ್ ಗೆ ಹೋಗಿದ್ವಿ.. ಪಾರ್ಟಿ ಸೆಲೆಬ್ರೇಷನ್ ಗೆ.. ಕೆಲವ್ರೆಲ್ಲ ಲೈಟಾಗಿ ಎಣ್ಣೆ ಏರಿಸಿಕೊಂಡಿದ್ರು.. ಪಾರ್ಟಿ ಎಲ್ಲಾ ಮುಗಿಸ್ಕೊಂಡು ಹೊರಗಡೆ ಬಂದಿದ್ವಿ.. ಯಾವ್ದೋ ಮಾರುತಿ 800 ನಿಂತಿತ್ತು.. ಸ್ವಲ್ಪ ಮತ್ತೇರಿದ್ದ ಬಿಜು ಒಂದು ಡೈಲಾಗ್ ಹೊಡೆದ.. ಚಾರ್ಜರ್ ಕೊರ್ಯೆ, ಮೊಬೈಲ್ ಕೊರ್ಯೆ.. ಥ್ಯಾಂಕ್ಸ್ ಬೊಡ್ಚಿ.. ಒಂಜಿ ವೋಟ್ ಪಾಡ್ಯಾಲಾ... ಅಂದ್ರೆ, ಚಾರ್ಜರ್ ಕೊಟ್ಟೆ, ಮೊಬೈಲ್ ಕೊಟ್ಟೆ.. ಥ್ಯಾಂಕ್ಸ್ ಬೇಡ.. ಆದ್ರೆ ಒಂದು ವೋಟ್ ಹಾಕಿದ್ಳಾ... ಇದು ನಮ್ಮದೇ ತರಗತಿಯ ಹುಡುಗಿಯೊಬ್ಬಳ ಬಗ್ಗೆ ಬಿಜು ಹೇಳಿದ ಡೈಲಾಗ್ ಆಗಿತ್ತು.. ಇವತ್ತಿಗೂ ಬಿಜು ಅಂದ್ರೆ ಆ ಡೈಲಾಗ್ ನೆನಪಾಗತ್ತೆ.. ಮತ್ತೂ ಮಜಾ ಅಂದ್ರೆ ಒಂದಿನ ಕ್ಲಾಸ್ ನಲ್ಲಿ ಫ್ರೀ ಟೈಮ್ ಇದ್ದಾಗ ಸ್ಕಿಟ್ ಮಾಡಿದ್ವಿ.. ಜೊತೆಗೆ ಬಿಜು ಕೂಡ ಇದ್ದ.. ಆದ್ರೆ ಬಿಜುಗೆ ನಾವು ಯಾವ ಸ್ಕಿಟ್ ಮಾಡ್ತಿದ್ದೀವಿ ಅನ್ನೋದೇ ಗೊತ್ತಿರ್ಲಿಲ್ಲ.. ಅಲ್ಲಿ ನಾನು, ದಾಮು, ಸ್ಟ್ಯಾನಿ ಎಲ್ಲಾ ಸೇರ್ಕೊಂಡು ಮಾಡಿದ್ದು ಅದೇ ಬಿಜುನ ಡೈಲಾಗ್ ಸ್ಕಿಟ್ ನ... ಬಿಜು ಬೈದಿಲ್ಲ ಅಷ್ಟೇ.. ಆದ್ರೆ ಅವ್ನ ಮುಖ ಸಣ್ಣಗಾಗಿ ಹೋಗಿತ್ತು.. ಮತ್ತೆ ಅವ್ನಿಗೆ ಹೇಗೋ ಸಮಾಧಾನ ಮಾಡೋವಷ್ಟರಲ್ಲಿ ಸಾಕಾಗಿ ಹೋಗಿತ್ತು..

ಫೈನಲ್ ಇಯರ್ ನಲ್ಲಿದ್ದಾಗ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ಗೆ ಆಯ್ಕೆ ಮಾಡ್ಕೊಂಡಿದ್ದು ಹಿಜಿಡಾ ಸಮಾವೇಶ.. ನಾನು, ಸ್ಟ್ಯಾನಿ, ಬಿಜು, ಪುಷ್ಪರಾಜ, ಗುರುಪ್ರಸಾದ್ ಎಲ್ಲಾ ಸೇರ್ಕೊಂಡು ಅದಕ್ಕೆ ಅಣಿಯಾಗಿದ್ವಿ.. ಕ್ಲಾಸ್ ನಲ್ಲಿದ್ದ ಸಹೃದಯಿ ಗೆಳತಿಯರು ತಮ್ಮ ಚೂಡಿದಾರ್ ಗಳನ್ನು ನಮಗೆ ಕೊಟ್ಟಿದ್ರು.. ಮುಖಕ್ಕೊಂದಿಷ್ಟು ಬಣ್ಣ ಹಚ್ಕೊಂಡು, ತುಟಿಗೆಲ್ಲ ಲಿಪ್ ಸ್ಟಿಕ್ ಪದರ ಹಾಕಿ, ಏನೇನೋ ಮಾಡ್ಕೊಂಡು ಹಿಜಿಡಾ ಆಗಿ ರೆಡಿಯಾಗಿದ್ವಿ.. ನಮ್ಮ ತರಗತಿಯ ಕೆಲವು ಗೆಳತಿಯರು ನಮಗೆ ಮೇಕ್ ಅಪ್ ಮಾಡೋಕೆ ಹೆಲ್ಪ್ ಮಾಡಿದ್ರು.. ಕಾಲೇಜು ಗ್ರೌಂಡ್ ನಲ್ಲಿ ನಾವು ಸುಮಾರು 20 ಹುಡುಗರು, ಹಿಜಿಡಾ ವೇಷದಲ್ಲಿ ಮಿಂಚಿದ್ವಿ.. ದಾಮು ಕೊಟ್ಟಿದ್ದ ಬ್ಯಾಕ್ ಗ್ರೌಂಡ್ ವಾಯ್ಸ್ ಅಂತೂ ಸೂಪರ್.. ಕೊನೆಯಲ್ಲಿ ಮೇರಾ ಅಂಗಾನೇಮೇ ತುಮ್ಹಾರಾ ನಾಮ್ ಅನ್ನೋ ಸಾಂಗ್ ಗೆ ಹೆಜ್ಜೆ ಹಾಕಿದ್ವಿ... ಕೊನೆಗೆ ಪುಷ್ಪರಾಜ್ ನ ಬೈಕ್ ನಲ್ಲಿ ವಾಪಾಸ್ ಹೋಗ್ತಿದ್ದಾಗ ಯಾರ್ದೋ ಚೂಡಿದಾರ್ ನ ವೇಲ್ ಹಿಂದಿನ ಚಕ್ರಕ್ಕೆ ಸಿಲುಕಿತ್ತು.. ಆದ್ರೆ ಅದೃಷ್ಟವಶಾತ್ ಯಾವುದೇ ಅಪಾಯ ಆಗಿಲ್ಲ...

ಇನ್ನು ವೆರೈಟಿ ಕಾಂಪಿಟೇಷನ್ ಗೆ ರಾತ್ರಿಯೆಲ್ಲಾ ಕಷ್ಟಪಟ್ಟು ಕೆಲಸ ಮಾಡಿದ್ವಿ.. ನೆಕ್ಟ್ ಡೇ ಫಸ್ಟ್ ಪ್ರೈಸ್ ನಮಗೇ ಬಂದಿತ್ತು.. ಇಂಗ್ಲೀಷ್ ಕ್ಲಾಸ್ ನಲ್ಲಿ ಕೂತು ಮಾಡಿದ್ದ ಕಿತಾಪತಿಗಳು ಒಂದೆರಡಲ್ಲ.. ಸದ್ಯ ಡೆಲ್ಲಿಯಲ್ಲಿ ಜನಶ್ರೀ ರಿಪೋರ್ಟರ್ ಆಗಿರೋ ರಾಘವ್ ಶರ್ಮಾನಿಗೆ ರಸ್ಕ್ ಕೊಟ್ಟಿದ್ದಂತೂ ಮರೆಯೋಕಾಗಲ್ಲ.. ರಾಘು ರಸ್ಕ್ ಬೇಕೇನೋ ಅಂತ ಹೇಳಿ ನಾನೇ ಕೊಟ್ಟಿದ್ದೆ.. ಪಾಪ ಅವ್ನು ತಗೊಂಡು ತಿಂದಿದ್ದ... ಶೇಕ್ಸ್ ಪಿಯರ್ ಬಗ್ಗೆ ಕ್ಲಾಸ್ ನಡೀತಿತ್ತು.. ಅವ್ನು ಅರ್ಧ ತಿಂದಾದ ಮೇಲೆ ಕೇಳ್ದ.. ರಸ್ಕ್ ಎಲ್ಲಿಂದ ಅಂತ.. ಮುಸಿ ಮುಸಿ ನಗ್ತಾ ನಿಧಾನಕ್ಕೆ ಹೇಳಿದ್ದೆ.. ಇಲ್ಲೇ ಕೆಳಗಡೆ ಬಿದ್ದಿತ್ತು ಕಣೋ.. ಪಾಪ ರಾಘವನ ಮುಖ ನೋಡ್ಬೇಕಾಗಿತ್ತು.. ಅತ್ತ ಉಗುಳೋಕೂ ಆಗಲ್ಲ, ಇತ್ತ ನುಂಗೋಕೂ ಆಗಲ್ಲ..

ನ್ಯೂ ಇಯರ್ ಸೆಲೆಬ್ರೇಷನ್ ನವತ್ತು ನೇತ್ರಾವತಿ ನದಿಯ ತಟದಲ್ಲಿ ನೈಟ್ ಕ್ಯಾಂಪ್ ಮಾಡಿದ್ವಿ.. ಅವತ್ತು ನದಿ ದಡದಲ್ಲಿ ಮರಳಲ್ಲಿ ಆರಡಿ ಉದ್ದದ ಹೊಂಡ ತೋಡಿದ್ವಿ. ನಂತ್ರ ಎಲ್ಲಾ ಸೇರ್ಕೊಂಡು ರಾಘವನನ್ನು ಆ ಹೊಂಡದಲ್ಲಿ ಹಾಕಿದ್ವಿ.. ಆದ್ರೆ ಮೇಲೆ ಮರಳು ಹಾಕಿ ಮುಚ್ಚಿಲ್ಲ.. ಅದ್ಕೇ ಇವಾಗ ಡೆಲ್ಲಿಯಲ್ಲಿ ಕೆಲ್ಸ ಮಾಡ್ತಿದ್ದಾನೆ...

ಹೀಗೆ ಕಾಲೇಜು ದಿನಗಳ ಸವಿನೆನಪುಗಳು ಒಂದೆರಡಲ್ಲ... ಒಂದಕ್ಕಿಂತ ಮತ್ತೊಂದು ವಿಭಿನ್ನ.. ಕಾಲೇಜು ಲೈಫ್ ಮುಗಿದು ನಾಲ್ಕು ವರ್ಷ ಕಳೆಯಿತು.. ಜೊತೆಗಿದ್ದ ಬಹುತೇಕ ಗೆಳೆಯರು ಇಂದು ಒಳ್ಳೆಯ ಪೊಸಿಷನ್ ನಲ್ಲಿದ್ದಾರೆ.. ಖುಷಿ ಆಗತ್ತೆ..

ತುಂಬಾ ಗೆಳೆಯರು ಇವತ್ತಿಗೂ ಕಾಂಟ್ಯಾಕ್ಟ್ ನಲ್ಲಿದ್ದಾರೆ.. ಆದ್ರೆ ಕೆಲವರು ಕಾರಣಾಂತರಗಳಿಂದ ಮಾತಾಡ್ತಿಲ್ಲ.. ಇನ್ನು ಕೆಲವರ ಜೊತೆಗೆ ಟಚ್ ಇಲ್ಲ.. ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ ಅನ್ನೋದೇ ಗೊತ್ತಿಲ್ಲ.. ಆದ್ರೆ ನಮ್ಮ ಕ್ಲಾಸ್ ನಲ್ಲಿದ್ದ 52 ಗೆಳೆಯರ ನೆನಪುಗಳೂ ಜೊತೆಗಿವೆ.. ಹೀಗೆ ಹಳೆಯ ನೆನಪುಗಳು ಇನ್ನೂ ಇವೆ.. ಮತ್ತೊಮ್ಮೆ ಬರೀತೀನಿ...

Saturday, November 27, 2010

ಕೊಲೆಗಡುಕನ ಮುಂದೆ...

ಅದೊಂದು ಭಾನುವಾರ...
ಖಾಸಗೀ ಟಿವಿ ವಾಹಿನಿಯೊಂದರಲ್ಲಿ ಅಪರಾಧ ವರದಿಗಾರನಾಗಿ ಕೆಲಸ ಮಾಡ್ತಿರೋ ನನಗೆ ಆ ದಿನವನ್ನು ಯಾವತ್ತಿಗೂ ಮರೆಯೋಕಾಗಲ್ಲ.. ಬೆಳ್ಳಂ ಬೆಳಗ್ಗೆ ಆರ್. ಟಿ.ನಗರದಲ್ಲಿ ಮರ್ಡರ್ ಆಗಿದೆ ಅಂತ ಗೊತ್ತಾಗಿದ್ದೆ ತಡ, ಬ್ರೇಕಿಂಗ್ ನ್ಯೂಸ್ ಕೊಡ್ತಾ ಸ್ಪಾಟ್ ತಲುಪಿದ್ದೆ.. ತಾಳಿ ಕಟ್ಟಿದ ಹೆಂಡತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆ ಪಾಪಿ ಗಂಡ ಕೊಲೆಮಾಡಿದ್ದ.. ಪಾಪ ಎಲ್ಲವನ್ನೂ ಕಣ್ಣಾರೆ ಕಂಡಿದ್ದ ಇಬ್ಬರು ಮಕ್ಕಳನ್ನು ತಾಯಿ ಮನೆಯಲ್ಲಿ ಬಿಟ್ಟು ಗಂಡ ಪರಾರಿಯಾಗಿದ್ದ.. ನಾನು ಮತ್ತು ಮತ್ತೊಂದು ಖಾಸಗಿ ವಾಹಿನಿಯ ಗೆಳೆಯ ರಾಕೇಶ್ ಸ್ಪಾಟ್ ವಿಸುವಲ್ಸ್ ಮತ್ತು ಬೈಟ್ ತಗೊಂಡು ನೇರವಾಗಿ ಕಮಿಷನರ್ ಆಫೀಸಿಗೆ ಹೋಗಿದ್ದೆವು.. ಜಂಟಿ ಪೋಲಿಸ್ ಆಯುಕ್ತರಾದ ಅಲೋಕ್ ಕುಮಾರ್ ಬೈಟ್ ಬೇಕಾಗಿತ್ತು.. ಬೈಟ್ ತಗೊಂಡು ವಾಪಾಸ್ ಆಫೀಸಿಗೆ ಬಂದು ಸ್ಕ್ರಿಪ್ಟ್ ಕೊಟ್ಟು ಬೇರ್ಯಾವುದೋ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ.. ಸಂಜೆ ಸುಮಾರು ೫ ಗಂಟೆಯಾಗಿರಬಹುದು ಅನ್ಸತ್ತೆ.. ಆಫೀಸ್ ಗೆ ಅನಾಮಿಕನೊಬ್ಬ ಬಂದಿದ್ದ.. ಮೇಡಂ ಸುನಿಲ್ ಯಾರೋ ಬಂದಿದ್ದಾರೆ ನೋಡಿ, ಏನೋ ಮರ್ಡರ್ ಅಂತ ಹೇಳ್ತಿದ್ದಾರೆ ಅಂದ್ರು.. ಏನಪ್ಪಾ ಇದು ಅಂದ್ಕೊಂಡು ಅವನನ್ನು ವಿಚಾರಿಸಿದೆ.. Receptionಮೇಡಂ ಕೂಡ ಅಲ್ಲೇ ನಿಂತಿದ್ರು.. ಗಬ್ಬು ವಾಸನೆ ಅವನ ದೇಹದಿಂದ ಮೂಗಿಗೆ ಬಡಿಯುತ್ತಿತ್ತು.. "ಯಾರ್ ನೀವು, ಏನ್ ವಿಷ್ಯ" ಅಂತ ಕೇಳ್ದೆ.. " ಸಾರ್ ಬೆಳಿಗ್ಗೆ ಆರ್. ಟಿ.ನಗರದಲ್ಲಿ ಮರ್ಡರ್ ಆಗಿತ್ತಲ್ಲ, ಅದು ನಾನೆ ಮಾಡಿದ್ದೂ ಸಾರ್" ಅಂದ.. ಅರೆಕ್ಷಣ ಕೈಕಾಲು ಸ್ತಬ್ಧವಾಗಿತ್ತು.. ಏನ್ ಹೇಳ್ಬೇಕು, ಏನ್ ಮಾಡ್ಬೇಕು ಅಂತಾನೆ ಗೊತ್ತಾಗದೆ ಸುಮ್ಮನೆ ನಿಂತಿದ್ದೆ.. ಪಕ್ಕದಲ್ಲಿ ನಿಂತಿದ್ದ ಮೇಡಂ ಪರಿಸ್ಥಿತಿಯಂತೂ ಕೇಳೋದೇ ಬೇಡ.. ಆದರು ಕೊಂಚ ಧೈರ್ಯ ೧೨ "ಯಾಕೆ ಮರ್ಡರ್ ಮಾಡ್ದೆ" ಎಂದು ಕೇಳ್ದೆ.. "ಇಲ್ಲ ಸಾರ್ ಆಕೆ ತುಂಬಾನೇ ಕೆಟ್ಟವಳು.. ಅದ್ಕೇ ಕೊಲೆ ಮಾಡ್ದೆ.. " ಅದೇ ನಿರ್ವಿಕಾರ ಮನೋಭಾವದಲ್ಲಿ ಆತ ಮುಂದುವರಿಸಿದ.. "ತುಂಬಾನೇ ಸಹಿಸ್ಕೊಂಡೆ, ಆದ್ರೆ ಅವಳು ನೆಟ್ಟಗಾಗ್ಲಿಲ್ಲ.. ಮಾತ್ರವಲ್ಲ ಮತ್ತೆ ಹಳೇ ಚಾಳಿ ಮುಂದುವರಿಸಿದ್ಳು.. " "ಸಾರ್ ಸ್ವಲ್ಪ ನೀರು ಕುಡೀಬೋದಾ" ಅಂತ ಕೇಳ್ದ.. "ಹಾಂ" ಎಂದು ಹೇಳಿ ನಾನು ತಲೆಯಲ್ಲಾಡಿಸಿದೆ.. ಪಕ್ಕದಲ್ಲೇ ಇದ್ದ ಕ್ಯಾನ್ ನಿಂದ ಗ್ಲಾಸಿಗೆ ನೀರು ತುಂಬಿಸ್ಕೊಂಡು ಕುಡಿದ.. ಪಾಪ ಬೆಳಗ್ಗೆಯಿಂದ ಏನೂ ತಿಂದಿರ್ಲಿಲ್ಲ ಅನ್ಸತ್ತೆ... ನೀರು ಕುಡಿದಾದ ಮೇಲೆ ಮತ್ತೆ ಮಾತಾಡೋಕೆ ಶುರು ಮಾಡ್ದ.. "ಆಕೆ ನನ್ನ ಮಗಳನ್ನೂ ತನ್ನ ಹಾದಿಗೆ ತರ್ತೀನಿ ಅಂತ ಹೇಳೋಕೆ ಶುರು ಮಾಡಿದ್ಳು, ನಂಗೆ ತಡ್ಕೊಳ್ಳೋಕೆ ಆಗಿಲ್ಲ.. ರಾತ್ರಿ ಪೂರ ಜಗಳ ಆಗಿತ್ತು.. ನಾನು ಏನೇ ಹೇಳಿದ್ರೂ ನನ್ ಮಾತನ್ನು ಕೇಳೋ ಪರಿಸ್ಥಿತಿಯಲ್ಲಿ ಆಕೆ ಇರ್ಲಿಲ್ಲ.. ಆಕೆ ಇನ್ನು ಬದುಕೋದು ಬೇಡಾಂತ ನಿರ್ಧರಿಸಿದ್ದೆ.. ಯಾಕಂದ್ರೆ ನಂಗೆ ನಂಗಿತ್ತ ನನ್ ಮಗಳೇ ಹೆಚ್ಚಾಗಿತ್ತು.. 12 ವರ್ಷದ ಆ ಮಗೂ ತಾಯಿ ದಾರಿಯಲ್ಲಿ ಹೋಗೋದು ನಂಗೆ ಇಷ್ಟ ಇರ್ಲಿಲ್ಲ.. " ಇಷ್ಟನ್ನು ಒಂದೇ ಉಸಿರಲ್ಲಿ ಹೇಳಿದ ಆ ವ್ಯಕ್ತಿ ನಂತ್ರ ನಿಧಾನವಾಗಿ ಚೇರ್ ಮೇಲೆ ಕುಳಿತುಕೊಂಡ.. ನಂಗೆ ಭಯ ಆದ್ರೂ ಅದನ್ನು ತೋರಿಸ್ಕೊಳ್ಳದೆ ಪಕ್ಕದ ಚೇರ್ ನಲ್ಲಿ ಕುಳಿತುಕೊಂಡೆ.. "ಆಕೆ ತುಂಬಾ ಜನರ ಜೊತೆಗೆ ಸಂಬಂಧ ಇಟ್ಕೊಂಡಿದ್ಳು ಸಾರ್.. ಅದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ಳು.. ಅದೂ ನನ್ ಗೆಳೆಯರ ಜೊತೆಗೇ... ನಂಗೆ ಮೊದ್ಲು ಇವೆಲ್ಲ ಗೊತ್ತಿರ್ಲಿಲ್ಲ.. ಅವಳ ಮೇಲೆ ತುಂಬಾನೇ ನಂಬಿಕೆಯಿಟ್ಟಿದೆ... ಆದ್ರೆ ನಂತ್ರ ಅವಳ ಖಯಾಲಿ ಗೊತ್ತಾಯ್ತು.. ನಿನ್ನೆ ರಾತ್ರಿ ನಾನು ಮನೆಗೆ ಹೋಗ್ತಿದ್ದಾಗ ಯಾರೋ ಒಬ್ಬ ಮನೆಯಿಂದ ಆಚೆ ಹೋಗ್ತಿದ್ದ.. ಆಕೆಗೆ ಇವಾಗ ಹೋಗಿದ್ದು ಯಾರು ಅಂತ ಕೇಳಿದ್ದಕ್ಕೆ ಫ್ರೆಂಡ್ ಅಂದ್ಳು.. ಯಾವ ಫ್ರೆಂಡ್ ಅವನಿಗೆ ಇಷ್ಟೊತ್ತಲ್ಲಿ ಏನ್ ಕೆಲ್ಸ ಅಂತ ಕೇಳಿದ್ದಕ್ಕೆ ನಂಗೇ ದಬಾಯಿಸಿದ್ಳು... ನಿಮ್ಗೆ ಯಾಕ್ರೀ ಅದೆಲ್ಲ ಅಂತ ನನ್ನನ್ನೇ ದಬಾಯಿಸಿದ್ಳು.. ನಂಗೆ ರೇಗೋಗಿತ್ತು.. ಮಕ್ಕಳ ಮುಂದೆಯೇ ಅವಳ ಕಪಾಳಕ್ಕೆರಡು ಬಾರಿಸಿದೆ.. ಅಷ್ಟಕ್ಕೆ ಆಕೆಯ ಕೋಪ ಮತ್ತಷ್ಟು ನೆತ್ತಿಗೇರಿತ್ತು... ನಂಗೆ ಇಷ್ಟ ಇರೋ ರೀತಿಯಲ್ಲಿ ನಾನು ಬದುಕ್ತೀನಿ ನೀವು ಕೇಳೋಕೆ ಬರ್ಬೇಡಿ ಅಂದ್ಳು.. ನಂಗೆ ಆಕೆಯ ವರ್ತನೆ ಆಶ್ಚರ್ಯ ತಂದಿತ್ತು.. ಆಕೆಯ ಬಗ್ಗೆ ಹಲವಾರು ಕನಸುಗಳನ್ನಿಟ್ಟುಕೊಂಡಿದ್ದೆ... ಏನು ಮಾತಾಡ್ಬೇಕು ಎಂದು ಗೊತ್ತಾಗದೆ ಸುಮ್ಮನಿದ್ದೆ... ನಾನು ಸುಮ್ಮನಿರೋದನ್ನು ಕಂಡ ಆಕೆ ಮತ್ತಷ್ಟು ಮಾತಾಡೋಕೆ ಶುರು ಮಾಡಿದ್ಳು.. ಕೊನೆಗೆ ನಾನು ಒಂದು ಮಾತು ಹೇಳ್ದೆ.. ನೀನ್ ಏನ್ ಬೇಕಾದ್ರೂ ಮಾಡ್ಕೋ, ಆದ್ರೆ ಮಕ್ಕಳ ಮುಂದೆ ಈ ರೀತಿ ಮಾಡೋದು ಸರಿಯಿರಲ್ಲ.. ಮಗಳು ದೊಡ್ಡವಳಾಗ್ತಿದ್ದಾಳೆ.. ನೀನ್ ಇನ್ಮೇಲೆ ಈ ಮನೆಯಲ್ಲಿರ್ಬೇಡ ಅಂತ ಹೇಳ್ದೆ.. ಆಗ್ಲೇ ಆಕೆಯ ನಿಜರೂಪ ನೋಡಿದ್ದು.. ನಾನು ನಂಗೆ ಇಷ್ಟ ಬಂದ ರೀತಿಯಲ್ಲಿ ಇರ್ತೀನಿ, ನನ್ ಮಗಳನ್ನೂ ನಂಗಿಷ್ಟ ಬಂದ ರೀತಿಯಲ್ಲೇ ಬೆಳೆಸ್ತೀನಿ... ಬೇಕಂದ್ರೆ ಅವಳನ್ನೂ ಜೊತೆಗೆ ಕರ್ಕೊಂಡು ಹೋಗ್ತೀನಿ ಅಂದ್ಳು.. ಅವಳ ಆ ಮಾತನ್ನು ನಂಗೆ ಸಹಿಸೋಕಾಗಿಲ್ಲ ಸರ್.. ಆದ್ರೆ ಅವಾಗ ಏನೂ ಮಾಡಿಲ್ಲ.. ಮತ್ತೆ ಬಾರ್ ಗೆ ಹೋಗಿ ಒಂದು ಕ್ವಾರ್ಟರ್ ಕುಡ್ಕೊಂಡು ಮನೆಗೆ ಬಂದೆ.. ಗಂಟೆ ೧೨ ಕಳೆದಿರ್ಬೋದು.. ಕೋಣೆಯಲ್ಲಿ ಬಹುತೇಕ ಕತ್ತಲು ಆವರಿಸಿತ್ತು.. ಮಕ್ಕಳೂ ಜೊತೆಗೇ ಮಲಗಿದ್ರು... ಕೋಣೆಯ ಮತ್ತೊಂದು ಮೂಲೆಯಲ್ಲಿ ಆಕೆ ಮಲಗಿದ್ಳು.. ಮಕ್ಕಳಿಬ್ಬರನ್ನೂ ಎಬ್ಬಿಸಿ ಪಕ್ಕದ ಕೋಣೆಗೆ ಕರ್ಕೊಂಡು ಹೋಗಿ ಮಲಗ್ಸಿದೆ.. ಆ ಘಳಿಗೆಯಲ್ಲಿ ಅದ್ಯಾಕೆ ಹಾಗನಿಸ್ತೋ ಗೊತ್ತಿಲ್ಲ.. ಮನೆಯ ಮುಂದೆ ಬಟ್ಟೆ ಒಗಿಯೋಕೆ ಹಾಕಿದ್ದ ಚಪ್ಪಡಿ ಕಲ್ಲು ಎತ್ಕೊಂಡು ಮನೆಯೊಳಗೆ ಬಂದೆ.. ಮಬ್ಬು ಬೆಳಕಲ್ಲೇ ಮಲಗಿದ್ದ ಆಕೆಯ ತಲೆ ಮೇಲಕ್ಕೆ ಕಲ್ಲನ್ನು ಎತ್ತಿ ಹಾಕಿದೆ.. ಒಂದೆರಡು ಕ್ಷಣ ನರಳಾಡಿದ್ಳು.. ಬಾಯಿಂದ ಸಣ್ಣದೊಂದು ಆರ್ತನಾದ ಹೊರಬಂದಿತ್ತು ಅಷ್ಟೇ.. ವಿಲ ವಿಲನೆ ಒದ್ದಾಡಿ ಅಲ್ಲೇ ಪ್ರಾಣ ಬಿಟ್ಳು.. ರೂಂ ಪೂರ್ತಿ ರಕ್ತ ತುಂಬಿಕೊಂಡಿತ್ತು.. ಸದ್ದು ಕೇಳಿ ಮಕ್ಕಳಿಬ್ಬರೂ ಪಕ್ಕದ ಕೋಣೆಯಿಂದ ಓಡಿ ಬಂದು ನೋಡಿದ್ರು.. ಇಬ್ಬರನ್ನೂ ಎತ್ಕೊಂಡು ಸೀದಾ ನನ್ನ ತಾಯಿ ಮನೆಗೆ ಹೋಗಿ ಬಿಟ್ಟು ಬಂದೆ.. ಬಳಿಕ ರಾತ್ರಿಯಿಂದ ಅಲೆದಾಡೋಕೆ ಶುರು ಮಾಡ್ದೆ.. "
" ಪೊಲೀಸ್ ಹತ್ರ ಸರೆಂಡರ್ ಆಗ್ಬೋದಿತ್ತಾಲ್ಲಾ" ಕೇಳ್ದೆ..
"ಇಲ್ಲ ಸಾರ್.. ನಂಗೆ ನಡೆದ ಘಟನೆಯನ್ನು ಮಾಧ್ಯಮದ ಜೊತೆಗೆ ಹೇಳ್ಕೋಬೇಕಿತ್ತು.. ಹಾಗಾಗಿನೇ ರಾತ್ರಿಯಿಂದ ತಪ್ಪಿಸಿಕೊಂಡು ಇಲ್ಲಿವರೆಗೆ ಹುಡುಕ್ಕೊಂಡು ಬಂದೆ.. ನಂಗೆ ಆಕೆಯನ್ನು ಕೊಲೆ ಮಾಡಿರೋದಿಕ್ಕೇನೂ ಬೇಜಾರಿಲ್ಲ ಸಾರ್.. ಅವಳಂತವ್ರು ಬದುಕಿರ್ಬಾರ್ದು.. ಆಕೆ ಹಾಳಾಗಿದ್ದು ಪರ್ವಾಗಿಲ್ಲ.. ಆದ್ರೆ ನನ್ ಮಗಳನ್ನು ಹಾಳು ಮಾಡ್ತೀನಿ ಅಂತ ಹೇಳಿದ್ಳಲ್ಲಾ... ಅದನ್ನೇ ಸಹಿಸೋಕಾಗಿಲ್ಲ.. " ಅಂತ ಮತ್ತೆ ಹೇಳ್ದ...
"ಹಾಗಾದ್ರೆ ಇವಾಗ ಪೊಲೀಸರು ಬಂದ್ರೆ ಸರೆಂಡರ್ ಆಗ್ತಿಯಾ.." ಕೇಳ್ದೆ..
"ಹೂಂ ಸರ್ ಆಗ್ತೀನಿ.." ಅಂದ..
ಮೊದ್ಲು ಕ್ಯಾಮೆರಾಗೆ ಓರ್ಡರ್ ಮಾಡಿ ಸೀದಾ ಆತನನ್ನು ಕರ್ಕೊಂಡು ಆಫೀಸ್ ಪಕ್ಕದ ಪಾರ್ಕ್ ಗೆ ಹೋದೆ.. ಅರ್ಧ ಗಂಟೆ ಆತನ ಇಂಟರ್ ವ್ಯೂ ತಗೊಂಡೆ.. ಕ್ಯಾಮೆರಾ ಮುಂದೆ ಆ ಕೊಲೆಗಾರ ತನ್ನೆಲ್ಲಾ ಕಥೆಗಳನ್ನೂ ಹೇಳ್ಕೊಂಡ.. ನಂತ್ರ ಅಂದಿನ ಜಾಯಿಂಟ್ ಕಮಿಷನರ್ ಅಲೋಕ್ ಕುಮಾರ್ ಗೆ ಫೋನ್ ಮಾಡಿ ವಿಷಯ ತಿಳಿಸಿದೆ.. ಅಲೋಕ್ ಕುಮಾರ್ ಕೂಡ್ಲೇ ಅಶೋಕ ನಗರ ಪೊಲೀಸರಿಗೆ ನಮ್ಮ ಕಚೇರಿಯತ್ತ ದೌಡಾಯಿಸುವಂತೆ ಸೂಚನೆ ನೀಡಿದ್ರು.. ಮತ್ತೊಂದೆಡೆ ಆರ್.ಟಿ ನಗರ ಇನ್ಸ್ ಪೆಕ್ಟರ್ ಪೂವಯ್ಯನವ್ರಿಗೂ ಸುದ್ದಿ ಮುಟ್ಟಿಸಿ ಅಶೋಕ ನಗರ ಠಾಣೆಯತ್ತ ತೆರಳುವಂತೆ ಹೇಳಿದ್ರು.. ೧೦ ನಿಮಿಷಗಳ ಒಳಗಾಗಿ ಅಶೋಕ್ ನಗರ ಪೊಲೀಸ್ ಠಾಣೆಯ ಹೊಯ್ಸಳ ವಾಹನವೊಂದು ನಮ್ಮ ಆಫೀಸ್ ಮುಂದೆ ನಿಂತಿತ್ತು.. ಸಬ್ ಇನ್ಸ್ ಪೆಕ್ಟರ್ ಲಕ್ಷ್ಮಿ ಮೇಡಮ್ ಜೊತೆಯಲ್ಲಿದ್ರು.. ನಂಗೊಂದು ಥ್ಯಾಂಕ್ಸ್ ಹೇಳಿ ಆ ಕೊಲೆಗಾರ ಪೊಲೀಸ್ ಜೀಪ್ ಹತ್ತಿದ್ದ... ಅಷ್ಟೊತ್ತು ನಂಜೊತೆ ಗೆಳೆಯನಂತೆ ಎಲ್ಲವನ್ನೂ ಹೇಳ್ಕೊಂಡಿದ್ದ ಆ ವ್ಯಕ್ತಿ ಕೈಗೆ ಕೋಳ ತೊಟ್ಕೊಂಡು ಜೀಪ್ ನಲ್ಲಿ ಕುಳಿತಿದ್ದ.. ಹೊಯ್ಸಳ ಜೀಪ್ ಅಶೋಕ್ ನಗರ ಠಾಣೆಯತ್ತ ಹೋಯ್ತು.. ನಾನು ಆಫೀಸೊಳಕ್ಕೆ ಬಂದೆ...

Saturday, October 23, 2010

ನನ್ನ ದೇವತೆ...

ಮನಸ್ಸಿನ ಗುಡಿಗೋಪುರದೊಳಗೊಂದು ಪುಟ್ಟ ದೇವತೆ..
ಅಪ್ಸರೆಯ ಸೊಬಗು, ಸ್ವರ್ಣ ಮಾಲೆ, ನೆರಿಗೆಯ ಸೀರೆ, ಕನಕಾಂಬರ ಹೂವುಗಳಿಲ್ಲದಿದ್ರು ನನಗವಳು ದೇವತೆಯೇ...
ನೆನೆದಾಗ ಕಣ್ಮುಂದೆ ಬರೋ ನಡೆದಾಡುವ ದೇವತೆ..
ಪ್ರೀತಿ, ಸ್ನೇಹದ ದೀಪ ಹಚ್ಚಿ, ವಿಶ್ವಾಸ ನಂಬಿಕೆಯ ಆರತಿ ಎತ್ತಿ, ಕಾಳಜಿಯ ಪೂಜೆ ಸಲ್ಲಿಸಿ ಆರಾಧಿಸ್ತೀನಿ..
ತುಟಿಯಂಚಿನ ಕಿರುನಗೆ ಮತ್ತು ಪ್ರೀತಿ ತುಂಬಿದ ಮಾತುಗಳೇ ನನಗಾ ದೇವತೆಯ ಪ್ರಸಾದ..

Tuesday, December 2, 2008

ಘಾಸಿ ಮಾಡಬೇಡಿ ಈ ಬದುಕಿಗೆ...

ಭಾವನೆಗಳ ಲೋಕದಲ್ಲಿ,
ಭಾವಗಳ ಬದುಕಲ್ಲಿ,
ಪ್ರೀತಿ ಸ್ನೇಹದ ಬೆಸುಗೆಗಳಿಗೆ ಅರ್ಥ ಕಲ್ಪಿಸುತ್ತ,
ವಾಸ್ತವದ ನೆನಪಿನಲ್ಲಿ ವಿಹರಿಸುವ ಪುಟ್ಟ ಜೀವಿ ನಾನು,
ಘಾಸಿ ಮಾಡಬೇಡಿ ಈ ಬದುಕಿಗೆ....